ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 178 ಕರ್ಣಾಟಕ ಕವಿಚರಿತೆ. [15 ನಯ

                                         ಸರಸ್ವತೀಮುಖತಿಲಕ
          ರೋಗಿಯದಾವಂ ಋಣಿ ಸುಖ | ದಾಗರನಾವಂ ಜಿತೇಂದ್ರಿಯಂ ಗುರುಪದಸಂ | 
          ಯೋಗಿಯದಾವಂ ಭಕ್ತೋ | ದ್ಯೋಗದೊಳಿರ್ಪಂ ಸರಸ್ವತೀಮುಖತಿಲಕಾ ||
              ಪರಮಾಗಮಸಾರವನ್ನು ಬರೆದ ಚಂದ್ರಕೀರ್ತಿಗೆ (ಸು, 1400) ಈ ಬಿರುದಿದ್ದಂತೆ ತೋರುತ್ತದೆ.
                                         ಸುಕವಿಕಂಠಾಭರಣ
          ಅವರವರಿನಪ್ಪ ಕಾರ್ಯ ಮ |ನವರವರಿಂ ಮಾಡು ಬೇಂಟೆವೋವೊಡೆ ನಾಯಂ ||
          ತವೆ ತಟ್ಟಿ ನಡೆವರಲ್ಲದೆ | ಕವಿಲೆಯನುಯ್ದ ಪರೆ ಸುಕವಿಕಂರಾಭರಣಾ ||
          ಹಾಡಿಂಗೋದಿಂಗಳಾಯದ | ಪೀಡೆಗಳಂ ಬೇಡಿಬೇಡಿ ಬೆಳಗಪ್ಪದರಿಂ |
          ಬೇಡುವುದು ಕುಡುವನಂ ಕೊಂ | ಡಾಡುವನಂ ಕೂಡೆ ಸುಕನಿಕಂರಾಭರಣಾ ||
                                          ಸುಕವಿನಿಕರನಿಳಿ೦ಸ 
          ಬಾರೋ ಎನಲಯ್ಯಯ್ಯಾ| ಸಾರೋ ಎನಲಯ್ಯ ಆರೊ ಎನಲಯ್ಯಯ್ಯಾ |
          ತೀರದ ಸೇವೆಯ ದುಃಖವ | ನಾರುಪಮಿಸಬಹುದು ಸುಕನಿಕರವಿಳಿಂವಾ ||
                                          ಸುಗುಣಕಂಠಾಭರಣ
           ಕೆಟ್ಟ ವಚನದೊಳೆ ಹಿರಿಯರ | ದಟ್ಟಿಸಿ ಶರಣೆಂದೊಡವರ ನೋವಜದಪದೇ |
           ಸುಟ್ಟರೆ ಬಾವನ್ನ ವ ತೇ | ದಿಟ್ಟೂಡೆ ಕಂಪುಂಟೆ ಸುಗುಣಕಂಠಾಭರಣಾ ||
                                          ಸುಗುಣಕರಂಡ
           ಹಿಂದೆ ಗವಿಸಿದುದು ಪೋದುದು|ಮುಂದಕ್ಕಿನ್ನೇವೆನೆಂದು ಚಿಂತಿಸಲೇಕೈ | 
           ಅಂದಂದು ಸೇದುಬಾವಿಗೆ| ತಂದುದಕವನೆರಾದರುಂಟೆ ಸುಗುಣಕರಂಡಾ ||
           ತಕ್ಕರ್‌ ಬರಲುಚಿತಾಸನ |ವಿಕ್ಕಿ ಕೆಲಕ್ಕೆಲ್ದು ಬನ್ನಿ ಮೆಂದೊಡೆ ಬಾಯೇಂ | 
           ಮುಕ್ಕ ಹುದೆ ಅವನ ಸಿರಿ ತಾಂ|ಚಕ್ಕನೆ ಪೋದಪುದೆ ಸಹಜಸುಗುಣಕರಂಡಾ ||
                                          ಸುಗುಣರತ್ನಕರಂಡ
           ಕುಡಲುಂ ಭೋಗಿಸಲುಂ ಸಿರಿ|ಕಿಡುವುದೆ ಕೆಟ್ಟೋರತೆ ತೊಡೆ ತವನಿಧಿಯಕ್ಕುಂ |
           ಕುಡದನ ಭೋಗಿಸದನ ಸಿರಿ|ಪಡಿಗದ ನೀರಂತೆ ಸುಗುಣರತ್ನಕರಂಡಾ ||
           ಹುಡಿಯೊಳಗೆ ಕೆಡಹಿ ತುಪ್ಪವ |ನಡುಗುವ ಪೆರ್ಮರುಳಿನಂತ ಮಾನ್ಯರ ಮನಮಂ |
           ಕೆಡೆ ನುಡಿದು ಚರಣವಿಡಿದೊಡೆ|ಬಿಡುವದೆ ಮನದೇ ಸುಗುಣರತ್ನಕರಂಡಾ ||
           ಸಾವಾವುದು ಯಾತನೆಯರ |ವಾವಾವದು ಜಾರವನಿತೆ ಮಾನ್ಯರ ಮನದೇ |
           ಚಾವುದಮನ್ನಣೆ ಪಾತಕ |ವಾವುದು ಪರನಿಂದೆ ಸುಗುಣರತ್ನಕರಂಡಾ ||