ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 80 ಕರ್ಣಾಟಕ ಕವಿಚರಿತೆ. [15 ನೆಯ

               ಅವುಮಯವೆಗಳೆರಡ | ರಕ್ತದಿಂ ಹುಸಿದಿಟಗ |
               ಳಿರಿಬಿಸಿ೦ ನಾನು ನೀನೆಂಬುಭಯದ || |
               ಸಂ'ಕಿಂ ಮನವೆಂಬು | ದಿ ಕುವರ ನೀ ಜಾಗ್ರ |
               ದುಮಿಸುಮಧ್ಯದೊಳ್ ಕನಸಿನಂತೆ ||
                                     -----------------------
                                      ಬತ್ತಲೇಶ್ವರ ಸು, 1430
        ಈತನು ಒಂದು ರಾಮಾಯಣವನ್ನು ಬರೆದಿರುವಂತೆ ತೋರುತ್ತದೆ. ಈ ಗ್ರಂಥದಲ್ಲಿ ಕೆಲವುಕಡೆ
                ಹರಿಕಥೆಗೆ ಸರಿ ಹುಟ್ಟದಿದನಾ | ದಗಿಸಿದವರಿಹಸರವ ಗೆಲುವರು |
                ಧರೆಗೆ ಸಯನಿತ್ತ ವರಕವಿ ಬತ್ತಲೇಶ್ವರನು ||
                ಬಂದನೋಲಗದೊಳಗೆ ವಾನರ | ವೃಂದ ನಲಿನಲಿದಾಡುತಿರಲಾ |
                ನಂದದಲಿ ವರವಿತ್ತ ರಘುಪತಿ ಬತ್ತಲೇಶ್ವರಗೆ ||

ಎಂದು ದೊರೆಯುತ್ತದೆ, ಇನ್ನು ಕೆಲವುಕಡೆ ನಿರ್ವಾಣನಾಯಕ, ನಿರ್ವಾಣಲಿಂಗ ಎಂಬ ಅಂಕಿತಗಳು ಇವೆ. ಇವು ಬತ್ತಲೇಶ್ವರ ಎಂಬುದಕ್ಕೆ ಪರ್ಯಾಯಾಯಶಬ್ದಗಳಾಗಿರಬಹುದು. ಮುದ್ರಿತವಾಗಿರುವ ನೀತಿಸಾರ ವೆಂಬ ಗ್ರಂಥದಲ್ಲಿಯ

                 ವರರುಚಿ ಕಾಳಿದಾಸ ಸುಕುಮಾರಕುಮಾರಕವ್ಯಾಸ ಬಾಣನುಂ |
                 ಹರಿಹರಸಾರ್ವಭೌಮಕವಿ ರನ್ನ ನು ತೇಚುಗ ದುರ್ಗಸಿಂಹನುಂ ||
                 ವರಕವಿಬಲೇಶ್ವರನು ರಾಘವನಗ್ಗಳ ರುದ್ರಭಟ್ಟನುಂ |
                 ತುರಗ ಮಯೂರ ಹಂಪುಗನು ಕುಂಚವುಂಡಿಯರೇ ಕವೀಂದ್ರರು ||
ಎಂಬ ಪದ್ಯದಲ್ಲಿ ಈ ಕವಿಯ ಹೆಸರು ಹೇಳಿದೆ, ಇವನು ವೀರ ಶೈವಕವಿ. ಗುರುರಾಜಚಾರಿತ್ರದಲ್ಲಿ (ಸು, 1656) ದೇವರಾಯನ (1419-1446) ಆಳಿಕೆಯಲ್ಲಿ ಪಂಪಾಪುರದಲ್ಲಿದ್ದ ಕರಸ್ಥಲದ ನಾಗಲಿಂಗ, ವೀರ ಸ್ಟೋಡೆಯ ಮುಂತಾದ 101 ವಿರಕ್ತರ ಗೋಷ್ಟಿಯಲ್ಲಿ ಈತನನ್ನೂ ಸೇರಿಸಿರುವುದರಿಂದ ಇವನ ಕಾಲವು ಸುಮಾರು 1430 ಆಗಬಹುದು.
       ಪ್ರಹ್ಲಾದ ಚರಿತ್ರೆಯನ್ನು ಬರೆದ ಚೆನ್ನಿಗನು (ಸು. 1700) ಈತನನ್ನು ಸ್ತುತಿಸಿದ್ದಾನೆ.