ಪುಟ:ಕನ್ನಡದ ಬಾವುಟ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೫ ತುಂಗಭದ್ರೆಯ ಕೂಸಿನುಸಿರಡಗಿದೆ ಮಂಗಳದ ಆ ಹೆಸರು ಹದಗೆಟ್ಟಿದೆ. ಸಂಗಡಿ ಬನ್ನಿ ರೈ ! ಕನ್ನಡಿಗರೆ! ಹಿಂಗದಿರೆ ! ಪ್ರೇಮದೊರೆ ಕನ್ನಡಿಗರೆ ಶತಮಾನ ನಾಲ್ಕಾಯ್ತು ವಿಜಯನಗರಿ ಅತಿ ನಿದ್ದೆ ಗತಿಹೊಂದಿ ಅಮರ ನಗರಿ ಮತಿಯಿತ್ತು ಧೃತಿಯಿತ್ತು. ಕನ್ನಡಿಗರೆ ಗತಿಸಿರುವ ಕೀರ್ತಿಪದ ಗಳಿಸಿಕೊಳ್ಳಿರಿ ಗಾಯವನೆ ಮಾಡಿದನು ಮುಸಲಬಂಧು ಕಾಯದಲೆ ಕೊಲ್ಲಿಸಿದ ಕನ್ನಡಿಗನೆಂದು | ತಾಯೆ ಈ ನುಡಿ ಸಲ್ಲ ! ಬಲ್ಲ ವಿಧಿಯು ! ಈ ಯುಗಕೆ ಅವರನ್ನು ಮನ್ನಿಸವ್ವ ಭಿನ್ನ ಮೂರ್ತಿಗಳನ್ನು ನಿನ್ನಂಕದಲ್ಲಿ ಇನ್ನೆ ಷ್ಟು ದಿನವಿಟ್ಟು ಗೋಳಾಡುವಿ? ಮುನ್ನಿ ನಾ ನೆನಹಿನಲಿ ಹೊನ್ನು ಹೊಳೆಯ ಕನ್ನಡಿಗ ಹರಿಸುವನು ಕಣ್ಮರಸಿಕೊ. ಹೊಯಿಸಳ ( ಎ. ಲಕ್ಷ್ಮಣರಾವ್) ೩೩. ಹಂಪಿ- ವಿಜಯನಗರ ದರ್ಶನ ತಾಳವಿಲ್ಲದಲೆ ಬೇತಾಳನಂದದಿ ಕುಣಿವ ಕಾಳ ನರ್ತಕನ ಕಾಲೆಳಗೆ ತೊತ್ತುಳಿಗೊಂಡು ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿ. _ಗಿದಿರಾಗಿ ಬಂದು ನಿಂದು. ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು ಬೀಳುಗಳ ಬದಿ ಬದಿಗೆ ಬೀಳುಗಳ ಬಾಳುಗಳು | ಕಾಳ ರಕ್ಕಸನ ಕಡೆಕೂಳು- ಬಾಳಕವಾದ ನಾಡ ನಡುಮನೆಯ ಕಂಡೆ. ಕನಸೆನಿ, ಕಾಡುಪಾಲಾದ ಭೂಪಾಲಕನ ಮನಸೆನಲೊ, ಮೋಡದೊಳು ಮೂಡಿ ಮಸುಳುವ ಚಿತ್ರ ವೆನಿ, ಕಂಪಡಗಿ ಪೆಂಪುಡುಗಿ ಬಣ್ಣವು ಕೆಟ್ಟ ನಿರ್ಮಾಲ್ಯ ಮಾಲೆಯೆನಲೊ ?