ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶತಮಾನ]                                              ಮಂಗರಸ III'                                179
                                               ಹದಿನಾರನೆಯ ಶತಮಾನದ ಕವಿಗಳು.
                                                      -------------------------
                                                        ಮಂಗರಸ! III 1508.
           ಈತನು ಜಯನೃಪಕಾವ್ಯ, ಪ್ರಭಂಜನಚರಿತೆ, ಶ್ರೀಪಾಲಚರಿತೆ, ನೇಮಿಜಿನೇಶಸಂಗತಿ, ಸಂಯಕ್ತ್ವಕೌಮುದಿ, ಸೂಪಶಾಸ್ತ್ರ ಈ ಗ್ರಂಥಗ ಳನ್ನು ಬರೆದಿದ್ದಾನೆ.
            ಇವನು ಜೈನಕವಿ; ಇವನ ಪಿತಾಮಹನು ಮಾಧವ; ತಂದೆ ಯದು ವಂಶದ ಮಹಾಮಂಡಲೇಶ್ವರ ಚೆಂಗಾಳ್ವನೃಸರ         ಸಚಿವಕುಲೋದ್ಭವನಾದ, ಉದ್ದವಕುಲಚೂಡಾಮಣಿ ಶಾರ್ದೂಲಾಂಕನೆನಿಸಿದ, ಹೊಯ್ಸಳದೇ ಶದ ಮಧ್ಯದಲ್ಲಿರುವ ಹೊಸವೃತ್ತಿಯನಾಡ ಮಹಾಪ್ರಭು ಕಲ್ಲಹಳ್ಳಿಯ ವಿಜ ಯಭೂಪಾಲ ; ತಾಯಿ ದೇವಿಲೆ : ಗುರು ಚಿಕ್ಕ ಪ್ರಭೇಂದು, ಈತನಿಗೆ ಪ್ರಭುರಾಜ, ಪ್ರಭುಕುಲರತ್ನದೀಪ ಎಂಬ ಬಿರುದುಗಳಿದ್ದಂತೆ ತಿಳಿಯುತ್ತದೆ. ವಿಜಯಭೂಪಾಲನು “ಚೆಂಗಾಳ್ವನೃಪರ ದಂಡನಾಥಕುಲತಿಲಕಂ” ಎಂದೂ  " ರಣಕಭಿನವವಿಜಯಂ ” ಎಂದೂ ಹೇಳಿರುವುದರಿಂದ ಆತನು ಯುದ್ಧ ವೀರನಾಗಿದ್ದಂತೆ ತೋರುತ್ತದೆ. ಸಂಯಕ್ತಕ್ಕೌಮುದಿಯನ್ನು ಶಕ 1431ರಲ್ಲಿ, ಎಂದರೆ 1508ರಲ್ಲಿ ಬರೆದಂತೆ ಕವಿ ಹೇಳುತ್ತಾನೆ.
              ಪೂರ್ವಕವಿಗಳನ್ನು ತಮ್ಮತಕಾವ್ಯನಾಮದೊಡನೆ ನೇಮಿಜಿನೇಶಸಂ ಗತಿಯ ಈ ಪದ್ಯಗಳಲ್ಲಿ ಸ್ಮರಿಸುತ್ತಾನೆ----
        ಪುರುಜೆನಪತಿಯ ಪುರಾಣಮನುಸಿರಿದ| ವರಕವಿಸಂಪರಾಜವನು |
        ದುರಿತವಿದೂರಾಜಿತಚರಿತೆಯ ಪೇದ್ದ| ಗರುವರನ್ನನ ಸ್ತುತಿಸುವೆನು ||
        ದೇವಚಂದ್ರಪ್ರಭರನು ಕೊಂಡಾಡಿದ| ಶ್ರೀವಿಜಯರ ಪುಷ್ಪದಂತ |
        ಭಾವಜಾರಿಯ ಪೊಗಲಿದ ಗುಣವರ್ಮನ|ಭಾವಶುದ್ದಿಯೊಳು ನೆನೆವೆನು ||
        ಪದಿನಾಲ್ಕನೆಯ ತೀರ್ಧಕರ ಚರಿತ್ರವ| ನೊದವಿ ಸೇರಿದ ಜನ್ನುಗನ |
        ಮುದದಿಂದ ಧರ್ಮಚರಿತ್ರವನುಸಿರಿದ| ಚದುರಮಧುರನ ಸ್ತುತಿಪೆನು ||
        ಶಾಂತೀಶನ ಮೊಗದ ಪೊನ್ನನ ರಘು | ಕಾಂತನ ಮಲ್ಲಿತೀರ್ಧಕರ |
        ಸಂತಸದಿಂ ಪೊಗರದ ನಾಗಚಂದ್ರನ| ಸಂತತಮಭಿವಂದಿಸುವೆನು ||
   1, Vol. 1, 336