ಪುಟ:ಕರ್ನಾಟಕ ಗತವೈಭವ.djvu/೪೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

೩ನೆಯ ಪ್ರಕರಣ - ಕರ್ನಾಟಕ-ವಿಸ್ತಾರ

೧೫


೩ನೆಯ ಪ್ರಕರಣ


ಕರ್ನಾಟಕ-ವಿಸ್ತಾರ

ಕಾವೇರಿಯಿಂದ ಮಾಗೊ | ದಾವರಿವರಮಿರ್ದ ನಾಡದಾ ಕನ್ನಡದೊಳ್ ||
ಭಾವಿಸಿದ ಜನಪದಂ ವಸು | ಧಾವಳಯವಿಲೀನ ವಿಶದವಿಷಯ ವಿಶೇಷಂ ||

– ನೃಪತುಂಗ

ವಾ

ಚಕರೇ! ಹಿಂದಿನ ಪ್ರಕರಣದಲ್ಲಿ ನಾವು ನಿಮಗೆ ಕರ್ನಾಟಕದ ಇತಿಹಾಸ ವನ್ನು ಅಭ್ಯಾಸಿಸಲಿಕ್ಕೆ ಹೇಳಿರುವೆವಷ್ಟೇ! ಆದರೆ ಕರ್ನಾಟಕವೆಂದರೇನು! ಅದರ ವ್ಯಾಪ್ತಿಯೆಷ್ಟು ! ಇದೇ ಮೊದಲು ಮನಸಿನಲ್ಲಿರದಿದ್ದರೆ, ಅದರ ಇತಿಹಾಸವನ್ನು ಅಭ್ಯಾಸಿಸುವ ಬಗೆ ಹೇಗೆ? ಕರ್ನಾಟಕವೆಂದರೆ, ಮುಂಬಯಿ ಇಲಾಖೆಯಲ್ಲಿ ರುವ ಧಾರವಾಡ, ಬೆಳಗಾಂವ, ವಿಜಾಪೂರ, ಕಾರವಾರ, ಈ ನಾಲ್ಕು ಜಿಲ್ಲೆಗಳು; ಮದ್ರಾಸ ಇಲಾಖೆಗೆ ಸೇರಿರುವ ಬಳ್ಳಾರಿ, ಅನಂತಪೂರ, ಮಂಗಳೂರ ಈ ಜಿಲ್ಲೆಗಳು; ಹೈದರಾಬಾದ ಸಂಸ್ಥಾನಕ್ಕೆ ಹೊಂದಿದ ರಾಯಚೂರು, ಕಲಬುರ್ಗಿ ಮೊದಲಾದವುಗಳು; ಇಡೀ ಮೈಸೂರ ಸಂಸ್ಥಾನವು; ಸಾಂಗಲಿ, ಮಿರಜ, ಜಮಖಂಡಿ, ಕೊಲ್ಲಾಪೂರ, ಕುರುಂದವಾಡ, ಮುಧೋಳ, ರಾಮದುರ್ಗ ಮುಂತಾದ ಸಂಸ್ಥಾನದೊಳಗಿನ ಕೆಲವು ಭಾಗಗಳು; ಕೊಡಗು ಪ್ರಾಂತ-ಇವಿಷ್ಟೇ ಎಂದು ನಮ್ಮ ಈಗಿನ ಕಲ್ಪನೆ, ಈ ತಪ್ಪು ತಿಳುವಳಿಕೆಯನ್ನು ನೀವು ನಿಮ್ಮ ತಲೆಯೊಳಗಿಂದ ಮೊದಲು ಕಿತ್ತಿ ಹಾಕಿರಿ! ಹಿಂದಿನ ಕರ್ನಾಟಕವು ಕರಗುತ್ತ ಕರಗುತ್ತ ಹೋಗಿ, ಈಗ ಅದರ ಕಾಲು ಪಾಲು ಮಾತ್ರ ಉಳಿದುಕೊಂಡಿದೆ. ಅದರ ಕೆಲವು ಭಾಗವು ಮಹಾರಾಷ್ಟಕ್ಕೂ, ಕೆಲವು ಭಾಗವು ತೆಲುಗು ಸೀಮೆಗೂ, ಕೆಲವು ಭಾಗವು ಅರವು ಮುಂತಾದ ಭಾಷೆಗಳನ್ನಾಡುವ ಸೀಮೆಗೂ ಸೇರಿಹೋಗಿದೆ; ಆದುದರಿಂದ ನಾವು ಈ ಪ್ರಕರಣದಲ್ಲಿ ಹಿಂದಕ್ಕೆ ಕನ್ನಡ ಭಾಷೆಯ ವಿಸ್ತಾರವು ಎಲ್ಲಿಯವರೆಗಿತ್ತೆಂಬುದನ್ನು ಹೇಳುವವರಿದ್ದೇವೆ.
ಹಿಂದಕ್ಕೆ 'ಕರ್ನಾಟಕ' ಮತ್ತು ಕನ್ನಡ ಭಾಷೆಯ ಪ್ರದೇಶ, ಇವೆರಡೂ ಸಮಾನಾರ್ಥಕ ಶಬ್ದಗಳಾಗಿರಲಿಲ್ಲ. ಕನ್ನಡ ಭಾಷೆಯನ್ನಾಡುವ ಪ್ರದೇಶಗಳಲ್ಲಿ