ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಸೋಮನಾಧ. 113

ಎಂದು ತನ್ನನ್ನು ವಿಶೇಷಿಸಿ ಹೇಳಿ ಕೊಂಡಿದ್ದಾನೆ. ಇವನ ಕಾಲವು ಸುಮಾರು 1650 ಆಗಿರಬಹುದೆಂದು ತೋರುತ್ತದೆ. ಇವನ ಗ್ರಂಥ,

                             ರುಕ್ಮಾಂಗದ ಚರಿತೆ.
ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 9, ಪದ್ಯ 1154. ಇದರಲ್ಲಿ ಮಾಂಧಾತುವಿಗೆ ವಸಿಷ್ಠನು ಬೋಧಿಸಿದ ಹರಿವಾಸರದ ಮಾಹಾತ್ಯ ವನ್ನು ಕವಿ ಕನ್ನಡದಲ್ಲಿ ಹೇಳಿದ್ದಾನೆ. ಕಥಾಗರ್ಭವನ್ನು ರುಕ್ಮಾಂಗದನು

ಮಾಡುವ ಹರಿದಿನವ್ರತನಿಯಮವು ತಾ | ಖೋಡಿ ಹೊದ್ದದ ಮಾಳ್ಕೆಯಲಿ || ನಾಡಿಯಲು ಪೆತ್ತ ಮಗನ ಶಿರವ ಚೆ೦ | ಡಾಡಿದ ಕಥೆಯ ಬಣ್ಣಿಸುವೆ || ಎಂಬ ಭಾಗದಲ್ಲಿ ಸೂಚಿಸಿದ್ದಾನೆ. ಗ್ರಂಥಾರಂಭದಲ್ಲಿ ತೊರವೆಯ ನರಸಿಂಹನ ಸ್ತುತಿ ಇದೆ. ಬಳಿಕ ಕವಿ ಈಶ್ವರ, ಗಣೇಶ, ಸರಸ್ವತಿ, ರಾಮ,ಬಲರಾಮ, ಕೃಷ್ಣ, ಪರಶುರಾಮ, ವ್ಯಾಸ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆ ಯುತ್ತೇವೆ:-

                             ಕೊಳ 

ಉಲಿವ ಕೋಗಿಲೆಗಳೊಪ್ಪುವ ಗಿಳಿವಿಂಡುಗಳ್ | ಸುಳಿದಾಡುತಿಹ ಹಂಸೆಗಳು | ಒಲಿದು ನರ್ತಿಸ ಕೇಕಿ ಚಲಿಸದೊಪ್ಪುನ ಕೋಕ | ಕೊಳನ ಸಂಭ್ರಮವೊಪ್ಪು ತಿಹುದು ||

                          ಸೂಳಗೇರಿ 

ದಾರಿಯೆಡಹುಗಲ್ಲು ನೀರೊಳಗಣ ನಕ್ರ | ವಾರವೆಗಳ ಮುಳ್ಳಿನಂತೆ | ವಾರಾಂಗನೆಯರ ಕೇರಿಕೇರಿಗಳು ಮ | ಹಾರಭಸದೊಳೆ ಪ್ಪುತಿಹುವು ||

                             ಕೈಲಾಸ
ಸಿರದ ಜಡೆಯ ಶೋಭೆ ತರಣಿಸಸಿಯ ತೇಜ | ದರಹಾಸರುಚಿ ದೇಹಕಾಂತಿ | ಗಿರಿಜೆಯಪಾಂಗದೀಧಿತಿ ಗಿರಿಜೇಶನ | ಗಿರಿಯ ಮುಸುಕಿದಂತಿಹುದು |