ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಬೊಂಬೆಯಲಕ್ಕಿ. 231

      ತ್ಕರಮಸುಖಕ್ಕೆ ಕಾರಣವಿದೆಂದಯಿದುಂ ಭವಸಿದ್ಧ ಪಂಜರೋ |                        
      ದರಗತರೇಕೆ ಚಿಂತಿಸುವರೇಕೆ ಪಲುಂಬವರೇಕೆ ನೋವರೋ' ||
                     -- -
               
                 ಬೊಂಬೆಯಲಕ್ಕ . 1538                                        
          
          ಇವನು ಹರಿಶ್ಚಂದ್ರಸಾಂಗತ್ಯವನ್ನು ಬರೆದಿದ್ದಾನೆ. ಈತನು ವೀರ                 
      ಶೈವಕವಿಯೆಂದು ತೋರುತ್ತದೆ.  ಈ ಗ್ರಂಥವನ್ನು ಶಕ 1460 ನೆಯ                      
      ವಿಳಂಬಿಯಲ್ಲಿ ಎಂದರೆ 1538ರಲ್ಲಿ ರಚಿಸಿದಂತೆ ಹೇಳುತ್ತಾನೆ.
           ಇವನ ಗ್ರಂಥ
                    ಹರಿಶ್ಚಂದ್ರಸಾಂಗತ್ಯ                                        
          ಸ್ಥಲ 5, ಪದ್ಯ 570. ಇದರಲ್ಲಿ ಹರಿಶ್ಚಂದ್ರನ ಕಥೆ ಹೇಳಿದೆ. ಈ                    
       ಕಥೆ "ಸತ್ಯದ ನೆಲೆ ಮುಕ್ತಿಯ ಬೀಡು ಪುಣ್ಯದ ಕೀರ್ತಿಯ ತಲೆವನೆ"                      
       ಎಂದು ಕವಿ ಹೇಳುತ್ತಾನೆ. ಗ್ರಂಧಾವತಾರದಲ್ಲಿ ವಿರೂಪಾಕ್ಷಸ್ತುತಿಯೂ                      
       ಬಳಿಕ ಗಣೇಶ ಸರಸ್ವತಿಯರ ಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು               
       ಪದ್ಯಗಳನ್ನು ತೆಗೆದು ಬರೆಯುತ್ತೇವೆ.-
                       
                        ಚಂದ್ರಮತಿ                                        
          ಅಡಕೆಗೆ ಹರಣವ ತೊರೆವರು ಸತಿಯರು | ನುಡಿವರು ಸಕಲಬೋಧೆಗಳ |                                                    
          ಬಿಡದೆ ಲೋಭಗಳನು ಮೆರೆವರು ಅವಗುಣ | ಕಡೆಗಿನಿಂತಿಲ್ಲ ಚಂದ್ರಮತಿಗೆ ||
              
                      ಹರಿಶ್ಚಂದ್ರನ ಉಕ್ತಿ                                       
          ಹೆತ್ತ ತಾಯನು ಮಾರ ತೊತ್ತ ಕೊಂಬವನಂತೆ | ಮತ್ತಾದೇವಪೂಜೆಯನು |             
          ಇತ್ತು ನಾಯನು ಕೊಂಬ ಗಾದೆಯಂದದಿ ಜೀಯ | ಸತ್ಯವ ಬಿಡಲೊಲ್ಲೆನೆಂದ ||                                   
          ಪೊಡವಿ ನುಂಗುವರೆ ಬಯಲು ಬಡಿವರೆ ಎ | ನ್ನೊಡಲೊಳಗುಂಬಶನವು |              
          ಬಿಡದೆ ನಂಜಾಗಿ ಮುನಿಯೆ ಇನ್ನು ಲೋಕದಿ | ತಡೆವವರಾರು ಹೇಳೆಂದ ||         
          ಬಚ್ಚಲುದಕ ತಿಳಿದಿರಲು ಮಜ್ಜನವುಂಟೆ | ಅಚ್ಚರಿನಾಯ ಹಾಲುಗಳು |            
          ನಿಶ್ಚಯವಾದ ಊಟಕೆ ನಿಮ್ಮ ಯೌವನ | ಮಚ್ಚೇನು ಇನಕುಲಜರಿಗೆ ||
                               ---                                                   
           1.  ಈ ನಾಲ್ಕು ಪದ್ಯಗಳಿಗೂ ಆಕರ ಹೇಳಿಲ್ಲ.