ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನಕ್ಕೆ ಹಿಂದೆ] ವಾದಿ ಕುಮುದಚಂದ್ರ 11

      ಭುಕಮೀಲೋಕದೊಳಾರೊಳಂ ಜನಿಯಿಸಿತ್ತಿಲ್ಲೆಂಬಿನಂ ವಿಪ್ರಕ |
      ನ್ಯಕೆ ವಿದ್ವಜ್ಜನದಿಂದಮಂದು ಪಡೆದಳ್ ಪಾಂಡಿತ್ಯಸೌಂದರ್ಯಮಂ ||
                    -------
             ವಾದಿ ಕುಮುದಚಂದ್ರ, ಸು. 1100
      ಈತನು ಜಿನಸಂಹಿತೆಯೆಂಬ ನಾಮಾಂತರವುಳ್ಳ ಪ್ರತಿಷ್ಠಾಕಲ್ಪಕ್ಕೆ 
  ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ. ಇವನು ಜೈನಕವಿ ; ಮಾಘಣಂದಿ 
  ಸಿದ್ಧಾಂತಚಕ್ರವರ್ತಿಯ ಮಗನು; ಚತುರ್ವಿಧಪಾಂಡಿತ್ಯ ಚಕ್ರವರ್ತಿ ಎಂದು 
  ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ವ್ಯಾಖ್ಯಾನದ ಆರಂಭದಲ್ಲಿ-
      ಶ್ರೀಮಾಘನಂದಿಸಿದ್ದಾಂತಿ ಚಕ್ರವರ್ತಿತನೂಭವಃ |
      ಕುಮುದೇಂದುರಹಂ ವಚ್ಚಿ ಪ್ರತಿಷ್ಠಾಕಲ್ಪಟಿಪ್ಪಣಂ ||
  ಎಂಬ ಶ್ಲೋಕವೂ, ಅಂತ್ಯದಲ್ಲಿ--
      ಇತಿ ಶ್ರೀಮಾಘನಂದಿಸಿದ್ದಾಂತಚಕ್ರವರ್ತಿಸುತ ಚತುರ್ವಿಧಪಾಂಡಿತ್ಯಚಕ್ರ
  ವರ್ತಿ ಶ್ರೀವಾದಿಕುಮುದಚಂದ್ರಪಂಡಿತದೇವವಿರಚಿತೇ ಪ್ರತಿಷ್ಠಾಕಲ್ಪಟಿಪ್ಪಣೀ 
  ಎಂಬ ಗದ್ಯವೂ ಇವೆ.
      ದೇವಚಂದ್ರನು ತನ್ನ ರಾಮಕಥಾವತಾರದಲ್ಲಿ (1797)  ಪಂಪರಾ 
  ಮಾಯಣದ ವಿಷಯವಾಗಿ ಹೀಗೆ ಬರೆದಿದ್ದಾನೆ---
      ಶ್ರೀಮೂಲಸಂಘ ಬಲೋತ್ಕಾರಗಣ ಶ್ರೀಮಾಘಣಂದಿಸಿದ್ದಾಂತಚಕ್ರವರ್ತಿ 
  ಸುತ ಚತುರ್ವಿಧಪಾಂಡಿತ್ಯ ಶ್ರೀವಾದಿಕುಮುದಚಂದ್ರಪಂಡಿತದೇವರಚಿತರಾಮಾಯಣಸ 
  ಮಾನವಾದ ಶ್ರೀಮದಭಿನವಪಂಪರಚಿತರಾಮಾಯಣ೦.
        ಇದರಿಂದ  ಈ ಕವಿ ಒಂದು ರಾಮಾಯಣವನ್ನೂ ಬರೆದಿರುವಂತೆ  
  ತಿಳಿಯುತ್ತದೆ.  ಅಲ್ಲದೆ ನಾಗಚಂದ್ರನ (ಸು. 1105) ಕಾಲಕ್ಕೆ ಹಿಂದೆ ಇ 
  ದ್ದಂತೆ ತೋರುತ್ತದೆ,  ಇವನ  ಕಾಲವು  ಸುಮಾರು 1100 ಆಗಿರಬಹು
  ದೆಂದು ಊಹಿಸುತ್ತೇವೆ.
      ಬಾಲಚಂದ್ರನು (ಸು. 1170) ! ತನ್ನ ತತ್ವಾರ್ಥತಾತ್ಪರ್ಯವ್ರುತ್ತಿಯನ್ನು
  ಒಬ್ಬ ಕುಮುದಚಂದ್ರ ಭಟ್ಟಾರಕನ ಪ್ರತಿಬೋಧನಾರ್ಥವಾಗಿ ರಚಿಸಿದಂತೆ 
  ಹೇಳುತ್ತಾನೆ.  ಈ ಕುಮುದಚಂದ್ರನು ಬೇರೆ
  ----------------------------------------------------
      1, Vol.I, I97.