ಪುಟ:ಕನ್ನಡದ ಬಾವುಟ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೆನಸಿ ಕೃತಕರ್ಮ ಪಶ್ಚಾತ್ತಾಪದಿಂ ಬೆಂದು ಜನಿಸಿ ಸುಜ್ಞಾನ, ( ಉದಾರಮಾಡಿರಿ' ಎಂದು ಮನಸಿನಿಂದೆರಗಿರುವನೆನಿ, ಪಾತಕಿ ಬಂದು ಪಾವನನ ಚರಣಗಳಿಗೆ. ಬಿದ್ದ ರಾಜ್ಯ ವಿದಲ್ಲ ಉದ್ದುದ್ದವಾಗಿದ್ದು ಎದ್ದ ರಾಜ್ಯದ ಮೊಳಕೆಯಿದು, ಇದರ ಬಳಿಯಲ್ಲಿ ಇದು ಸ೦ಜೀವನವ ಜಪಿಸುವಂತಹ ಯೋಗಿ ಕೊಂಪೆಹಂಪೆಯು ಇದಲ್ಲ ಬುದ್ದಿ ಯೆಣಿಸಿತು, ಅಂತರಂಗದಧಿನಾಯಕನು ಸುದ್ದಿಯನು ಸೂರುವೊಲು ಬುದ್ದಿಯನು ಮಾರುವೊಲು ಎದ್ದು ಹೇಳಿದನೊ ತಾ ಕನಕನೊಡೆಯನು ಪೇಳ ಶುದ್ದ ಮುಂಡಿಗೆಯಿದೆಂದು ಕರ್ಮಯೋಗಿಯ ಬಳಿಗೆ ಯೋಗೀಶ್ವರನು ನಿಂದು ಕರ್ಮದ ಅಕರ್ಮದೊಳ ಮರ್ಮಮಂ ತಿಳಿಸಿ ಸದ್ಧರ್ಮಮಂ ಸತತ ನಡೆಸಿದರೆ ಧ್ರುವವಿಜಯವೆಂ ದಂದು ತೋರಿಸಿದ ತೆರದಿ. ಧರ್ಮ ಕರ್ಮದ ಪುರಾತನ ಪುರಗಳಿವು ಪೂರ್ವ ಧರ್ಮ ಬಲದಿಂದೇರಿ ಕರ್ಮ ಬಲದಿಂದಿಳಿದು ಮರ್ಮದೊಳು ನೆಡುವಂತೆ ಸಪ್ರಯೋಗಿಕವಾಗಿ ಕಲಿಸುವುವು ತತ್ವವೆಂದು. - ದ. ರಾ. ಬೇಂದ್ರೆ ೩೪. ಕನ್ನಡ ದಾಸಯ್ಯ ಬೇಡಲು ಕನ್ನಡ ದಾಸಯ್ಯ ಬಂದಿಹ " ನೀಡಿರಮಾ! ತಡಮಾಡದಲೇ || ಪ || ಹಾಡೊಂದನಾತನು ಹೊಸದಾಗಿ ಮಾಡಿಹ ಕೊಡಿರಿ ಕೇಳಿರಿ ಹಾಡುವನು || ಅನು || ಕನ್ನಡ ಮಾತಿನ ತಂದೆತಾಯಿಗಳಿಂದ ಚೆನ್ನ ಚೆನ್ನೆ ಯರೆಲ್ಲ ಹುಟ್ಟದಿರಿ. ಕನ್ನಡ ಮಾತಿನ ಜೋಗುಳವನು ಕೇಳಿ ಕನ್ನ ಡ ತೊಟ್ಟಿಲೊಳಾಡಿದಿರಿ.