ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೌ ಪದೀ ಸತ್ಯಭಾಮಾ ಸಂವಾದಪರ್ವ 251

ಹದಿನೆಏಳನೆಯ ಸ೦ಧಿ

ಸೂಚನೆ:
ವಿಪಿನದಲಿ ಪಾಂಚಾಲಿ ಭಕುತಿಯ
ತಪದಿರೆ ದೂರ್ವಾಸನುಗ್ರವ
ನಪಹರಿಸಲಸುರಾರಿ ಬಂದನು ಪಾಂಡವರ ಬಳಿಗೆ ||

  • ಪಾಂಡವರು ದೈತವನದಲ್ಲಿ ವಾಸಮಾಡಿದುದು,


ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ನಿನ್ನವರು ಬನದಲಿ
ಹತ್ತುವರುಷವನಿಂತು ನೂಕಿದರಿರದೆ ಲೀಲೆಯಲಿ |
ಉತ್ತಮೋತ್ತಮಯಾಮುನಾನದಿ
ತೀರ್ಥಸೇವಾಶೀಲದಿದ್ದರು
ಮತ್ತೆ ಮುನಿಸನಸಹಿತ ಹರುಷದಿ ದೈತಕಾನನದಿ ||೧||

  • ದೂರ್ವಾಸರ ಆಗಮನ


ಆಸುಯೋಧನನೇಕಛತ್ರವಿ
ಲಾಸದುರ್ವಿರಾಜಪದವಿ
ನ್ಯಾಸವಿಭವದ ಸುಲಭಸಾಖ್ಯವನನುಭವಿಸುತಿರಲು |
ಭೂಸುರವ್ರಜವೆರಸಿ ವರದಿ
ನ್ಯಾಸಮುನಿಜನಸಹಿತಲಾದೂ
ರ್ವಾಸಮುನಿಪತಿ ಬಂದು ಪೊಕ್ಕನು ಹಸ್ತಿನಾಪುರವ |

-

  • ಈ ಸಂಧಿ ಬಹು ಪುಸ್ತಕಗಳಲ್ಲಿ ಇರುವದಿಲ್ಲ