ಪುಟ:ಕನ್ನಡದ ಬಾವುಟ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಮವ ಸುಡುವ ಸಾಮರ್ಥವುಂಟಾತ್ಮಗೆ ಕರ್ಮದೊಳಡಗಿರುತಿಹನು ಕರ್ಮವರಿದು ತಾನು ತನ್ನ ನೋಡಿದರೆಂಟು ಕರ್ಮವ ಸುಟ್ಟುರುಹುವನು ಧ್ಯಾನದಿಂದಲ್ಲದೆ ಕರ್ಮ ನಿರ್ಜರಿಸದಾ ಧ್ಯಾನ ತಾನೆಂತುವೆಂದೆನಲು ನಾನಾಚಿಂತೆಯಳಿದು ಮನವಾತ್ರ ಸ೦ ಧಾನದೊಳಿರಲದೆ ಧ್ಯಾನ ಈ ಕಾಲನಾಕಾಲವೆನಬೇಡ ನಿಶ್ಚಯ - ದೇಕ ಧರ್ಮನ ಮಾಡಿದವರು ಲೌ ಕಾಂತಿಕ ದಕ್ಷಿಣೇ೦ದ್ರರೆನಿಸಿ ಪುನ - ರೇಕ ಜನ್ಮಕೆ ಮುಕ್ತರಹರು ನೋಡಿ ನೋಡದ ನುಡಿದಾಡಿ ನುಡಿಯದೆಡೆ ಯಾಡಿ ನಡೆಯದ ಮಹಾತ್ಮಾ, ಕೂಡೆ ಕೂಡೆನಗೆ ಚಿತ್ಕಳೆಯ ಬೆಳಕನುಂಟು ಮಾಡು ನಿರಂಜನ ಸಿದ್ಧಾ ನಿ೦ದಲ್ಲಿ ನಡೆದಲ್ಲಿ ಕುಳಿತಲ್ಲಿ ಸರ್ವತ್ರ - ಕುಂದದೆ ಕುಶಲ ಲೀಲೆಯೊಳು ಸಂಧಿಸುವಭವ ನನ್ನೆ ದೆಯೊಳಗಿರು ಚಿದಾ - ನಂದ ಚಿದಂಬರ ಪುರುಷಾ ತಿ೯ವೆಳಗಿನ ತೀರ್ಥರೂಪವೆ ತಿಂಗಳ ಬೆಳಗಿನೋಳಾದ ಪುತ್ತಳಿಯೆ ತಳುಮಾಡದೆನಗೆ ಸನ್ಮತಿ ದೋರು ಸುಜ್ಞಾನ ನಿಳಯ ನಿರಂಜನ ಸಿದ್ಧಾ ಹಿಂದು ಮುಂದೆಡಬಲ ಹೊರಗೊಳಗಡಿ ಕಡೆ ಯೆಂದೆನ್ನದನ್ನತ ಸ್ವರೂಪಾ ಎಂದೆಂದು ಎನ್ನ ಚಿತ್ತದೊಳಿರು ಸಚ್ಚಿದಾ ನಂದ ಚಿದಂಬರ ಪುರುಷಾ ಉಸುರೆಂಬ ಕರಗಸದಿಂದ ದೇಹಾತ್ಮರ ಬೆಸುಗೆಯ ಬಿಡಿಸಿ ನೋಡಿದರೆ ಮಸುಳದೆ ತೋರ್ಪ ಮಹಾತ್ಮ ನೀನೆನಗೊಳ್ಳ ನೆಸಗು ನಿರಂಜನ ಸಿದ್ಧಾ