ಪುಟ:ಕನ್ನಡದ ಬಾವುಟ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೮ ಕಬ್ಬಗಳೆಲ್ಲಾ ರನ್ನ ನ ಕಬ್ಬ; ತಿಂಡಿಗಳೆಲ್ಲಾ ಬುಂದಿಯ ಲಾಡು ಧರೆಯೊಳೆಗೆಲ್ಲಾ ಕನ್ನಡನಾಡು ನಾಡಿನ ಹಾಡನು ಹಾಡುತ ಬನ್ನಿ ! ದಸರೆಯ ಹಬ್ಬವ ನೋಡಲು ತನ್ನಿ ! ಮೋಡಗಳೆಲ್ಲವು ಸರಿದುವು ಹಿಂದೆ ಆಗಸವೆಲ್ಲಾ ಬಿಳುಪಾಯು. ಚಳಿಗಾಲೆಂಬೋ ಸಗ್ಗ ದ ಅಗಸ ಗಗನವ ತೊಳೆದನು ! ನೆನಪಾಯ್ತು! ಬೆಳಕೇ ಇಲ್ಲದ ಮಳೆಗಾಲ | ಹಿಂದಕೆ ಸರಿಯಿತು ಆ ಕಾಲ ಮೂಡಿದೆ ಬೆಳಕಿನ ಚಳಿಗಾಲ ಜ್ಞಾನವ ಬೀರುವ ನವಕಾಲ * ಮುಗಿಲಿನ ಮಳೆ ಮುಗಿಯಿತು' ಅನ್ನಿ ನಗುಮಳೆಯನು ಸುರಿಯುತ ಬನ್ನಿ ! * ಸೀಮೋಲ್ಲಂಘನ ಮಾಡಿರಿ ಇಂದು ಭೀತಿಯ ಸೀಮೆಯ ದಾಟುತಲಿ, ಧೈರ್ಯಧ್ವಜವನು ಮೆರಸುತ ಮುಂದು ನಡೆಯಿರಿ ನೀತಿಯ ನಾಡಿನಲಿ, ಧರ್ಮದ ಗಡಿಯನ್ನು ದಾಟಲು ಬೇಡಿ ಕರ್ಮದ ಕೊಲನು ಬಿಡದಿ ಓದಿ, ಮರ್ಮವ ತಿಳಿದೆಲ್ಲರು ಹಾರಾಡಿ ಚರ್ಮದ ದೇಹದ ಸಾರ್ಥಕ ಮಾಡಿ, * ಬನ್ನಿ ಯ ಗಿಡ ಬಂದಿತು' ಅನ್ನಿ ಚಿಣ್ಣರೆ, ನೀವೆಲ್ಲರು ತನ್ನಿ, * ಹಿಂದಿನ ಕಾಲವು ಹಿಂದಕೆ' ಅನ್ನಿ , ಮುಂದಿನ ಕಾಲವು ನಮುಂದೆ, ನಾಡಿನ ಯುವಕರೆ, ಮುಂದಕೆ ಬನ್ನಿ ಮುದುಕರು ನಿಲ್ಲಲಿ ಹಿಂದ್‌ಹಿಂದೆ, ಹೊಸ ಹೊಸ ಮತಗಳ ಬಗೆಬಗೆ ಹುರುಪಿನ - ಚೆನ್ನ ಚಟಾಕಿಯ ಹಾರಿಸುವ ಕೆಂಪಿನ ವರ್ಣದ ಕೆಚ್ಚೆದೆ ಬಣ್ಣದ ಕಿಡಿಗಳನವರಿಗೆ ತೋರಿಸುವ.