ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 434                   ಕರ್ಣಾಟಕ ಕವಿಚರಿತೆ.          [17ನೆಯ
        ಗುರುಚರಣಭಕ್ತಿ ಸುಸ್ಥಿರ | ಸಿರಿಯಿದು ಗುರುಭಕ್ತಿವನಧಿವರ್ಧನರಜನೀ |
        ಕರವಿದು ದುರ್ಗತಿತಮಭಾ | ಸ್ಕರನಿದು ನಿರಯಾದ್ರಿಕುಲಿಶಧರನೀಚರಿತ೦ ||
        ಕೊಳನಂ ಹಂಸೆಯ ನೈದಿಲ | ನಳಿನವ ಶುಕಪಿಕಮಯೂರತತಿಯಂ ಮಂದಾ |
        ನಿಲನಂ ನೆಲನಂ ವರ್ಣಿಪ | ಗಲಭೆಯ ಕೃತಿಯಲ್ಲಮಾಶಶರಣಚರಿತ್ರಂ |
          ಗ್ರಂಥಾವತಾರದಲ್ಲಿ ಸ್ವಗುರುರಾಮನಾಧಸ್ತುತಿ ಇದೆ. ಬಳಿಕ ಕವಿ ಮುದ್ರಾಪುರದ ಪ್ರಸನ್ನರಾಮೇಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ಸರಸ್ವತಿ ಇವರುಗಳನ್ನು ಸ್ಮರಿಸಿ ಅನಂತರ ಬಸವನೇ ಮೊದಲಾದ ಪುರಾತನರನ್ನು ಸ್ತುತಿಸಿದ್ದಾನೆ  ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
                           ಸಮುದ್ರ
      ಗಿರಿಶಂಗೊಲ್ದು ವಿಭೂಷಣಕ್ಕೆ ಶಶಿಯಂ ರೈತ್ಯರಿಗಂ ಪ್ರೇಮದಿಂ | 
      ಸಿರಿಯಂ ಕೌಸ್ತುಭಮಂ ಸುರರ್ಗ್ಗೆ ಸುಧೆಯಂ ದೇವೆಂದ್ರಗೈಶ್ವರ್ಯಮಂ || 
      ಹರುಷಂ ಕೈಮಿಗಲಿತ್ತುದೊಂದು ಘನದಿಂ ಮತ್ತಂ ಧರಾಚಕ್ರದೊಂ |
      ದಿರವು೦ ತನ್ನೊಳಗೆಂಬ ತೇಜದೂರವಿಂದೊಪ್ಪಿತ್ತು ರತ್ನಾಕರಂ ||
                            ಜೂಜು
     ಡಾಳಿಸಿ ಹಾಸಂಗಿಗಳಂ | ಹೇಳಿದ ದಾಯವನೆ ಹಾಯ್ಕಿ ಹೆಚ್ಚಿಸಿ ಗುಣಮಂ | 
     ಸೋಲದೆ ಸಮವೆನಲಾಡುವ | ಲೀಲೆಯ ನೆತ್ತದಲಿ ಜೂಜುಗಾರರ್‌ ಮೆರೆದರ್
                         ಶರಣಭಕ್ತಿ
     ಪುರಮಂ ವನಮಂ ಲತೆಯಂ | ತರುಣಿಯರಂ ಗಿರಿಯ ಕರಿಯ ಶರಧಿಯ ಪೊಗಳು |
     ತ್ತಿರದೆ ಶಿವಶರಣರೆಲ್ಲರ | ಚರಣವ ನೆನೆ ಮನವೆ ಬೇಡಿಕೊಂಬೆ೦ ನಿನ್ನ೦ ||


                         ಬ್ರಹ್ಮರಾಕ್ಷಸ
ಏರುವ ರೋಮ ಕಾರಿರುಳ ಕಾರುವ ಕಾಯವತೀವಭೀತಿಯಂ |
ಬೀರುವ ಕೋರೆದಾಡೆಗಳು ಕೆಂಪಡರ್ದಕ್ಷಿಗಳುಬ್ಬಿದಾನನಂ || 
ತೋರಿತುಮಿಾಸೆ ಜುಂಜುದಲೆಯಂಜಿಸುತಿರ್ಪ ಕರಾಸಿಯುಗ್ರದಾ |
ಕಾರದ ಬ್ರಹ್ಮರಾಕ್ಷಸನು ಕಾನನದಲ್ಲಿರೆ ಕಂಡೆನುರ್ವಿಪಾ !

- ಬಸವ, ಅಲ್ಲಮ, ಅಕ್ಕ, ಮಡಿವಾಳ, ಚೆನ್ನ ಬಸವ, ಸಿದ್ಧರಾಮ, ಮು ಸುಟಿಯಚೌಡ, ಉದ್ಭಟ, ಹಲಾಯುಧ, ಕೇಶಿರಾಜ, ದಾಸ.