ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ಶತಮಾನಕ್ಕೆ ಹಿಂದೆ]         ಬ್ರಹ್ಮ ಶಿವ                  18

       ಪತಿರಾಮಸ್ಥಾಪಿತೋದ್ಯತ್ತ್ರಿಭುವನತಿಲಕಾಲಂಕೃತಖ್ಯಾತಿನಾಮಾಂ |
       ಕಿತಮಾಗೊಪ್ಪಿರ್ಪ ಪೆಣ್ಣೆಂಗಡಲಪುರವರಾಧೀಶ್ವರಂ ಚಂದ್ರನಾಧಾ ||
   ಎಂಬ   ಪದ್ಯದಿಂದ   ಈ   ಅಶ್ಟಕವನ್ನು   ಬರೆದವನು   ಮೌಕ್ತಿಕ
   ಕವಿಯೆಂದು ತೋರುತ್ತದೆ. ಇಲ್ಲಿ ಹೇಳಿರುವ ಪೆಣ್ಣೆಂಗಡಲು ಅಥವಾ 
   ಹೆಣ್ಣೆಗಡಲು ಎಂಬ ಸ್ಥಳವು ಜೈನರಾದ ಕೊಂಗಾಳ್ವರ ರಾಜ್ಯಕ್ಕೆ ಸೇರಿ 
   ದ್ದಿತು. ಇದನ್ನು ವೀರಕೊಂಗಾಳ್ವದೇವನು ಸುಮಾರು 1120ರಲ್ಲಿ
   ಮೇಘಚಂದ್ರನ ಶಿಷ್ಯನಾದ ಪ್ರಭಾಚಂದ್ರಸಿದ್ದಾಂತದೇವನಿಗೆ ದಾನವಾಗಿ 
   ಕೊಟ್ಟಂತೆ ಒಂದು ಶಾಸನದಿಂದ 1 ತಿಳಿಯುತ್ತದೆ. ಸುಮಾರು 1189ರಲ್ಲಿ
   ಈ ಸ್ಥಳದೊಳಗೆ ಶೈವರು ಪ್ರಬಲರಾಗಿದ್ದಂತೆ ಇತರಶಾಸನಗಳಿಂದ 2 ತಿಳಿ
   ವುದರಿಂದ ಅಲ್ಲಿ ಜೈನರ ಪ್ರಾಬಲ್ಯದ ಕಾಲವು ಸುಮಾರು 1120 ಆಗಿರಬ 
   ಹುದು.  ಆಕಾಲವನ್ನೇ ಕವಿಗೆ ಕೊಟ್ಟಿದ್ದೇವೆ.
       ಈ  ಗ್ರಂಥದಲ್ಲಿ 9 ವೃತ್ತಗಳಿವೆ , ಪ್ರತಿವೃತವೂ ಚಂದ್ರನಾಥ
   ಎಂದು ಮುಗಿಯುತ್ತದೆ.  ಇದರಿಂದ ಒಂದು ಪದ್ಯವನ್ನು ಉದ್ಧರಿಸಿ 
   ಬರೆಯುತ್ತೇವೆ:-
       ಕುಮತೋಗ್ರಗ್ರೀಷ್ಮತಸ್ತಂಗಿದು ಹಿಮಕರಬಿಂಬಂ ಪರಸ್ತೋತ್ರಪಿತ್ತ | 
       ಭ್ರಮಹ್ರುಜ್ಜೆಹ್ವಂಗ ಸೌಧಂ ಕಬಳಮನ್ರುತದುರ್ವಾಸನಾವಾಸಿತಾತ್ಮಂ || 
       ಗಮಳಾಂಭೋಜಂ ಕುದೃಷ್ಟ್ಯಾಮಯಿಗಿದು ಘನಸಾರಾಂಜನಂ ಕುಶ್ರುತಾನ್ಯಾ| 
       ಗಮದುರ್ಮಂತ್ರಂಗೆ ನಿನ್ನಾಕೃತಿಯಿದಮೃತಬೀಜಾಕ್ಷರಂ ಚಂದ್ರನಾಧಾ ||
                       -----
                    ಬ್ರಹ್ಮಶಿವ  ಸು. 1125
       ಈತನು ತ್ರೈಲೋಕ್ಯ ಚೂಡಾಮಣಿಸ್ತೋತ್ರವನ್ನೂ ಬರೆದಿರುವಂತೆ
  ತೋರುತ್ತದೆ. ಈ ಗ್ರಂಥದ 20ನೆಯದಾದ “ಪಡೆದಾಡಂ ತವೆ ಕೊಂದು”
  ಎಂಬ ಪದ್ಯವು 4 ಈ ಕವಿಯ ಸಮಯಪರೀಕ್ಷೆಯಲ್ಲಿ ದೊರೆಯುತ್ತದೆ. 
  ಇದರ ಅಂತ್ಯಭಾಗವನ್ನು ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ಉದಾಹರಿ
  ಸಿದ್ದಾನೆ, ಸಮಯಪರೀಕ್ಷೆಯಲ್ಲಿ ಇರುವಂತೆಯೇ ಈ ಗ್ರಂಥದಲ್ಲಿಯೂ 
  ಅನ್ಯಮತದೂಷಣವು ವಿಶೇಷವಾಗಿದೆ. ಗ್ರಂಥಾಂತ್ಯದಲ್ಲಿರುವ
  ---------------------------------------------
     I, Mysore Archeological Report for I912 13, pala 64 2 Arkalgud 79 and 81 3. Vol. I, 108 4. lbtd , 109.