ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




                                 17ನೆಯ ಶತಮಾನದ ಕವಿಗಳು
                                       ಭಟಾಕಳ೦ಕದೇವ, 1604
                ಈತನು ಕರ್ಣಾಟಕಕಬ್ದಾನುಶಾಸನವನ್ನು ಬರೆದಿದ್ದಾನೆ. ಇವನು 
        ಜೈನಕವಿ; ಇವನ ಗುರು 
                ಮೂಲಸಂಘ ದೇಶೀಯಗಣ ಪುಸ್ತಕಗಚ್ಛ ಕುಂಡಕುಂದಾನ್ವಯವಿವಾಮಾನ                                                                        
        ಶ್ರಿಮಾಧ್ರಾಯಠಾಜಗುರುಮಂಡಲಾಚಾರ್ಯ​ ಮಹಾವಾದವಾದೀಶ ರ ರಾಯವಾದಿ     
        ಪಿತಾಮಹ ಸಕಲವಿದ್ವಜ್ಜನಚಕ್ರವರ್ತಿ ಬಲ್ಲಾಳರಾಯಜೀವರಕ್ಷಾಪಾಲಕೇತ್ಯಾದ್ಯನೇ
        ಕಾನ ರ್ಧಬಿರುದಾವಲೀವಿರಾಜಮಾನ ಶ್ರೀಮಾರುಕೀರ್ತಿ ಪಂಡಿತದೇವಾಚಾರ್
        ಶಿಷ್ಯ ಪರಂಪರಾಯಾತ ಶ್ರೀಸಂಗೀತಪುರಸಿಂಹಾಸನಪಚ್ಛಾಚಾರಶ್ರೀಮದಕಲಂಕದೇವನು,
                   ಈ ಗ್ರಂಥವನ್ನು ಶಕ 1526 ನೆಯ ಶೋಭಕೃತ್ಸಂವತ್ಸರದಲ್ಲಿ, ಎಂ
         ದರೆ 1604ರಲ್ಲಿ ಬರೆದಂತೆ ಹೇಳುತ್ತಾನೆ, ಮದರಾಸ್ ಪ್ರಾಚ್ಯ ಕೋಶಾಲ
         ಯದಲ್ಲಿರುವ ಬಿಳಿಗಿಯತಾಲ್ಲೂಕಿನ ಒಂದು ಶಾಸನದ (1592) ಪ್ರತಿಯಿಂದ 
         ಈತನ ಗುರುಪರಂಪರೆಯೇ ಮುಂತಾದ ವಿಷಯಗಳನ್ನು ಕುರಿತು ಈಯಂ
         ಶಗಳು ತಿಳಿಯುತ್ತವೆ:-
                 ಕರ್ಣಾಟಸಿಂಹಾಸನಾಧೀಶ್ವರ ಬಲ್ಲಾಳರಾಯಜೀವರಕ್ಷಾಪಾಲಕನಾದ ಚಾರು 
         ಕೀರ್ತಿ ಪಂಡಿತನು ಹೀಗೆ ಕೀರ್ತಿಯನ್ನು ಪಡೆದನು---
            ತಿಂಬೆಂ ರಾಯನನೆಂದು ನೆ | ಲಂ ಬಾಯ್ದೆಡೆ ತನ್ನ ಮಂತ್ರಜಪವಿಧಿಯಿನದಂ |
            ಕುಂಬಳಕಾಯಿಂ ಪೋಟ್ಟು ಯ | ಶಂಬಡೆದೆಸಕಕ್ಕೆ ಪಂಡಿತಾರನ ಸೋ೦ತಂ!!
         ಇವನ ಶಿಷ್ಯ ಪರಂಪರೆಯಲ್ಲಿ ಶತಕೀರ್ತಿ ತನ್ನ ಶಿಷ್ಯನಿಗೆ ಅಗ್ಗಳನಿಂದ ಚಂದ್ರಸ ಭ 
         ಪುರಾ ಇವನ್ನು ಹೇಳಿಸಿದನು. ಶ್ರುತಕೀರ್ತಿಯ ಶಿಷ್ಟನಾದ ವಿಜಯಕೀರ್ತಿ ವೈದಿಕ 
         ಮತದವನಾಗಿದ್ದ ಅಭಯಚಂದ್ರ,ಸೂರಿಯನ್ನು ಜೈನನನ್ನಾಗಿಮಾಡಿದನು; ಸಂಗೀತಪು
                 1,    ವಿಷ್ಣುವರ್ಧನನು ವೈಷ್ಣವನಾದಮೇಲೆ ಜೈನರಿಗೆ ಹಿಂಸೆಯನ್ನು ಉಂಟು
          ಮಾಡಲು ಕೆಲವು ದೊಡ್ಡದಾಗಿ ಬಾಯಿಬಿಟ್ಟು ಊರುಗಳೂ ಪ್ರಾಣಿಗಳೂ ನಾಶವಾಗು 
          ತಿರಲು ಉಪಾಯಾಂತರವಿಲ್ಲದೆ ದೊರೆ ಬಂಮ ಪ್ರಾರ್ಧಿಸಿಕೊಳ್ಳಲು ಚಾರುಕೀರ್ತಿ ಪಂ
           ಡಿತನು ಕುಂಬಳಕಾಯಿಗಳನ್ನು ಮಂತ್ರಿಸಿಹಾಕಿ ಆ ಬಿಲವನ್ನು ಮುಚ್ಚಿದನು ಎಂದು 
           ಜೈನರಲ್ಲಿ ಇತಿಹಾಸವಿದೆ,