ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 422 ಕರ್ಣಾಟಕ ಕವಿಚರಿತೆ. [17 ನೆಯ

      ಚಂದ್ರಮ ಸು 1650.ಇವನು ಲೋಕಸ್ವರೂಪವನ್ನು ಬರೆದಿದ್ದಾನೆ. ಈತನು ಜೈನಕವಿ; ಚಂದ್ರಕೀರ್ತಿಯೋಗೀಶ್ವರನ ಶಿಷ್ಯನು; ತುಳುವುಧುರೆಯ ಅಳಿಯರ ಪುರ ದವನೆಂದು

ತುಳುಮಧುರೆಯೆನಿಸ .ಶದೊ | ೪ಳಿ ಮುರಪುರದಲ್ಲಿ ನಿಂದ ವಿಜಯಜಿನೇಂದ್ರ | ಗೊಲಿದೆ ಸೇಪ್ಪ ಕಂದರ | ಇಳೆಯೊಳ್ ವರ್ತಿಸಲಿ ಮೇರುವಿರ್ರನೆ ವರಂ || ಎಂಬ ಪದ್ಯದಿಂದ ತಿಳಿಯುತ್ತದೆ. ಇವನು ಗಣಿತಸಾರ ಎಂಬ ಗ್ರಂಧ ನನ್ನೂ ಬರೆದಿದ್ದಾನೆಂದು ಹೇಳುತ್ತಾರೆ, ಇದು ನಮಗೆ ದೊರೆತಿಲ್ಲ. ಇವನ ಕಾಲವೂ ಸುಮಾರು 165೦ ಆಗಬಹದು. ಇವನ ಗ್ರಂಥ ಲೋಕಸ್ವರೂಪ ಇದು ಕಂದರೂಪವಾಗಿದೆ; ಪದ್ಯ 140 ಇದರಲ್ಲಿ ಮೂರುಲೋಕ ಗಳ ಸ್ಥಿತಿ ವರ್ಣಿತವಾಗಿದೆ. ಸಂಸ್ಕೃತದಲ್ಲಿದ್ದುದನ್ನು ಕನ್ನಡಿಸಿದಂತೆ ಕವಿ ಈ ಪದ್ಯದಲ್ಲಿ ಹೇಳುತ್ತಾನೆ-- ಇದು ಜೆನರಾ ಜನಿರೂಪಿತ | ಸದಮಳಸ್ಯಾದ್ವಾದನೆಂಬ ಪರವಾಗಮದಿಂ || ದೊದವಿಸಿ ಕನ್ನಡದಿಂದಂ | ಮೃದುಮಾರ್ಗದೆ ಪೇರ್ದೆ ಮೂರುಲೋಕಸ್ಥಿತಿಯಂ|| ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ, ಇದರಿಂದ ಒಂದೆರಡು ಪದ್ಯ ಗಳನ್ನು ತೆಗೆದು ಬರೆಯುತ್ತೇವೆ-- ಆರೆಮುರಚಿದ ವೇಲೆಂದಂ | ನೆವ ಮುರಜಮನಿರಿಸಿದಂತೆ ತೋರ್ಪುದು ಲೋಕಂ | ಎರಡೇಟುರಜ್ಜು ವೂರ್ದ್ಯೋ | ತಡಣಗೇಟುರಟ್ಟು ಘನಗೊಂಡಿರ್ಕು೦ | ಅರೆಮುರಜನಧೋಲೋಕಂ | ನೆಮುರಟನದೂರ್ಧ್ವಲೋಕಮದಜರಾದಿ ಯೋಳಂ || ಇರುವುದು ಮಧ್ಯಮಲೋಕಂ | ಅರೆಮುರಜದೊಳೇಬಲಭ್ಯವಿರಟ್ಟಂತರಿತಂ | ಜಂಬೂದ್ವೀಪದ ಮಧ್ಯದಿ/ಕಂಭವ ನಟ್ಟಂತೆ ಮೇರುಗಿರಿಯಿರ್ಪುದದುಂ | ತೊಂಬತ್ತೊಂಬತ್ತುಸಾಸಿರ | ದಿಂಬಿನಯೋಜನಗಳುದ್ದ ಘಾತಸಹಸ್ರಂ ||