ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



    ಶತಮಾನ]             ಮಂಗರಸ              187
 
    ಕಥಾನಾಯಕನು ಕಾರ್ತಿಕಮಾಸದಲ್ಲಿ ಮಾಡುವ ಕೌಮುದಿಯ ಉತ್ಸವ                        
   ದಿಂದ ಸಂಯಕ್ತ್ವವನ್ನು ಪಡೆದನಾದುದರಿಂದ ಗ್ರಂಥಕ್ಕೆ ಈ ಹೆಸರು ಬಂ                              
   ದಿದೆ. “ಅತಿಕಠಿನವಾಕಮಲ್ಲದೆ ಸುಗಮಮಂದೆನಿಪ ಪಟ್ಟದದೊಳು ಸಕ್ಕದ                             
   ಗನ್ನಡವ ಬೆರಸಿ ಮೃದುವಾಕಮಪ್ಪಂದದಿಂ ವಿರಚಿಸಿದೆಂ ” ಎಂದು ಕವಿ                          
   ಹೇಳುತ್ತಾನೆ. ಗ್ರಂಥದ ಉತ್ಕೃಷ್ಟತೆಯನ್ನು ಹೀಗೆ ಹೇಳಿಕೊಂಡಿದ್ದಾನೆ:-
      ತರುಣಿಯರ ಬಿಂಬಾಧರಂ ಇಂದುರುಚಿ ಪೂವಿನತೊಡಂಬೆ ಪೀಯೂಷಪಿಂಡಂ, ಜೇ                      
   ನ ಸೋನೆ ಪೊಸಸುಗ್ಗಿ ಕೆಂಬರಲ ತೊಡವು ಚಂದಣದಣ್ಣು ಕೋಗಿಲೆಯ ನುಣ್ಣರಂ ಪ್ರಭು               
   ರಾಜಮಂಗರಸನೊರೆದ ಕೌಮುದಿಯ ಮಾತು.
      ಗ್ರಂಥಾವತಾರದಲ್ಲಿ ವೀರಜಿನಸ್ತುತಿ ಇದೆ. ಬಳಿಕ ಕವಿ ಚತುರ್ವಿಂ                      
   ಕತಿತೀರ್ಧಕರರು,ಸಿದ್ದಾದಿಗಳು, ಸರಸ್ವತಿ ಇವರುಗಳನ್ನು ಸ್ಮರಿಸಿ ಅನಂ                               
   ತರ ಗೌತಮನಿಂದ ಪ್ರಭೇಂದುವಿನವರೆಗೆ ಗುರುಗಳನ್ನು ಸ್ತುತಿಸಿದ್ದಾನೆ.                                 
   ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:-
                   ಶರತ್ಕಾಲ
      ಅಲ್ಲಲ್ಲಿ ಗಿಣ್ಣಿಕ್ಕುವಲ್ಲಲ್ಲಿ ಕುಳುಹನಿಡು |                                           
      ವಲಲ್ಲಿ ಕದಿರುಗಡೆವಲ್ಲಲ್ಲಿ ಪೂದುಂಬು |                                         
      ವಲಲ್ಲಿ  ಪಾಲ್ದೀವುಲ್ವಲ್ಲಲ್ಲಿ ಕಾಯಾಗುವಲ್ಲಲ್ಲಿ ಪಣ್ಣಾಗುವ ||                               
      ಅಲ್ಲಲ್ಲಿಯಕ್ಕಿ ಮುಕುವಲ್ಲಲ್ಲಿ ಕೆಂಪಾಗು |                                          
      ವಲ್ಲಲ್ಲಿ ಕುಯ್ಯಲಾಗುವ ಪಲವು ಪೆಸರ್ವಡದ |                                      
      ನೆಲ್ಲ ಗದ್ದೆಗಳತಿಮುದಂಬಡಿಸಿದುವು ತಮ್ಮನೋವಿದ ಕುಟುಂಬಿಗಳ್ಗೆ  ||                 
      ನಳನಳಿಸಿ ಬೆಳೆದ ನವಗಂಧಶಾಲಿಯ ವನಕೆ |                                  
      ತಳಿಗಳಂ ಹೆಣೆವ ಕಪ್ಪಂ ತೋಡುವೆಸಕದ |                                 
      ಟ್ಟಳೆಯನಿಕ್ಕುವ ಬೆಚ್ಚು ಗಳನಿರದೆ ನೆಡುವ ಗುಡಿಲಂ ಹೊದಿಸಿ ಹಸಮಾಡುವ ||               
      ಕಳನ ಕೆತ್ತುವ ಮೇಟೆಯಂ ನೆಡುವ ಕುಡುಗೋಲ |                              
      ನು  ಯದೇ ಮಸೆಯಿಸುವ ಗೊಂದಣ೦ ಗುಡಿಯರುಗ |                
      ಳೊಳಗೊಪ್ಪುವಡೆದುದಾಬಂದು ಬಂಧುರತೆಯಂ ನೆವೆ ಪಡೆದ ಕಾರ್ತಿಕದೊಳು ||
  1 ಗೌತಮ ದೇವನಂದಿ, ಗುಣ್ದ್ರಭದ್ರ , ಜಿನಸೇನ, ರಾವುಳ ಕೊಂಡಕುಂದ. ಭುಜ                   ಬಲಿ, ಹೇಮದೇವ ಮುನಿಚಂದ್ರ, ಪದ್ಮಪ್ರಭ, ಮಯೂರಪಿಂಛ, ನಂದಿಮಿತ್ರ, ಸಮಂ                  ತಭದ್ರ, ಕೇಶವ, ಮಾಘನಂದಿ, ಆಕಳಂಕ, ಭದ್ರೆಬಾಹು, ಕುಮುದೇಂದು, ಪ್ರಭೇಂದು