ಪುಟ:ಕರ್ನಾಟಕ ಗತವೈಭವ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦ನೆಯ ಪ್ರಕರಣ - ಸವದತ್ತಿಯ ರಟ್ಟರು

೭೭


ಸವದತ್ತಿಯ ರಟ್ಟರು

ರಾ

ಷ್ಟ್ರಕೂಟರ ಕಾಲದಲ್ಲಿಯೂ ಚಾಲುಕ್ಯರ ಕಾಲದಲ್ಲಿಯೂ ರಟ್ಟರು ಮಾಂಡಲಿಕ ರಾಜರಾಗಿದ್ದರು. ಮುಂದೆ ಕೆಲವು ದಿವಸ ಸ್ವತಂತ್ರರಾಗಿ ಆಳಿದರು. ಅನಂತರ ದೇವಗಿರಿಯ ಯಾದವರಿಗೆ ತುತ್ತಾದರು. ಇವರ ರಾಜಧಾನಿಯು ಮೊದಲು ಸುಗಂಧವರ್ತಿ ಅಥವಾ ಸವದತ್ತಿಯಲ್ಲಿ ಇತ್ತು. ಮುಂದೆ ವೇಣುಗ್ರಾಮ ಅಥವಾ ಬೆಳಗಾಂವಿಗೆ ಅದನ್ನು ನೂಕಿಸಿದರು. ಇವರ ಶಿಲಾಲೇಖಗಳು ಸೊಗಲ, ನೇಸರ್ಗಿ ಕೊಣ್ಣೂರ, ರಾಯಬಾಗ ಮುಂತಾದ ಊರುಗಳಲ್ಲಿ ದೊರೆಯುತ್ತವೆ. ಇವರು ಲತ್ತನೂರಪುರವರಾಧೀಶ್ವರರೆಂದು ಹೇಳಿಕೊಳ್ಳುತ್ತಾರೆ. ಇವರು ಜೈನರು. ಸುವರ್ಣ ಗರುಡಧ್ವಜವು ಇವರ ಪತಾಕೆಯು; ಇವರು ಸಿಂದೂರ ಲಾಂಛನರು, ಇವರ ವಂಶಾವಳಿಯನ್ನು ಕೆಳಗೆ ಕಾಣಿಸಿದೆ.

ಪೃಥ್ವಿವರ್ಮ
ಶಾಂತಿವರ್ಮ
ಕಾರ್ತವೀರ್ಯ (೯೮೦)
ಅಂಕ (೧೦೪೮)
ಕಾರ್ತವೀರ್ಯ (೧೦೮೬)
ಸೇನೆ
ಕಾರ್ತವೀರ್ಯ
ಲಕ್ಷೀದೇವ (೧೨೦೮)


ಕಾರ್ತವೀರ್ಯ ಮಲ್ಲಿಕಾರ್ಜುನ
ಲಕ್ಷ್ಮೀದೇವ