ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 ಕರ್ನಾಟಕ ಕವಿಚರಿತೆ. [16 ನೆಯ ನೆರೆ ಕೈಯಿಂ ತೊನೆದಾಡುವಳ್ ಮುಗಿಲ ಪೂವಂ ಸೂಡುವಳ್ ತಾರೆಯಂ || ತಿರುವಳ್ ಮುತ್ತುಗಳೆಂದು ಚಂದ್ರರವಿಯಂ ಕಂಚೋಲೆಯೆಂದಿಕ್ಕುವಳ್ | ನಿರುಯಂ ಸುತ್ತುವಳೇಳುವಾರ್ಧಿಚಯಮಂ ಶ್ರೀಕೀರ್ತಿ ರೇಚಾಂಕನಾ ||

                                                     ಚಾಟು                              
                           ಪುರುಷ ವಿರಹವರ್ಣನೆ                                                              ಅದನಿನ್ನೇವೊಗಳ್ವೆಂ ವಿನೋದಭವನಂ ಚಾತುರ್ಯಜನ್ಮಸ್ಥಳಂ | 

ಮೃದುಮಾಧುರ್ಯವಚಸ್ಸುಧಾಂಬುಧಿಗೆ ಪೆರ್ಚ೦ ಮಾಳ್ಪ ಚಂದ್ರೋದಯಂ || ಮದನಂ ಪೂಜಿಪ ಮಂತ್ರದೇವತೆಯೆನಿಪ್ಪಾನಲ್ಲಳಂ ಬಿಟ್ಟು ಹಾ | ಬಿದಿರಂ ಕಬ್ಬಿನ ಪೋಲ್ಕೆಗೆಂದು ಸವಿವಂತಾಯ್ತೆನ್ನ ಪುಣ್ಯೋದಯಂ ||

                                                    ಮುಕ್ತಕ. 
                             ಸಮುದ್ರವರ್ಣನೆ                                                                            ಪವಳದ ಕೆಯ ಮುಗಿಲ್ಗಳರಮಟ್ಟಿಗೆ ನೀರ್ಗಳ ಸುತ್ತು ಮುತ್ತು ಪು |

ಟ್ಟುವ ಕಣಿ ಬೆಟ್ಟವಕ್ಕಿಗಳ ಗೂಡೆಳನೆ ಸರ ತೊಟ್ಟಿಲುಗ್ರದಾ || ನವರೆಹವಟ್ಟು ಲಕ್ಷ್ಮಿಯ ತವರ್ಮನೆ ತಿಂಗಳ ಪೆತ್ತ ತಂದೆ ಬಾ | ಡವಶಿಖಿಗಂ ನಿವಾಸಮಸುರಾರಿಯ ಸೆಜ್ಜೆ ವಲಂ ಮಹಾರ್ಣವಂ ||

                              ಶೌರ್‍ಯವರ್ಣನೆ                                                                           ಗರುಡನ ಮೂಗು ಕೊಂಕಿದೊಡೆ ತಿರ್ದಿ ದುದಿಲ್ಲ ಮುರಾರಿ ಚಂದ್ರನೊಳ್ | 

ಪೊರೆದ ಕಳಂಕಮಂ ಕಳೆದುಗಿಲ್ಲ ಮಹೇಶ್ವರನರ್ಕನುಳ್ಕರಿಂ || ದರುಣನ ಕಾಲ್ಗಳಂ ಪಡೆದನಿಲ್ಲಮದೆಂತೆನೆ ಪುಣ್ಯಹೀನನೇ | ದೊರೆಗಳಿನಾಸೆಗೆಯ್ದೊಡಮಗಲ್ವುದೆ ಪೂರ್ವದ ಕರ್ಮಬಂಧನಂ ||

                             ತಪೋವನವರ್ಣನೆ                                                                        ಪೊಕ್ಕು ಕುಟೀರಮಂ ಕೆದರಿ ಪುಸ್ತಕಮಂ ಮಸಿಯಕ್ಕರಂಗಳಂ | 

ನೆಕ್ಕಿ ಬಿಸುಟ್ಟು ಬೊಕ್ಕಣದ ಬೂದಿಯನುಃಪೆನುತೂದಿ ಮೂಗಿನೊಳ್ || ಪೊಕ್ಕೊಡೆ ಸೀಂತು ಮಾಣ್ದಿರದೆ ಪಾಯ್ದವಲಂಬಿಪ ಕೊಂಬನೇರಿ ಪು | ರ್ಬಿಕ್ಕುವ ಮರ್ಕ್ಕಟಂ ನಗದ ತಾಪಸರಂ ನಗಿಸಿತ್ತರಣ್ಯದೊಳ್ ||

                               ವೈರಾಗ್ಯವರ್ಣನೆ                                

ನೆರೆವುದಗಲ್ವುದರ್ಕೆ ಜನನಂ ಮರಣಕ್ಕೆ ವಿನೂತಯೌವನಂ | ಜರೆಗೆ ಧನಂ ದರಿದ್ರತೆಗೆ ನಲ್ಮೆ ವಿರಾಗಪಧಕ್ಕೆ ಸತ್ಸುಖೋ ||