ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಬಿರುದುಗಳು. 177

   ಕ್ಷಿತಿಯೊಳ್ ಕರ್ಣಾಟಂ ಸಂ | ಸ್ಕೃತಕಧಿಕಮದೆಂತೆನಲ್ಕೆ ಯವ್ವನೆಯಪ್ಪಾ | 
   ಸತಿಯ ಸುರೂಪಂ ಜಾಣು | ನ್ನತಿ ರತಿಯೇನವ್ವೆಗುಂಟೆ ಚೂಡಾರತ್ನಾ |
                                 ಬಲ್ಲವರರಸ
   ಪರವಧುವಿಂಗಳಿಪಿದೊಡಿಹ|ಪರ ಕೆಡುಗುಂ ನೃಪತಿ ಮುಳಿಗು ಗಂಡರ್‌ ಕೊಲ್ವರ್‌ | 
   ಪುರದೊಳಗೆ ಹೊಲೆಯಕೆಲಳಾವರ್| ಪರವಧುವಿನ ಸಂಗ ಬೇಡ ಬಲ್ಲವರರಸಾ ||
                                 ಬುಧಜನಮಿತ್ರ 
   ಕುತ್ತದ ಹರವರಿ ಪಾಪದ | ಬಿತ್ತು ಪರಾಭವದ ಬೆಳಸು ಪಸಿದ ಕೃತಾಂತಂ |
   ಗೆತ್ತಿದ ಬೋನಂ ತನುವಿದ | ನಿತ್ಯಂ ತಾನೆಂದು ತಿಳಿಗೆ ಬುಧಜನಮಿತ್ರಾ ||
                                 ಭೂಭುಜರತ್ನ
   ಒಡವೆಯನಿತ್ತುಂ ಸಂತತ | ಮೊಡನುಂಡುಂ ಕೂಸುಗೊಟ್ಟು ಮೆಂದುದನೆಂದುಂ|| 
   ಕಡುಗೂರ್ತುಮಹಿತಒಲಮಂ | ಕಿಡಿಸುವುದುಚಿತಂ ನೃಪಂಗೆ ಭೂಭುಜರತ್ನಾ ||
                                  ವಿದಗ್ಗಲಲಾಮ  
   ನಡೆವೆಡೆಯೊಳ್ ನುಡಿವೆಡೆಯೊಳ್ | ಕುಡುವೆಡೆಯೊಳ್ ತನಗೆ ನಿಂದೆ ವೊರ್ದದತೆರದಿಂ।
   ನಡೆವುದು ನುಡಿವುದು ಕುಡುವುದು | ಪಡೆವುದು ಸತ್ಕೀರ್ತಿಯಂ ವಿದಗ್ನಲಲಾಮಾ || 
   ಬಲ್ಲವರಿವರರಿಯದರಿವ | ರೊಲ್ಲದರಿವರೊಲ್ವರಿವರದೆನ್ನದೆ ಸಲೆ ಸಂ |
   ದೆಲ್ಲರ ಚಿತ್ತಕ್ಕಂ ಸಲೆ | ಬಲ್ಲೊಡವಂ ಬಲ್ಲವಂ ವಿದಗ್ಧ ಲಲಾಮಾ ||
                                  ವಿವೇಕಚೂಡಾರತ್ನ 
   ಪರಾವಾವುದು ಕುಲಭಂಗಂ | ತಿಳಿವಾವುದು ಸಮತೆ ಬಂಧವಾವುದು ಮೋಹಂ |
   ಕಳವಾವುದನೃತವೆಡರಿ೦ | ದುಳಾವಾವುದು ಧೃತಿ ವಿವೇಕಚೂಡಾರತ್ನಾ ||
          ಒಂದನೆಯ ಮಂಗರಾಜನ (ಸು, 1360) ಖಗೇಂದ್ರಮಣಿದರ್ಪಣ ದಲ್ಲಿ ವಿವೇಕಚೂಡಾರತ್ನ, ವಿದಗ್ದಚೂಡಾರತ್ನ, ಬುಧಮಿತ್ರ ಎಂದು ಮುಗಿ ವ ಕೆಲವು ಪದ್ಯಗಳು ದೊರೆಯುತ್ತವೆ.
                                      ವೈರಾಗ್ಯನಿಧಿ
  ಮುಚ್ಚದ ಹಟಿಹುಣ್ಣಂ ಕೊಳೆ | ಬಚ್ಚಲ ಕುಚಿ ಕೀವಿನೊರತೆಯಿವನಂಗನೆಯರ್ |
  ಮುಚ್ಚಿ ಮುಸುಕಿಟ್ಟು ಲೋಕ | ಕ್ಕಚ್ಚುಗಮಂ ಮಾಳ್ಪರ್ರೈಸೆ ವೈರಾಗ್ಯನಿಧೀ ||
  I Vol. 1, 337,

23