ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



202 ಕರ್ಣಾಟಕ ಕವಿಚರಿತೆ. [16 ನೆಯ

    ಕಾರಣವನ್ನು ಹಿಂದೆಯೇ ತಿಳಿಸಿದ್ದೇವೆ, ಗ್ರಂಥಾವತಾರದಲ್ಲಿ ಕವಿ ವೈಭೋ 
    ಗರಾಯನನ್ನು ಸ್ತುತಿಸಿ ಬಳಿಕ ಪಾರ್ವತಿ, ಗಣಪತಿ ಇವರುಗಳನ್ನು ಹೊಗ 
    ಳಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯು
     ತ್ತೇವೆ__
                                 ಗಣಪತಿ 
   ಮುಂಬನಿಸೊರ್ಕನುಂಬ  ಮುೞುದುಂಬಿಯ ಬಂಬಲಿನುಣ್ಮು ವಿಂಚರಂ |  
   ತುಂಬಿರೆ ಗರ್ಭ ಭೋಗಿ ಸಿರವೆತ್ತಿ ಫಣಾಮಣಿರೋಚಿ ದೇಹಮಂ || 
   ತಾಂ ಒಳಸೊಪ್ಪೆ ರಕ್ತ ಪಟಮಂ ತಳೆದಂತಿರೆ ರಾಜೆಸಿರ್ಪ ಹೇ |
   ರಂಬನುಮೇಶನೂನು ಮಿಗೆ ಮಾಡುಗೆ ಮುತ್ತಿಗೆಲ್ಲ ವಿಘ್ನಮಂ || 
                                 ಸ್ತ್ರೀಯರು 
   ತಳಿರ ಬೆಡಂಗು ನುಣ್ದೊಡೆಯ ರಂಗಳವಾೞ್ ಯ  ಪೊಂಗು ಚೆಲ್ವ ತ |
   ಣ್ಭು ೞುಲ ಪೊಡರ್ಪು ಸಣ್ಣಲತೆಯರ್ಷ ಮಳ್ವಕ್ಕಿಯ ನೇರ್ಪು ಬಳ್ಳಿಯೊಳ್ ||
   ಬಳಸಿಕೆಗೊಂಬ ಕಂಬು ಸಲೆ ಕೋಗಿಲೆಯಿಂಬುೞ್ ಮಾವಿನಂಬು ಕ |  
   ಣ್ಗಳಿಕುಳದೋರ್ಪು ಸೋಗೆಗಳ ನೀಳ್ವರೆ ಬಂದರದಂದುಕಾಂತೆಯರ್‌ ||
                  ____________
                 ನಂಜುಂಡ. ಸು. 1525 
      ಈತನು ಕುಮಾರರಾಮಕಥೆಯನ್ನು ಬರೆದಿದ್ದಾನೆ. ಇವನು ವೀರ 
   ಶೈವಕವಿಯೆಂದು ತೋರುತ್ತದೆ.
      ಇವನ ಪಿತಾಮಹನು ಯದುಕುಲಾಮಾತ್ಯವಂಶೋದ್ಭೂತನಾದ ಪ್ರಭುಕುಲಾ 
   ಗ್ರಗಣ್ಯ ವಿಜಯನ್ರಪಾಲ  ; ತಂದೆ " ಅಂಡದಜಲ್ಲಿಯನಾನೆಯ ನಿಗಳಕೆ ಕಂಡರಿಸಿದ 
   ಮಾನಣ್ಣದ ಬೊಂಬೆಯ ಕಂಡು ಮನದೊಳುೞ್   ಮಚ್ಚರಿಸುವ ಮಾೞಾಂತ ರಾವು 
   ತರ ಗಂಡನೆನಿಪ ” ಮಾಧವ , ಹಿರಿಯಯ್ಯನು ತುರಗದಂಡಕೆ ಬಲುಜಲ್ಲಿಯ ಕಟ್ಟಿದ 
   ಬಿರುದುಳ್ಳ ರಾವುತ; ಕಿರಿಯ ತಂದೆ ವಿಜಯ : ಈ ವಿಜಯನು
      ಧರಣಿಯೞಿಯ ಧುರದೊಳಗೆ | 
      ರಾಯದೞವ ಕಾಣುತ ತನ್ನ ಪತಿ ನಂಜ | ರಾಯನ ಮುಂದೆ ಕುದುರೆಯ | 
      ರಾಯರಾವುತರಮೇಲೇೞು ತಿವಿದು ಸುರ | ರಾಯನಗರಿಗೈದಿದನು || 
   ಎನ್ನು ತ್ತಾನೆ, “ ಚೆಂಗಳನಾಡ ನಾಲ್ವತ್ತುನಾಯಕಗಜಸಿಂಗವೆನಿಪ ಮಾಧವನ ಅ೦ 
   ಗೋದ್ಭವ ನಂಜುಂಡ, ಯದುಕುಲಾಮಾತ್ಯರೆಂದೆಂಬ ಕುಲಾಗತವಿದಿತಬಿರುದನಾಂತೆ