ಪುಟ:ಕನ್ನಡದ ಬಾವುಟ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೦ ಕೋಡಿಯಿ೦ದುದುರಿ ಹನಿ ಹರಳಾಯಿತು ಮೋದವೀಯಲಿಂದು. ಅಣ್ಣ ತಮ್ಮದಿರೆ, ಅಕ್ಕ ತಂಗಿಯರೆ, ಹೇಳುವಿರಿ ಹೆಸರ ; ಚೆನ್ನವಾಗಿಹುದು ಈಗಳು ಹೆಸರು ; ಬಾಳು ಅಂತೆ ಇಹುದೇ ? ಚೆಲುವು ಹೆಸರುಗಳ ನುಡಿವ ನಾಲಗೆಯ ಬಾಳುವೆ ಬರಿದಾಯ್ಕೆ. ಕಳೆದುಕೊಂಡೆವೇ ಹಿರಿಮೆಯ ಚಂದ್ರನ, ಮೂಳವಾಯ್ಕೆ, ಬದುಕು. ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ ಬನ್ನಿ ಸೋದರಿಯರೆ; ಬನ್ನಿರಿ ಎಲ್ಲರು ಆಣೆ ಇಟ್ಟುಕೊಳ್ಳಿ ಚೆನ್ನ ಮಾಡಿ ಬಾಳ, ಹೆಸರಿನ ಚೆಲುವನು ನಾಡಿನ ಬದುಕಲಿ ಮರಳಿ ತೊಳೆಯಿರಿ ; ಒಸಗೆಯ ತನ್ನಿರಿ ತಾಯ್ಯಾ ಡಿರವಿಗೆ, ತರಿಸಿ ನಗೆಯ ಮೊಗಕೆ. ದುಡಿಯುವೆವೆನ್ನಿರಿ ದುಡಿಯಿರಿ ಬನ್ನಿರಿ ನಾಡಿಗೆ ನುಡಿಗಾಗಿ ; ತೊಡಿರಿ ಹಟವನು ಕೊಡಿ ಕೈಯಾಣೆಯ; ಆಡುವ ನುಡಿ ನಡೆಸಿ, ಕತ್ತಲು ಮುಚ್ಚಿಹ ಬಾಳಿರುಳಾಳಕೆ ಆಸೆಯ ಚಂದ್ರನನು ಮತ್ತೆ ತನ್ನಿ ರಿ, ಬೆಳಕಲಿ ನಡೆಯಿರಿ ; ಹೇಸಿ ಸೋ೦ಬತನವ. ಮುತ್ತು ಮಾಣಿಕನ ಜೋಳದ ತೆರದಲಿ ಹರಿಯಿಸಿ ನಾಡಿನಲ್ಲಿ ; ಉತ್ತಮ ಚರಿತೆಯ ಚಿತ್ರ ಪತಾಕೆಯ ಮೆರೆಯಿಸಿ ಬಾನಿನಲಿ. ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್)