ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

385 ಶತಮಾನ] ಸಿದ್ಧನಂಜೇಶ. ಶರಣಜನದಿವಿಜಶರುನರಕರಿವರ | ಹರಹರಣರುಡುರುಳರಶರಭರಣು | ಪುರುಧಿರವಿಶತಪರಿರಸಪರಿಕರಕರಣದುರಿತಚಯಹರ | 6 || ಉದ್ದಂಡ. 1ನೆಯ ಪದ್ಯದಂತೆಯೇ ಇದೆ. 2 ಗುರುರಾಜಚಾರಿತ್ರ. ಇದೂ ವಾರ್ಧಕಸಮ್ಪದಿಯಲ್ಲಿ ಬರೆದಿದೆ; ಸಂಧಿ I6, ಪದ್ಯ 1277. ಇದರಲ್ಲಿ ಪ್ರತಿಪಾದಿತವಾದ ವಿಷಯಗಳು ಈ ಪದ್ಯದಲ್ಲಿ ಹೇಳಿವೆ ಬರೆವೆನಾಚಾವ್ಯರುದ್ಧವವನಾಪರರು ಸತ್ತಿದ್ದು ರುವಂಶಮಂ ಶಿವನ ಪಂಚವಿಂಶತಿಲೀಲೆ | ಹರಪೂಜೆಯಂ ಪಂಡಿತಾರಾಧ್ಯರೊರೆದ ಗಣಸಾಹಸ್ರನಾಮಂಗಳಂ | ಧರೆಯಲ್ಲಿ ಮತ್ತೆ ಶಿವಕೃಪೆವಡೆದ ನೂತನರ | ಹರಪುರಾತನರ ಕಥೆಗಳ ಸಿದ್ಧನಂಜೇಶ | ಗುರುರೂಪದೆಳೊಲಿದು ಗುರುರಾಜಚಾರಿತ್ರದೊಳು ಬುಧರ ಬಗೆ ಬಯಸಲು || - ಈ ವಿಷಯಗಳನ್ನು ತನ್ನ ಗುರುವಾದ ಪಂಚವಣ್ಣಿಗೆಯನಿದ್ದನಂಜೆ ಶನು ಅವನ ಹೆಂಡತಿ ಚೆನ್ನವೀರಾಂಬೆಗೆ ಹೇಳಿದಂತೆಯೂ, ಅವುಗಳನ್ನೇ ತಾನು ವಿಸ್ತರಿಸಿ ಅವನ ಆಜ್ಞಾನುಸಾರವಾಗಿ ಬರೆದಂತೆಯೂ ಕವಿ ಹೇಳು ತಾನೆ, ಗ್ರಂಥಾವತಾರದಲ್ಲಿ ನಿದ್ದನಂಜೇಶ,ಬಸವ ಇವರುಗಳ ಸ್ತುತಿಇದೆ. ಸಂಧಿಗಳ ಅಂತ್ಯದಲ್ಲಿ ಈ ಪದ್ಯವಿದೆ ಧಾತ್ರಿಗುತ್ತವವೆಂಸ ಪೂವಲ್ಲಿಪುರಕಧಿಸ | ಚಿತ್ರಗುರುಪಂಜ ವಜ್ಞೆಗೆಸಿದ್ದ ನಂಜೇಶ | ಪುತ್ರ ಸತ್ಕವಿಕುಲಸ್ತೋತ್ರ ಶ್ರೀಶೈಲನೈರುತ್ಯ ಭಾಗದೊಳೊಪ್ಪುವ || ಕ್ಷೇತ್ರನವನಂದಿ ಮಂಡಲದಸಿಂಹಾಸನಕೆ | ಛತ್ರ ಶಿವಕವಿಸಿದ್ದನಂಜೇಶಕ್ಕತದಿವ್ಯ | ಸ್ತೋತ್ರ ಗರುರಾಜಚಾರಿತ್ರದೊಳು, ಈ ಗ್ರಂಥವು ಅನೇಕವೀರಶೈವಗುರುಗಳ ಮತ್ತು ಕವಿಗಳ ಚರಿತ್ರ ವನ್ನು ಒಳಕೊಂಡಿರುವುದರಿಂದ ನಮಗೆ ಬಹಳಮಟ್ಟಿಗೆ ಸಹಕಾರಿಯಾ ಯಿತು, ಇದರಿಂದ ಅನೇಕ ಸ್ಥಳಗಳಲ್ಲಿ ಅನುವಾದವಾಡಿ ಕವಿಚರಿತೆಯಲ್ಲಿ ಸೇರಿಸಿದ್ದೇವೆ. ಕೆಲವು ಕವಿ-ಳ ಕಾಲವನ್ನು ನಿರ್ಣಯಿಸುವುದಕ್ಕೂ ಈ ಗ್ರಂಥವು ಪ್ರಯೋಜನಕಾರಿಯಾಯಿತು, ಇದರಲ್ಲಿ ಅನೇಕ ಪುರ 49