ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



    188          ಕರ್ಣಾಟಕ ಕವಿಚರಿತೆ.          [16 ನೆಯ
                                               
                      ಚಂದ್ರ
     ವಿರಹಿಜನದೆರ್ದೆಯ ಲಗ್ಗೆ ಯನಿಡುವ ಮನಸಿಜನ |            
     ಕರತಳದ ಮೌಕ್ತಿಕದ ಸೆಂಡೋ ವಿಯೋಗಿಗಳ |                   
     ಸಿರವ ಹರಿಯಿಡುವ ಕಾವನ ಕೈಯ ಚಕ್ರಮೋ ಓಪರನಗಲ್ದವರನು || 
     ಭರದಿನಿಸುವಂಗಜನ ಕುಂಡಲಿತಕಾರ್ಮುಕವೊ |             
     ಹರನೊಡನೆ ಸೂಡ ಕಾದುವೆನೆಂದು ಪಡಿಸು |        
     ವರಲಸರನೆಡಗೈಯ ವಜ್ರಖೇಟಕವೊ ಧಳಧಳಿಪ ಸಂಪೂಣ೯ಶಶಿಯೋ ||
                  ಭೋಜನ                                                
     ದೊನ್ನೆಯಂ ಹರಹಿ ಬಾಎಲೆಹಾಳೆಯಂ ಹಾಕಿ |
     ಬಿನ್ನಣದೆ ಮಾಡಿದಾಚೌಕದೆಡೆಗಳಮುಂದೆ |                              
     ಜನ್ನಿವಾರವ ಮೇಲಕೆತ್ತಿ ಕಿಹುಸುತ್ತುಮಂ ತೆಗೆದು ಸಡಿಲಿಸಿ ಧೋತ್ರಮಂ || 
     ಚೆನ್ನಾಗಿಯಾಪೋಶನಮನೆತ್ತಿ ಕುಳ್ಳಿರ್ದು |                         
     ಭಿನ್ನರುಚಿಮಾಡಿ ಹರಿಸದೆ ಗಡ್ಡ  ಮಿಸೆಗಳು |
     ಮಂ ನೀವಿಕೊಳ್ಳುತ್ತೆ ಭೋಜನವನಿಂತು ಮಾಡುತ್ತಿರ್ದರಾಪಾರ್ವರು ||                        
     ಓಗರವ ತಾ ತೊಗೆಯನಿಕ್ಕು ಹಸನಾಯ್ತು ಮೇ |                                     
     ಲೋಗರವ ಬಡಿಸು ದೊನ್ನೆಗಳು ಹಿಡಿವಂತೆಯುಂ ||
     ಟಾಗಿ ಹೆರೆದುಪ್ಪವೆಳೆಯಾಪದಳಿದ್ಯಮನಟ್ಟು ಕಲಸುವೋಗರವ ತೋಹಾ ||    
     ಬೇಗದಿಂದೆಡೆಮಾಡಿದಿಡ್ಡ ಲಿಗೆದೋಸೆಗಳ |                                           
     ಮೇಗೆ ಸಕ್ಕರೆಬಟ್ಟವಾಲ ಹೊಯ್ಯೆನುತಮಾ |                          
     ರೋಗಣೆಯನಾಪೊಟ್ಟಿಯೊಡೆವ ಮರ್ಯಾದೆಯೊಳಗುಂಡು ತೇಗುತ್ತಿರ್ದರು ||
     ಪಾಯಸದ ಪರಿಗಳಂ ನೋಡಿ ಪಂಡಿತರೆ ಸವಿ |                                  
     ಯಾಯಿತೇಯಾಯ್ತು ಪಾಧ್ಯಾಯರೇ ಕರಜೆಗೆಯ |                                      
     ಕಾಯ ದೋಸೆಗಳ ಹಸನಂ ಪುರೋಹಿತರೆ ಚೆನ್ನಾಗಿ ಸವಿಸವಿದು ನೋಡಿ ||              
     ಈಯೆಣ್ಣೆಯೂರಿಗೆಯ ಮೃದುತರಕೆ ಸರಿಯುಂಟೆ |                                   
     ಜೋಯಿಸರೆ ಕೇಳಿ ಸಕ್ಕರೆಬುರುಡೆಗಳ್ ನಮ್ಮ |
     ಬಾಯ ಬಳುನಂ ಬಿಡಿಸುತಿವೆ ದೀಕ್ಷಿತರೆ ಎಂದು ಕೊಂಡಾಡುತಿರ್ದರಾಗ ||