ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಗುರುಬಸವ.

             ಇದು ಶ್ರುತಿಸ್ಮತಿಯ ಸೌ | ಖ್ಯದ ಸುಖಂ ವೇದಾಂತ |
             ದೊದವು ನಿಜಶೈವಸಿದ್ಧಾಂತಮತದ ||
             ಹೃದಯವಾದ್ಯರ ಕರುಣ | ದುದಯದನುಭವಸಿದ್ಧ |
             ವಿದನರವರೀಸುವಿಧದರವರವರು ||
       ಗ್ರಂಥಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಅಲ್ಲಮ, ಚೆನ್ನಬಸವ, ಮಡಿವಾಳ, ಸಿದ್ದರಾಮ, ಇವರುಗಳನ್ನೂ ನೂತನಪುರಾ ತನರನ್ನೂ ಸ್ತುತಿಸಿದ್ದಾನೆ. ಗ್ರಂಥಾತ್ಯದಲ್ಲಿ ಈ ಗದ್ಯವಿದೆ----
       ಶ್ರೀಮತ್ಪರಮಪರಮಾನಂದನಿತ್ಯ ನಿರ್ಮಲನಿರಘನಿರ್ಗುಣನಿರಾವರಣಸಕಲಜಗದ್ರ ರಿತಭಕ್ತಜನಮನೋ.........ವಯೋಗಿಜನಸೇವಿತಚರಣಾರವಿಂದ ಷಟ್ಥ್ಸಲಜ್ಞಾನಪ್ರ ಭಾಪುಂಜರಂಜಿತಾ೦ತರಂಗ ವೀರಶೈವಮತಸ್ಥಾಪನಾಚಾರನಪ್ಪ ಶ್ರೀಮದ್ಗರುಬಸ ವೇಶ್ವರಂ ಸಕಲಭಕ್ತಜನಹಿತಾರ್ಥವಾಗಿ ಸುಜ್ಞಾನಿಗಳಿಗಾನಂದಮಪ್ಪ...ಸ್ತ..ಶಿವಯೋ ಗೀಶ್ವರರದಾಡುಸಲೆಂದು ವೇದಾಗಮೋಪನಿಷತ್ಸಮ್ಮತಿಯಿಂ ನಿರೂಪಿಸಿದ ಮನೋ ವಿಜಯವೆಂಬ ಪ್ರಕರಣಂ ಪರಿಸಮಾಪ್ತಂ.
      ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-----
           ಹಿಸುಣತೆಗೆ ಹಿಗ್ಗಿ ಎಗೆ | ಕಿಸುಕುಳದೊಳೊಗ್ಗಿ ಸಂ |
           ತಸವಟ್ಟು ಕಳವುಹಾದರಹಿಂಸೆಗೆ ||
           ಬೆಸಗೆಯ್ದು ನಿಂದೆತಾ | ಮಸಕುಟಿಲಕುಹಕದೊಳ |
           ಗೆಸೆದು ಮನವಿನಿಸಳ್ ಬೆಸೆದಿರ್ಪುದು ||
           ಚಿಪ್ಪಿನೊಡಕಂ ಬೆಳ್ಳಿ | ಯಪ್ಪುದೆಂದದ ಪಿಡಿಯ | 
           ಲಭ್ಯದೇ ಭ್ರಾಂತಿಯಾಪತ್ತಿನೆಡೆಯೊಳ್ ||
           ಇರ್ಪ ಸರವಿಯೆ ಸರ್ಪ | ನಪ್ಪದೆಂದಂಜೆಯಿಂ |
           ತಿರ್ಪುದೇ ಸಂಶಯವಿದೆಂದುವುದು ||
           ನಳಿನಮಿತ್ರನ ಕಿರಣ | ತಳಿಗೆಯೊಳ್ ಬೆಳಗಲದು |
           ತೋಳಗರೇ ಶತಗುಣೋತ್ತರಮದಾಗಿ ||
           ಹಯವುಂಟೆ ರವಿಗ ಸಂ | ಚಳ ತಳಿಗೆಯಿಂದೈಸೆ |
           ತಿಳಿವುದಾಪರಿಯ ಪರಮಾತ್ಮನಿರವಂ ||