ಪುಟ:ಕರ್ನಾಟಕ ಗತವೈಭವ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೮೨

ಕರ್ನಾಟಕ ಗತವೈಭವ


ವಿಜಯನಗರದಲ್ಲಿ ಒಟ್ಟು ಮೂರು ವಂಶಗಳು ಆಳಿದವು. ಮೊದಲನೆಯ ವಂಶವು ಸಂಗಮವಂಶವು, ಇದರಲ್ಲಿ ೯ ಜನ ಅರಸರು ಆಗಿಹೋದರು. ಇವರು ಯಾದವರು. ಇವರ ಕುಲದೇವತೆ ವಿರೂಪಾಕ್ಷನು. ಬುಕ್ಕರಾಯನೇ ಈ ವಂಶದಲ್ಲಿ ಪ್ರಬಲನಾದ ಮೊದಲನೆಯ ರಾಜನು (೧೩೫೪-೧೩೭೭). ವಿಜಯನಗರ ದಲ್ಲಿಯ ಕೋಟೆ ಕೊತ್ತಳಗಳನ್ನು ಕಟ್ಟಿಸಿದವನು ಇವನೇ. ಇವನಿಗೆ “ಭಾಷೆಗೆ ತಪ್ಪುವ ರಾಯರ ಗಂಡ”, “ ಪೂರ್ವ- ಪಶ್ಚಿಮ-ದಕ್ಷಿಣ ಸಮುದ್ರಾಧೀಶ್ವರ” ಎಂಬ ಬಿರುದುಗಳಿದ್ದು ವು. ೧೩೬೮ನೆಯ ಇಸವಿಯಲ್ಲಿ ಈತನು ಜೈನರಿಗೂ ವೈಷ್ಣವರಿಗೂ ಉಂಟಾದ ಜಗಳವನ್ನು ತೀರಿಸಿದ ಕಥೆಯು ಮನೋವೇಧಕವಾಗಿದೆ. (೧೪ನೆಯ ಪ್ರಕರಣ ನೋಡಿರಿ.) ಅದರಿಂದ ಈ ಅರಸನು ಧರ್ಮ ವಿಷಯದಲ್ಲಿ ಎಷ್ಟು ಸಮ ಬುದ್ಧಿಯುಳ್ಳವನಿದ್ದನೆಂಬುದು ಗೊತ್ತಾಗುತ್ತದೆ. ಈ ಬುಕ್ಕರಾಯನ ಸೊಸೆಯಾದ ಗಂಗಾದೇವಿಯೆಂಬವಳು "ವೀರಕಂಪಣರಾಯ ಚರಿತ"ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯವೊಂದನ್ನು ರಚಿಸಿದ್ದಾಳೆ. ಅದು ಮೊನ್ನೆ ಮೊನ್ನೆ ಪ್ರಸಿದ್ದವಾಗಿದೆ. ಬುಕ್ಕರಾಯ ಪಟ್ಟಣ ಮುಂತಾದ ಇವನ ಹೆಸರಿನ ಊರುಗಳೂ ಈಗಲೂ ಪ್ರಸಿದ್ದ ವಿರುತ್ತವೆ. ಇವನ ಮಗನಾದ ಹರಿಹರನು ವಿದ್ವಾಂಸರಿಗೆ ಬಹಳ ಆಶ್ರಯಕೊಡುತಿದ್ದನು. ಈ ೨ನೆಯ ಹರಿಹರರಾಯನನ್ನು “ಕರ್ನಾಟಕ ವಿದ್ಯಾವಿಲಾಸ” ವೆಂದು ಕರೆಯುತ್ತಿದ್ದರು. ಈ ಹರಿಹರನ ಕಾಲದಲ್ಲಿ ಗುಂಡನೆಂಬ ಸೇನಾನಾಯಕನು ಅನೇಕ ಶೂರಕೃತ್ಯಗಳನ್ನು ಮಾಡಿದನು. ಹರಿಹರನು ೩೦-೮-೧೪೦೪ ನೆಯ ಇಸವಿಯಲ್ಲಿ ಮರಣಹೊಂದಿದನು.
ನೆಯ ದೇವರಾಯನಿಗೆ ಪ್ರೌಢದೇವರಾಯನೆಂದೂ ಹೆಸರುಂಟು. ಈತನು ಧೂರ್ತ ವಿಚಾರವಾಡಿ ತನ್ನ ಸೈನ್ಯದಲ್ಲಿ ಮುಸಲ್ಮಾನರನ್ನಿಟ್ಟುಕೊಂಡು, ತನ್ನ ಸೈನಿಕರಿಗೆ ಯುದ್ಧಕಲೆಯನ್ನು ಕಲಿಸಿದನು. ಈತನು ೨೪-೫-೧೪೪೬ರಲ್ಲಿ ಸತ್ತನು. ಇವನ ತರುವಾಯ ಈ ಸಂಗಮವಂಶವು ಕುಗ್ಗಿತು. ಮುಂದೆ ವಿಜಯನಗರದ ೨ನೆಯ ವಂಶವು ಎದ್ದಿತು.
ಸಾಳ್ವರ ಮನೆತನ (೧೪೭೯-೧೪೯೬): ಸಂಗಮ ಮನೆತನದ ಕೊನೆಯ ಆರಸನಾದ ವಿರೂಪಾಕ್ಷನ ಮುಖ್ಯ ಸರದಾರನಾದ ಸಾಳ್ವನರಸಿಂಹನು ವಿಜಯ ನಗರದ ಪಟ್ಟವನ್ನು ಸೆಳೆದುಕೊಂಡು ಅರಸನಾದನು. ಮುಸಲ್ಮಾನರಿಗೂ,