ಪುಟ:ಕನ್ನಡದ ಬಾವುಟ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೆರೆಯಿಟ್ಟು ಕಾಡಿದಾ ಖಳನನು ಕೊಂದು, ಅರಸರರಸಿಯರೆಲ್ಲ ಹರಸುತಿರೆ, ಬಂದು ಕೈ ಹಿಡಿದ ರಾಣಿಯನು ನಗುತ ಕರೆತಂದು, ಮುದ್ದಾದ ಮೈಸೂರ ತಾವರೆಯ ತಂದು, ದೇವಿ ಚಾಮುಂಡಾಂಬೆಯೆದಿರಿನಲಿ ನಿಂದು, ಕೈ ಮುಗಿದು ಬೇಡಿದನು ಯದುರಾಯನಂದು : ಈ ಕಾಯಿ, ತಾಯಿ, ಕೃಪೆಯ ತೋರಿ, ನಿನ್ನ ಮಗನನು ; ನಲುಗಿ, ನಿನ್ನ ನೆರಳ ಸೇರಿ ನಲಿವ ಹೆಣ್ಣನು. ಧರದೊಲವ ನಮಗೆ ನೀಡು, ಸತ್ಯ ನಿಲಿಸುವಂತೆ ಮಾಡು, ಹಿರಿಯ ಮೈತ್ರಿಗಳನ್ನು ಕೂಡು, ಕರುಣದಿಂದ ಬಿಡದೆ ನೋಡು, ಕಾಯಿ, ತಾಯಿ, ನಮ್ಮ ನಾಡು, ನಮ್ಮ ಮನೆಯನು, ನಡಸಿ, ಬೆಳಸಿ, ಹಿರಿಮಮಾಡು ನಮ್ಮ ಮನೆಯನು.” ಇಂತೆಂದು ಬೇಡಿದನು ಮೈಸೂರ ಮನೆತನದ ಮೊದಲಿಗನು ಬಾಗಿ, ಮನಮುಳುಗಿ ಭಕ್ತಿಯಲಿ. ಚಿತ್ರದಾಳುಗಳಂತೆ ನಿಶ್ಯಬ್ದವಾಗಿ, ಮೂಡುವಚ್ಚರಿ ಹದವ ಹಾರುತ್ತ, ಸಭೆಯೆಲ್ಲ, ಎವೆ ಹೊಯ್ಯದಲ್ಲಿ ನಿಂದಿಹುದು, ಅಹ ! ಅಲುಗಿತಭಯಹಸ್ತದ ಹೂವು; ಸಿಡಿದು ಮುಡಿಯಲ್ಲಿ ನೆಲಸಿದುದು, ಯದುರಾಯ ಮಕುಟದಲಿ, ದೇವಿಕೆರೆ ಸಂಪಗೆಯದೊಂದು. ಕೂಗಿದಳು ನೆರವಿಯಲಿ ಮುತೈದೆ, ಬೆದರಿದಳು ಮೈ ಮೇಲೆ ಬಂದು, ಕೆದರಿದಳು ಬಿರಿದಲೆಯ ನರೆನವಿರ, ಬಿರುಬಿರನೆ ಕಿರುಹಿ, ನಕ್ಕು, ಕದಡುಬಗೆ ತಿಳಿಯಾಗಿ, ದೂರದೆಸೆ ಬಳಿಯಾಗಿ, ಮು೦ದಹುದ ಹೊಕ್ಕು, ನುಡಿದಳವಳಂದುಹಣುದುಕಿ ನೋಟವನು ನುಡಿದಳವಳಂದುಗಿರಿಯ ನೆತ್ತಿಯ ಮೇಲೆ ಗಂಭೀರ ಘೋಷದಲಿ ಗುಂಪಿನಲಿ ಬಂದು ಮಳೆ ಕುಡಿವ ಹಕ್ಕಿವೊಲು ಕುಡಿಯುತಿರೆ ಕನ್ನಡದ ಕಲಿಗಳಾ ಸಿರಿಯ, ಸಾವನದ ಮುತ್ತೈದೆ ಸವಿಗರೆದು ನುಡಿದಳಾ ಮೈಸೂರ ಸಿರಿಯ, ಕನ್ನಡದ ನಾಡ ಸಿರಿಯ.