ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ. [16 ನೆಯ ಗುರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇನೆ ಸಂಜೆ ನುಡಿಸಿ ತುಂಬಿಯನೆಲರ ದಟ್ಟಡಿ | ಯಿಡಿಸಿ ಗೂಡಿನ ತೊಟ್ಟಿಲೊಳು ಖಗ | ವಿಡಿದು ನಗಿಸಿಯೆ ಕುಮುದಿನಿಯ ತೂಕಡಿಸಿ ಕಮಲಿನಿಯ || ಕಡುತಮವನಬುಟೆಂದು ಕೋಕನ | ಬೆಡಗನಂಜೆಸಿ ಹಲವು ಮಕ್ಕಳ | ಹಡೆದ ತಾಯಂದದಲಿ ಸಂಧ್ಯಾ ಮಡದಿಯೊಪ್ಪಿದಳು || ಗೋದೋಹನ ಅಡಿಯನವನಿಯೊಳೂ ಕಂಗಳ | ಮಡದೊಳೊಲವಿಂದಾತು ಕಂದಲ | ತೊಡೆಯೊಳಿಲಿಕಿ ಕಟಾಕ್ಷದೀಧಿತಿ ದುಗ್ಗಧಾರೆಯಲಿ || ತೊಡರೆ ಸೆಳೆನಡು ಬಳುಕೆ ಸಡಿಲಿದ | ಮುಡಿಯ ಗೋಣಿನೊಳಂತೆ ತನು ಬೆಮ | ರಿಡುತ ಸುರಭಿಯ ಕಳವಬಲೆಯರ ಕುವರನೀಕ್ಷಿಸಿದ || ವೇಶ್ಯಾಸ್ತಿಯರು ಮಟಿಲ ಸರವಿಯ ಹೊಸವ ಕೊರಡಿನೊ | ಳಿಳೆಯ ಕೋವ ಮರೀಚಿಕಂಗಳ | ತಳೆವ ಧರೆಗಗನವನು ತಾಳವ ಮಾಡಿ ಬಾಜಿಸುವ || ಶಿಲೆಯೊಳಗೆ ಮುಟಿಗುವ ತುಷಾರವ | ನಳೆವ ನೀರೊಳು ಬೆಣ್ಣೆಗಳೆವ | ಸ್ಥಳದ ವೇಶ್ಯಾಮಾತೆಯರನವನೀಶನೀಕ್ಷಿಸಿದ |

  • ತವಸ್ತಿಗಳು ಹೃದಯದಮಳಜ್ಯೋತಿಯನು ಬೆಳ | ಗದೆ ನವಾರತಿಯೆತ್ತಲೇನಹು | ದೊದವಿದೊಳಗಣ ಮಲವ ತೊಳೆಯದೆ ದೇಹಕಲ್ಕ ಷವ ||

ಮುದದಿ ತೊಳೆದೊಡದೇನು ಕರ್ಮವ | ಬಿದಿರಿಸದೆ ಮುಕ್ತಿಯನು ಸಾರುವ | ವಿಧವದೆಂತೆಂದವನಿಪತಿ ಜದನು ತಪಸ್ವಿಗಳ | ನೀತಿ ಕೂಟಸಾಕ್ಷಿಗೆ ಗುರುವಿನಾಜ್ಞೆಯ | ದಾಟಿದಗೆ ಪಾಷಂಡಿಗಧಮ್ಗೆ | ತೋಟಿಗೆಳಸುವಗತಿಜಡಗೆ ಪತಿಕಾರ್ ಘಾತುಕಗೆ || ಕೌಟಿಲಂಗೆ ಬಕವ್ರತಗೆ ಬೂ | ತಾಟವೆಸಗುವಗನ್ಯ ಮರ್ವೆ | ದ್ಘಾಟಕಗೆ ಪರನಿಂದಿತಂಗಿಹಪರಗಳಿಂದ || ಧರಣಿಯೊಳಗತ್ಯಂತವಿಷಯಾ | ತುರರಿಗಾಯುರ್ನಷ್ಟವಬಿಳ್ಳೆ | ಶ್ವರಿಯವೋಸರಿಸುವುದು ಕೀರ್ತ್ಯ೦ಗನೆಗೆ ಕೇಡಹುದು |