ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82

                                                       ಕರ್ಣಾಟಕ ಕವಿಚರಿತೆ.                               15 ನೆಯ
ಗ್ರಂಥಾವತಾರದಲ್ಲಿ ಪಂಪೆಯ ವಿರೂಪಾಕ್ಷನ ಸ್ತುತಿಯಿದೆ. ಬಳಿಕ ಕವಿ ಗಣೇಶ, ತಿಟ್ಟಮಾದೇವಿ ಇವರುಗಳನ್ನು ಹೋಗಳಿದ್ದಾನೆ.

ಇವನ ಬಂಧವು ಪ್ರೌಢವಾಗಿಯೂ ಮನೋಹರವಾಗಿಯೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--

                                                     ಪುಷ್ಪವಾಟ
ಋತುಗಳ ಸೆಜ್ಜೆ ತುಂಬಿಗಳ ಜೇವಣಶಾಲೆ ಮನೋಜನಸ್ತ್ರಸಂ |
ತತಿಯ ಸಮುದ್ಭವಸ್ಥಳಿ ಕುಮಾರಸವಿಾರಕನಾಡುವಂಗಳಂ ||
ರತಿಲತಿಕಾಗೃಹಂ ನೆಗಳ್ಧ ಕಂಪಿನದೊ೦ದು ಕರಂಡಮೆನ್ನದಿ ||
ನ್ನತಿಶಯಮಾಗಿ ಬಣ್ಣಿಸುವನೆಲ್ಲಿಯನಲ್ಲಿಯ ಪುಷ್ಪವಾಟಿಯಂ |!
                                                        ಸಂಗೀತ
ತಿಂಗಳ ಬಿಂಬಮಂ ಹಿಡಿದು ಹಿಂಡೆ ಪಳಚ್ಚನೆ ಸೋರ್ವ ಸೋನೆಯಂ ||
ತಿಂಗಡಲಿಂ ಪೊದಳ್ಧ ಮರ್ದನೆತ್ತಿ ದೊಡೊಯ್ಯನೆ ಸೋರ್ವ ಸೋನೆಯಂ ||
ತಂಗಜನಿಕ್ಷು ಕಾರ್ಮುಕವನೇಳುಸೆ ಜುಮ್ಮನೆ ಸೋರ್ವ ಸೋನೆಯಂ ||
ತೇಂ ಗಡ ಸೀಯನುಣ್ಮಿದುದೊ ಗೇಯದ ಮೆಲ್ಲುಲಿ ಜಾಣಗಾಣನ |
                                                        ಕೊಳಲು
ಮದನನ ಕರ್ವುವಿಲ್ಗೆ ತಿರುವಾದೆಳದುಂಬಿಯ ಝಂಕೃತಸ್ವನಂ ||
ಮದನನ ಬೀರಮಂ ಬೆಳಪ ಮೋಹನಬಾಣದ ಭೀಂಕೃತಾರವಂ || 

ಮದನನ ಮುಂದೆ ಬರ್ಪ ರತಿದೇವಿಯ ನೂಪುರಶಿಂಜಿತಂ ದಿಟ |

ಕ್ಕಿದಾ ಸೆರತಲ್ಲೆ ನಿಪ್ಪ ತೆಳಿದಿಂ ಪೊರಪೊಣ್ಮಿತು ವಾಸದಿಂಚರಂ ||
                                         2 ಗುರುಮೂರ್ತಿಶಂಕರಶತಕ
ಇದು ವೃತ್ತದಲ್ಲಿ ಬರೆದಿದೆ; ಪ್ರತಿವೃತ್ತವೂ ಗುರುಮೂರ್ತಿಶಂಕರಾ ಎಂದು ಮುಗಿಯುತ್ತದೆ. ಈ ಗ್ರಂಥವನ್ನು “ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ಬೀಜಮಾಗೆ ಪೇರ್ವುದು” ಎಂದು ಗುರುರಾಯಮಹಾಸಚಿವೇಂದ್ರನು ಆಜ್ಞಾ ಪಿಸಲು ಬರೆದಂತೆ ಕವಿ ಹೇಳುತ್ತಾನೆ. ಆರಂಭದಲ್ಲಿ ಶಿವಸ್ತುತಿ ಇಗೆ.ಈ ಗ್ರನ್ಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ