ಪುಟ:ಕನ್ನಡದ ಬಾವುಟ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯ ಮನೆಯ ಹೊಕ್ಕಾದರೆಯೂ, ಸಲೆ ಕೈ ಕೂಲಿಯ ಮಾಡಿಯಾದರೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದರೆ, ತಲೆದಂಡ, ಕೂಡಲಸಂಗಮದೇವ. ಹುತ್ತವ ಬಡಿದಡೆ, ಹಾವು ಸಾಯಬಲ್ಲುದೇ ಅಯ್ಯ? ಘೋರ ತಪವ ಮಾಡಿದಡೇನು ? ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ ಕೂಡಲಸಂಗಮದೇವ ? ಒಲೆಯ ಬೂದಿಯ ಬಳಿಯಲು ಬೇಡ, ಒಲೆ ಯ೦ತೆ ಹೂ ಸಿ ಕೊಂಡಿಪ್ಪುದು ಹುಸಿ, ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ? ಒಂದನಾಡ ಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ ಕೂಡಲಸಂಗಮದೇವ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ. ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ. ಇದೇ ನಮ್ಮ ಕೂಡಲ ಸಂಗಮದೇವನನೊಲಿಸುವ ಪರಿ, ಎನ್ನ ನರೊಲಿದು ಹೊನ್ನ ಶೂಲದಲಿಕ್ಕಿದರು, ಎನ್ನ ಹೊಗಳಿ ಹೊಗಳಿ. ಎನ್ನ ಹೊಗಳೆ ಎನ್ನ ಮೈಗೊಂಡಿತಲ್ಲಾ! ಅಯ್ಯಾ ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ! ಅಯ್ಯಾ, ನೊಂದೆನು, ಸೈರಿಸಲಾರೆನು. ಕೂಡಲ ಸಂಗಮದೇವ, ನೀನೆನಗೊಳ್ಳಿ ದನಾದರೆ, ಎನ್ನ ಹೊಗಳತೆಗಡ್ಡ ಬಾರಾ, ಧರ್ಮಾ. ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ, ಕೂಡಲಸಂಗಮದೇವಾ ಎನಗಿದೇ ದಿಬ್ಯ. ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟ, ಸಂಸಾರ ವೃಥಾ ಹೋಯಿತ್ತಲ್ಲಾ ! ಕರ್ತೃ ಕೂಡಲಸಂಗಮದೇವಾ, ಇವ ತಪ್ಪಿಸಿ ಎನ್ನ ನು ರಕ್ಷಿಸಯ್ಯಾ, ಎನ್ನ ಚಿತ್ರ ಅತ್ತಿಯ ಹಣ್ಣು ನೋಡಯ್ಯಾ. ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯಾ, ಪ್ರಪಂಚಿನ ಡಂಬಿನಲ್ಲಿ ಎನ್ನ ನೊಂದು ರೂಪುಮಾಡಿ, ನೀವಿರಿಸಿದಿರಯ್ಯಾ ಕೂಡಲಸಂಗಮದೇವ. ನಾನೊಂದ ನೆನೆದರೆ ತಾನೊಂದ ನೆನೆವುದು. ನಾನಿತ್ತಲೆಳೆದರೆ ತಾನು ಲೆಳೆವುದು, ತಾ ಬೇರೆ ಎನ್ನ ನಳಲಿಸಿ ಕಾಡಿತ್ತು. ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ. ಶೂಲದ ಮೇಲಣ ಭೋಗವೇನಾದರೇನೋ ?, ನಾನಾವರ್ಣದ ಸಂಸಾರ ಹಾವ ಹಾವಡಿಗನ ಸ್ನೇಹದಂತೆ, ತನ್ನ ತೃವೇ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವ ?