ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಲ್ಲಿ ಪುನಾಡು ಎಂದು ಹೆಸರು, ಕೀರ್ತಿಪುರವೆಂಬುದು ಈಗ ಹೆಗ್ಗಡ ದೇವನಕೋಟೆ ತಾಲ್ಲೂಕಿನಲ್ಲಿರುವ ಕಿತ್ತೂರು, ಎರಡನೆಯ ಶತಮಾನ ದಲ್ಲಿದ್ದ ಟಾಲಮಿ ಎಂಬವನು ಪುನ್ನಾ ಟರಾಷ್ಟ್ರ ದ ಹೆಸರನ್ನು ಔನ್ನತ ಎಂದು ಹೇಳಿ ಅದು ವೈಡೂರ ರತ್ನಕ್ಕೆ (Beryt) ಹೆಸರುವಾಸಿಯನ್ನು ಹೊಂದಿದ್ದಿತು ಎಂದು ಬರೆದಿದ್ದಾನೆ. ಮೈಸೂರುಸೀಮೆಗೆ ಮಹಿಪರಾಷ್ಟ) ಅಥವಾ ಮೈಸನಾಡು ಎಂಬ ಹೆಸರು ಉಕ್ತವಾಗಿದೆ ಎಂದು ಹಿಂದೆ ಹೇಳಿದೆಯಮ್ಮೆ ತಮಿಳು ಭಾಷೆಯಲ್ಲಿರುವ ಅಹನಾನೂರು ಎಂಬ ಕವಿಸೂಕಿ ಕದಂಬದಲ್ಲಿ ಸುಮಾ ರು 2ನೆಯ ಶತಮಾನದಲ್ಲಿದ್ದ ಮಾಮೂಲನಾರ್‌ ಎಂಬ ಕವಿಯ ಉಕ್ಕಿ ಯಾದ 115 ನೆಯ ಪದ್ಯದಲ್ಲಿ ಎರುಮ್ಮೆನಾಡು (ಎರುಮೈ-ಮಹಿಷ) ಎಂಬ ಹೆಸರನ್ನು ಹೇಳಿ ಇದು ಪಶ್ಚಿಮ ಪ್ರಾಂತದಲ್ಲಿ (ಕುಡನಾಡು) ಇದೆ ಎಂದೂ ಹೇಳಿದೆ ನಕ್ಕೀರರ್ ಎಂಬ ಮತ್ತೊಬ್ಬ ಪುರಾತನಕವಿಯ ಉಕ್ಕಿ ಯಾದ 36 ನೆಯ ಪದ್ಯದಲ್ಲಿ ನಡುಂಬೆಳರ್ಯ ಎಂಬ ಪಾಂಡ್ಯರಾಜನು ತಲೈಯಾಲಂಕಾನಂ ಎಂಬ ಸ್ಥಳದಲ್ಲಿ ಚೇರ್ರ, ಕೋ೪೯, ತಿತಿರ್ಯ ಎಳಿನಿ, ಎರುಮೈಯರ್ರ (ಮಹಿಷಪುರದವನು) ಇರುಂಕೊವೇರ್ಣಾ, ಪೊರುರ್ನ ಎಂಬ ಏಳು ರಾಜರನ್ನೂ ಯುದ್ಧದಲ್ಲಿ ಸೋಲಿಸಿದಂತೆ ಹೇ ಆದೆ. ಅದೆ ಕವಿಯ ಉಕ್ಕಿಯಾದ ೨೫ ನಯೆ ಸದ್ಯದಲ್ಲಿ ಮಹಿಷಪುರ ದವನು ಬರಗರ ಕುಲದವನು ಎಂದು ಉಕ್ತವಾಗಿದೆ. * ಶಿಲಪ್ಪದಿಕಾರಂ ೦೦೦ಬ ಮತೆ ಇದು ತಮಿಳು ಗ್ರಂಧದಲ್ಲಿ ಸುಮಾರು 2 ನೆಯ ಶತಮಾನ ದಲ್ಲಿ ತೆಂಗುಟ್ಟುರ್ವ ಎಂಬ ಜೇತರ ಜನು ಉತ್ತರದಿಕ್ಕಿಗೆ ಹೋಗುವಾಗ ನೀಲಗಿರಿಯಲ್ಲಿ ತಂಗಿ ಕನ್ನಡರು ಆಡಿದ ಕುಣಿತವನ್ನು ನೋಡಿ ಸಂತೋ ಪ್ರಸಿದನು ಎಂದು ಹೇಳಿದೆ, ಈಯಂಶಗಳಿಂದ ಮು ಸೂರುದೇಶದ ಪಾಚಿ॰ನತೆ ವ್ಯಕ್ತವಾಗುತ್ತದೆ | - ಐದನೆಯ ಶತಮಾನದಲ್ಲಿದ್ದ ವರಾಹಮಿಹಿರನು ತನ್ನ ಬೃಹತ್ಸಂಹಿ ತೆಯಲ್ಲಿ ಕರ್ಣಾಟಕ ಎಂಬ ಹೆಸರನ್ನು ಹೇಳಿದ್ದಾನೆ ಸುಮಾರು 900 ರಲ್ಲಿದ್ದ ರಾಜಶೇಖರನೆಂಬ ಸಂಸ್ಕೃತ ಕತನ್ನ ಕಾವ್ಯಮೀಮಾಂಸೆ ಎಂಬ ಗ್ರಂಥದಲ್ಲಿ ಕರ್ಣಾಟರು ಹೆಮ್ಮೆಯಿಂದ ಟಂಕಾರದೊಡನೆ ಓದು