ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  12                    ಕರ್ಣಾಟಕ ಕವಿಚರಿತೆ.         [15 ನೆಯ 
                      
                   ಅಚರಾಜ, ಮಲ್ಲಿದೇವ 1 1104 
         ಇವರುಗಳು ಬರೆದ ಅಬ್ಬಲೂರುಶಾಸನದ ವಿವರವು ಪ್ರಥಮಸಂಪು 
   ಟದಲ್ಲಿ ಹೇಳಿಲ್ಲ.  ಈ ಶಾಸನದಲ್ಲಿ ದಂಡನಾಯಕಗೋವಿಂದರಸನು ಏಚಿ
   ಗಾವುಂಡನ ಪ್ರಾರ್ಥನಾನುಸಾರವಾಗಿ  ಅಬ್ಬಲೂರ  ಬ್ರಹ್ಮೇಶ್ವರದೇವಸ್ಥಾ 
   ನಕ್ಕೆ ನಾಗರಖಂಡಕ್ಕೆ ಸೇರಿದ ಮುರಿಗನಹಳ್ಳಿಯನ್ನು ಶೈವಾಚಾರ್ಯನಾದ 
   ಸೋಮೇಶ್ವರಪಂಡಿತನ ಕಾಲಂ ಕರ್ಚಿ ಬಿಟ್ಟಂತೆ ಹೇಳಿದೆ. ಈ ಶಾಸನ
   ದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                       ಶ್ರೀಕಂರದೇವಸ್ತುತಿ 
      ಹರಪಾದಾಂಭೋಜದೊಳ್' ಚಿತ್ತ ಮನೆಸೆವ ಮುಖಾಂಭೋಜದೊಳ್
                                            ಭಾರತೀಸೌ೦ | 
      ದರಿಯಂ ಚಾರಿತ್ರದೊಳ್ ನಿರ್ಮಲತೆಯನಖಿಲಾಶಾಂತದೊಳ್ ಶಕ್ರದಿಕ್ಕುಂ || 
      ಜರಭಾಸ್ವತ್ಕೀರ್ತಿಯಂ ಬಾಪ್ಪುಲೆ ನಿಲಿಸಿದನುಧ್ಯದ್ಗುಣೌಘಂ ಮುನೀಂದ್ರಾ |               
      ಭರಣಂ ಶ್ರೀಕಂಠದೇವಂ ಬುಧಜನತಿಲಕಂ ತರ್ಕವಿದ್ಯಾಸಮುದ್ರಂ ||
                      ಸೋಮೇಶ್ವರಸೂರಿಸ್ತುತಿ. 
      ಕೆಲಬರ್ ತರ್ಕವಿಶಾರದರ್ ಕೆಲಬರಾಪ್ತಾಳಾಪಸಂಬೊಧಕರ್ | 
      ಕೆಲಬರ್ ನಾಟಕಕೋವಿದರ್‌ ಕೆಲಬರೊಳ್ಗಬ್ಬಂಗಳಂ ಬಲ್ಲವರ್‌ ||
      ಕೆಲಬರ್ ವ್ಯಾಕರಣಜ್ಞರಿಂತಿನಿತುಮಂ ಬಲ್ಲನ್ನರಿಲ್ಲೆಲ್ಲಮಂ |
      ಸಲೆ ಸೋಮೇಶ್ವರಸೂರಿ ಬಲ್ಲನನಘಂ ನೈಯಾಯಿಕಾಗ್ರೇಸರಂ || 
      ಅಕಳಂಕಾಮ್ರಕುಜಾತಚೈತ್ರಸಮಯಂ ಲೋಕಾಯತಾಂಭೋಧಿಶೀ | 
      ತಕರಂ ಸಾಂಖ್ಯದಿಶಾದಿಶಾರದನಿ ಮೀಮಾಂಸಾಂಗನಾಕಂಬುಕಂ ||
      ರಕನನ್ಮೌಕ್ತಿಕಭೂಶಣಂ  ಸುಗತನೀರೇಜಾತಚಂಡಾಂಶು ತಾ |
      ರ್ಕಿಕಸೋಮೇಶ್ವರಸೂರಿ ಸೆಂಪುವಡೆದಂ ನೈಯಾಯಿಕಾಗ್ರೇಸರಂ ||
                      ------
               ಮೌಕ್ತಿಕಕವಿ ಸು.  1120
      ಚಂದ್ರನಾಥಾಶ್ಟಕದ ಅಂತ್ಯದಲ್ಲಿರುವ 
      ಕೃತಕೃತ್ಯಂ  ಮೌಕ್ತಿಕಂ ಸತ್ಕವಿ ವಿರಚಿಸಿದೀ ಸಾರಮಪ್ಪಷ್ಟಕಶ್ರೀ |
      ಸ್ತುತಿಯಂಪೇಳ್ದೋದುವಾಲಿಪ್ಪವರ್ಗೆನಿರುಪಮಾನಂದಮಂಮಾಳ್ಕೆ ಸೀತಾ||
    --------------------------------------------------   
       I, Vol, I, 366.