ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

‌‌‌‌‌‌‌‌

     336                ಕರ್ಣಾಟಕ ಕವಿಚರಿತೆ.            [16ನೆಯ 
              
                         ಸಮುದ್ರ 
     ಘುಳುಫಳಿಸುತೇಳ್ವ ಬೊಬ್ಬುಳಿಗಳಿಮಂ ಸುಳುಗಳಿಂ | 
     ನಳನಳಿಸಿ ರಾಜಿಸುವ ಕಮಲದಿಂ ಕುಮುದದಿಂ |
     ತಳತಳಿಸಿ ಹೊಳೆಯುತಿಹ ತೆರೆಗಳಿ೦ ಮೊರೆಗಳಿಂ ಕಮರಶೈವಾಲದಿಂದೆ ||
     ತುಳುಕಿ ಪರಿದೊಲೆದೊಲೆದು ಸಂಚರಿಪ ಮೀಂಗಳಿಂ | 
     ಬಳಸಿ ಪರ್ಬದ ಪವಳಲತೆಗಳಿಂ ಶಂಖದಿo• |
     ದೆಳಲತೆಯ ಕುಡಿಗವಲ ಸೊಂಪಿನಿಂ ಗುಂಪಿನಿಂ ಕಡಲು ಕಣ್ಗೆ ಸೆದಿರ್ದುದು ||
                    ಪರವೆಯ ಸೌಂದಯ್ಯ 
     ನನೆಯ ಸೂಡಿದ ಕಲ್ಪಲತೆಯೊ ಮಧುಕರನೆಳಗಿ | 
     ಜಿನುಗಿ ಸವಿಯದ ಪರಾಗದ ಪುತ್ಥಳಿಯೊ ಮೇಣು |
     ಮುನಿ ಕುಡಿಯದಿಹ ಸಾಗರಮೊ ಚಕೋರನ ಚಂಚು ಸೋಂಕದಿಹ ಪೂರ್ಣಶಶಿಯೋ|| 
     ವನಸಿಜನ ಪೊಸಮಸೆಯ ಖಂಡೆಯವೊ ಕಂತುವಿನ | 
     ಘನಪ್ರತಾಪದ ಜಸವೊ ಸ್ತ್ರೀರತ್ನಮೋ ಎನಿಸಿ |
     ವನಿತೆಯಿರ್ದಳು ಪರವೆ ಬಿಂದುಗಳೆಯದಿಹಾಣಿಮುತ್ತೆನಲು ಧಳಧಳಿಸುತೆ||
                   ಚಿನವರದರು(ಸರಾಫರು)
     ನಂದಿಯುಂಡಿಗೆ ರಾಮಟಿಂಕೆ ಶಿವರಾಯ ತಾ |
     ನೊಂದೆಸೆಯ ಸಣ್ಣಗೆರೆಯಿಕ್ಕೇರಿ ಮಾಸಮೊಳೆ | 
     ಚಂದಿರನಹಣ ಜಳಕೆ ಮುಂಬೆಟ್ಟು ಅಚ್ಯುತನ ಹೊನ್ನ ರಾಸಿಗಳ ತಮ್ಮ | 
     ಮುಂದಿಟ್ಟು ಮಚ್ಚಗಳ ಪಿಡಿದೊರೆದು ಬಣ್ಣಗಳ | 
     ಬಂಧಿಸುವ ನಿಲುಕಡೆಗೆ ಮೇಣದುಂಡೆಯೊಳೊತ್ತಿ |
     ಸಂದ ಕ್ರಯವಿಷ್ಟೆಂದು ನೋಡಿ ತೂಕವ ಮಾರ್ಪಿ ಚಿನವರದರೊಪ್ಪಿರ್ದರು ||
                   ಮಿಠಾಯಿಯಂಗಡಿ
     ಕರಜಿಗೆಯಕಾಯಿಯತಿರಸವುದ್ದಿನೊಡೆಯು ಹಿಮ | 
     ಕರನಂತೆ ರಾಜಿಸುವ ಇಡ್ಡಲಿಗೆಯೆಳ್ಳುಂಡೆ | 
     ತರಣಿಮಂಡಲದಂತೆಯೆಸೆವ ಒಬ್ಬಟ್ಟು, ಗಾರಗೆಯ ಚಕ್ಕುಲಿ ಸೇವಗೆ || 
     ಹೊರೆಯಪೇಣಿಯು ಮನೋಹರದುಂಡೆಯರಗುಸ | 
     ಕ್ಕರೆಬುರುಡೆ ಹಾಲುಂಡಲಿಗೆಯು ಸ್ವಾದಿಸಲಮೃತ | 
     ಸರಳಿನಿಂ ನಿರ್ಮಿಸಿದ ಲತೆಯಂತೆ ಜಿಲ್ಲಬಿಯ ಅಂಗಡಿಗಳೆಸೆದಿರ್ದುವು ||