ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

224 ಕರ್ಣಾಟಕ ಕವಿಚರಿತೆ, [16 ನೆಯ

   ಹರಿನಿಜಜ್ಞಾನೋಪಲಾಲಿತ | ಪರತರಾನಂದಾನುಭವವಿನಿ |
   ತಿರದೆ ವಿಸ್ತರವೆನಲು ವರ್ಣಿಸತಕ್ಕುದಿದಳೊಳಗೆ ||
         ಗ್ರಂಥಾವತಾರದಲ್ಲಿ ಗಣೇಶಸ್ತುತಿ ಇದೆ. ಬಳಿಕ ಕವಿ ಸರಸ್ವತಿ, ವೇದವ್ಯಾಸ, ವಿಷ್ಣು, ಶಿವ, ವಾಲ್ಮೀಕಿ, ಶುಕಯೋಗಿ ಇವರುಗಳನ್ನು ಹೊಗಳಿದ್ದಾನೆ. ದಶಮಸ್ಕಂಧದ ಆದಿಯಲ್ಲಿ ವಿಷ್ಣು ಶಿವ ಗಣೇಶ ಸರಸ್ವತಿಗಳ ಸ್ತುತಿಯೂ ಏಕಾದಶಸ್ಕಂಧದಆದಿಯಲ್ಲಿ ಗೋಪೀನಾಥ ಶಿವ ಬ್ರಹ್ಮಗಣೇಶ ಸರಸ್ವತಿಗಳ ಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತಗೆದು ಬರೆಯುತ್ತೇವೆ--.
                                       ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿ 
      ಹೊಳೆವ ಕಣ್ಗಳ ಕಾಂತಿಗಳ ಮಂ | ಗಳಕಟಾಕ್ಷಚ್ಛವಿಯ ಘನಪರಿ |
      ಮಳದ ನಾಸಾಪುಟದ ರೇಖಾವಳಿಯ ನುಣ್ಗೊರಳ ||
      ಲಲಿತಹಾರದ ಪೀನಕುಸಯುಗ | ಕಲಶಭಾರದ ಬಡನಡುವಿನು |
       ಜ್ವಲಸುನಾಭಿಯ ಕಾಂತಿಯಲಿ ಕಣ್ಗೊಳಿಸಿದಳು ತರಳೆ ||
                                       ಚಾಣೂರ ಕೃಷ್ಣರ ಮಲ್ಲಯುದ 
       ತಳವ ತಳದಲಿ ಹೊಯ್ದು ಭುಜಮಂ | ಡಲವನಾಸ್ಫೋಟಿಸಿ ಪರಸ್ಪರ |
       ಕಲಿತಕರಜಾ ನೂರುಪಾದದ್ವಿತಯಬದ್ದದಲಿ ||
       ತಳಿಸಿ ತೊಡರುವ ಬೀಸಿ ಬಿಸುಡುವ | ನಿಲುವ ನಿಂದಡಿಯಿಂದ ಬಲಿಸುವ |
       ಹಲವುಪರಿಯಲಿ ಹಳಚಿ ತಿವಿದಾಡಿದರು, ಪಟುಭಟರು ||
                                             ವನವಿಹಾರ
       ಸರಸಿಜದ ಪರಿಮಳವನಂಗದ | ಪರಿಮಳದೊಳುತ್ಪಲದ ಕಾಂತಿಯ |
       ನರಳುಗಂಗಳ ಕಾಂತಿಯಲಿ ಭೃಂಗಾವಳೀಪ್ರತಿಯ||
       ಕುರುಳುಗಳ ಕಾಂತಿಯಲಿ ಮೃದುತರ | ಚರಣಬಿಂಬಾಧರದ ರುಚಿಯಲಿ |
       ಹರಿಸಿದರು ಕೆಂದಳಿರ ಸಿರಿಯನು ಕಾಂತೆಯರು ಬನದ ||
                                            ಕೃಷ್ಣಯರ ವಿರಹ
       ಕಂಡೆಯೋ ನೀನೆಲೆನವಿಲೆ ನೀ | ರ್ಗೊಂಡ ಮುಗಿಲಂದದ ಮುಕುಂದನ |
       ಖಂಡಸುಖಮಯಮೂರ್ತಿಯನು ನಿನ್ನಸೆವ ತಾಂಡವವ ||
       ಕಂಡು ಮನ್ನಿಸಿದನೆ ಮನೋಜ್ಞಾ | ಖಂಡಕಾರುಣ್ಯೀಕ್ಷಣದಲು |
       ದ್ದಂಡ ಮಹಿಮಂಗಾರು ಮರುಳಾಗದವರವನಿಯಲಿ ||