ಪುಟ:ಕನ್ನಡದ ಬಾವುಟ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

*೧೩೮

ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು
  ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ
ವಿಗತ ಸೌಮನಸರುಂ ವಿಪರೀತ ಚರಿತರುಂ
ವಿಮುಖತೆಯನಾನಲದರಿಂದ ನಿಮಗೇ೦
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು ಪದವನನು
ಕರಿಸ ನಾದಿತ್ರಗಳ ಸೂಕ್ಷ್ಮದಿಂದೆ
ನೆಳಲನಿತ್ತೀ ಲತಾವಳಿ ನಿಮ್ಮ ನಾದರಿಸು
ಗೆಂದಿಗುಂ ತಂಬೆಲರ ಸುರಭಿಯಿ೦ದೆ ||

ನಗುತ ನಲಿಯುತ ಮೆರೆದು ಹಾವಭಾವಗಳನೆಸೆದು
ಮಂಜು ಜಲ್ಪವ ತೋರಿ ಮುಗ್ಗ ವೀಕ್ಷಣವ ಬೀರಿ
ಕಠಿನರಾಗದೆ ಕಾಲದೌ ಷ್ಟದಿಂ ಕುಂದುವಡದೆ
ಶುಷ್ಕ ಹೃದಯರ್ಗೆ ನೀಂ ಸೌಹೃದನ ನೀಡುತಿಹುದೌ ||

ಅವ್ಯಕ್ತ ನಿನದದಿ೦ದಕಲಂಕಿತಾಂಗದಿಂ
ದನ್ಯೂನ ತರುಣತೆಯಿನಮಿತಯಶದಿಂ
ಚಿರಕಾಲಮೆಸೆವುದೇ ಚಿತ್ರವೇಧನಿಯರಿರ
ಕುದಿವ ಲೋಕಕೆ ಮುದದ ತಣಿವ ಬೀರಿ

ಸೌಂದರ್ಯವೇ ವಿಶ್ವತಮಾ ಪರತತ್ವ.
ಭಾಸವೇ ಸೌ೦ದರ್ಯಮೆನುತ ಸಾರಿ
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ

ಪೊಳೆಯಿರೌ ಸರಸ ಜೀವನಮಂತ್ರ ಗುರುಗಳೆನಿಸಿ
ಪಳಿಯಿರೌ ಮಧುರಭಾವವ ಪಳಿನ ವಿಕೃತಮತಿಯಂ
ಕಳೆಯಿರೌ ರಸಕಲಾ ವಿಮುಖತೆಯ ಜನದ ಮನದಿಂ
ಬೆಳೆಯಿರೌ ಪ್ರೇಮ ಧರ್ಮೊದ್ಭರಣ ವಿಧಿಯೊಳೆಂದುಂ

ಡಿ. ವಿ. ಗುಂಡಪ್ಪ

೪೦.
ವನಸುಮ ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ ಹೇ ದೇವ
ಜನಕೆ ಸಂತಸವೀವ
ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯಿ ಬಿಡದೆ || ಅನು ||