ಪುಟ:ಕವಿಯ ಸೋಲು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

   ಕಲ್ಲೆದೆಯ ನೀರುಮಾಡಿ
   ಕಣ್ಣೀರು ಹರಿದು ಕೋಡಿ
   ಮಾಲಿನ್ಯ ಹೋಗುತಿರಲು
   ಕರುಣ ರಸ ತುಂಬುತಿರಲು
   ಆರ್ತರಿಗೆ ಮರುಗುವಂತೆ
   ಕೈನೀಡಿ ಸಲಹುವಂತೆ
   ವೇದಾಂತ ನಮಗೆಲ್ಲ ತಿಳಿವ ತರಲಿ
   ಶುದ್ಧಾತ್ಮ ಮಾನವರ ಮಾಡುತಿರಲಿ.

——————

೬೬