ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಪರೀತಕಲ್ಪನೆ.

೧೧

ಆದಾನು ಹೊರಗೆ ದಂಡೆತ್ತಿ ಹೋಗುತ್ತಿದ್ದನು. ಆ ರಣಶೂರರಾಘೋಬನು ಉತ್ತ ರಕ್ಕೆ ದಂಡೆತ್ತಿ ಹೋಗಿ ಅಬದಾಲಿಯ ಮಗನಾದ ತೈ ಮೂರಶಹನನ್ನು ಸೋಲಿಸಿ, ಆತ ನನ್ನು ಅಟಕಪಟ್ಟಣದ ಗಡಿದಾಟಿಸಿ ಅದೇ ಪುಣೆಗೆ ಬಂದಿದ್ದನು.

ಹೀಗೆ ಎಲ್ಲ ಕಡೆಯಿಂದ ತನಗೆ ಜಯಪ್ರಾಪ್ತಿಯಾಗುತ್ತ ಬಂದರಿಂದಲೂ, ತನ್ನ ಸೇನಾಬಲವು ಮಿತಿಮೀರಿ ಹೆಚ್ಚಿದ್ದರಿಂದಲೂ, ತನ್ನ ಯಶೋದುಂದುಭಿಯು ದಿಕ್ಕುದಿಕ್ಕಿಗೆ ಹಬ್ಬಿ, ಅದರ ಪ್ರತಿಧ್ವನಿಯು ಕಿವಿ ಮರಗುಟ್ಟುವಹಾಗೆ ತನಗೆ ಕೇಳಹತ್ತಿದ್ದರಿಂದಲೂ ಮನುಷ್ಯರಚಿತವಾದ ಪೇಶ್ವೇ ಸರಕಾರಕ್ಕೆ ಮನುಷ್ಯ ಸ್ವಭಾವಕ್ಕನುಸರಿಸಿ ಒಂದುಪ್ರಕಾರದ ಹೆಮ್ಮೆಯ ಬಂದಿತು. ಅದರಿಂದ ಆ ಸರಕಾರದ ಕಾರ್ಯದಕ್ಷತೆಯೂ, ದೂರದರ್ಶಿತವೂ, ವಿವೇಕಬುದ್ದಿಯೂ ಸಡಲಹದತ್ತಿದ್ದರೆ ಆಶ್ಚರ್ಯವೇನು? ಈ ಜಗತ್ತಿನಲ್ಲಿ ಇಂದಿನ ವರೆಗೆ ಯಾರಹೆಮ್ಮೆಯೂ ಮಜಲುಗಂಡಿಲ್ಲ. ಸೇರಿಗೆ ಸವ್ವಾಸೇರೆಂಬಂತೆ, ಒಬ್ಬರ ಹೆಮ್ಮೆ ಯನ್ನು ಮುರಿಯಲಿಕ್ಕೆ ಮತ್ತೊಬ್ಬರ ನಿರ್ಮಾಣವು ಆಗೇ ಆಗುವದು. ಅದರಂತೆ, ಮರಾಟರ ಹೆಮ್ಮೆಯನ್ನು ಮುರಿಯಲಿಕ್ಕೆ ಈಗ ಹಿಂದುಸ್ಥಾನದ ವಾಯವ್ಯಮೂಲೆಯಲ್ಲಿ ಒಬ್ಬರನು ಉತ್ಪನ್ನನಾಗಿದ್ದನು. ಅವನೇ ಅಹಮ್ಮದಶಹಾ ಅಬದಾಲಿಯು, ಅಬದಾಲಿಯು ಸಾಮಾನ್ಯಕೋಟೆಯೊಳಗಿನ ಮನುಷ್ಯನಿದ್ದಿಲ್ಲ; ಶಿವಾಜಿಮಹಾರಾಜ, ಮೊದಲನೇ ಬಾಜೀರ -ರಂತೆ ಹುಟ್ಟಾ ಬುದ್ದಿಶಾಲಿಯೂ, ದೂರದರ್ಶಿಯೂ ಆದ ಪುರುಷನಾಗಿದ್ದನು. ನಮ್ಮ ಕಡೆಯ ಮೊಗಲಸರದಾರರಂತೆ ಆತನು ವಿಷಯಾಸಕ್ತ ನಿದ್ದಿಲ್ಲ. ಮಂದಿಯಬೊಗಸೆಯಿಂದ ನೀರು ಕುಡಿಯುವದಂತು ಆತನಿಗೆ ಗೊತ್ತೇ ಇದ್ದಿಲ್ಲ. ಆತನ ಶೌರ್ಯ, ಚಟವಟಿಕೆ, ಶಿಸ್ತು, ದೂರದೃಷ್ಟಿ, ಧೈರ್ಯ, ದರ್ಪ ಈ ಗುಣಗಳು ಹೊಗಳತಕ್ಕವಾಗಿದ್ದವು. ಆತನು ಪ್ರಸಿದ್ಧ ನಾದಿರಶಹನ ಕೈಯಲ್ಲಿ ನುರಿತವನಾಗಿ ದನು, ಅಂದಬಳಿಕ ಕೇಳುವದೇನು? ಗುರುವಿನಂತೆ ಶಿಷ್ಯ!ಅದಾಲಿಯು ಈ ಮೊದಲೆ ತನ್ನ ರಾಜ್ಯವಾದ ಅಫಗಾಣಿಸ್ಥಾನದಿಂದ ಹೊರಟು ಹಿಂದುಸ್ಥಾನದಲ್ಲಿ ನುಗ್ಗಿ ಪಂಜಾಬ ಪ್ರಾಂತವನ್ನು ಕೈವಶಮಾಡಿಕೊಂಡು ಅದಕ್ಕೆ ತನ್ನ ಮಗನಾದ ತೈಮೂರಶಹನನ್ನು, ಸುಬೇದಾರನಾಗಿ ನಿಯಮಿಸಿದ್ದನು. ಮೇಲೆ ಹೇಳಿದಂತೆ ರಾಘೋಬಾದಾದಾನು ಆ ತೈಮೂರಶಹನನ್ನು ಓಡಿಸಿ ಪಂಜಾಬವನ್ನು ಸ್ವಾಧೀನಪಡಿಸಿಕೊಂಡದ್ದರಿಂದ, ಅಲದಾ ಲಿಯು ಸಿಟ್ಟಾಗಿ ಈಗ ಮತ್ತೆ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಿದ್ದನು.

ಅಬದಾಲಿಯ ಅಬರಕ್ಕೆ ಶಿಂದೆ ಹೋಳಕರ ಮಾದಲಾದ ಉತ್ತರದಕಡೆಯ ಮರಾಟಾ ಸರದಾರರು ಈಡಾಗಲಿಲ್ಲ. ರಘೋಬಾದಾದಾಸಿಂದ ಪಂಜಾಬದ ಸುಬೇದಾರನಾಗಿ ನಿಯಮಿಸಲ್ಪಟ್ಟಿದ್ದ ಶಾಬಾಜಿರಾವ ಸಿಂದೆಯವರನ್ನು ಅಬದಾಲಿಯು ಹೊಡೆದೋಡಿಸಿ, ನೆಟ್ಟಗೆ ದಿಲ್ಲಿಯಮೇಲೆ ಸಾಗಿಬಂದನು; ಯಾಕಂದರೆ, ಆಗಿನ ದಿಲ್ಲಿಯ ಬಾದಶಹನಾದ ಎರಡನೇ ಅಲಮುಗೀರನೂ, ಆತನ ವಜೀರನಾದ ಗಾಜುದ್ದೀನಖಾನನೂ ಮರಾಟರ ಪಕ್ಷ ದವರಾಗಿದ್ದರು. ಹೀಗೆ ಅಬದಾಲಿದು ಅಬ್ಬರಿಸಿ ಉತ್ತರಹಿಂದುಸ್ಥಾನದ ಮರಾಟರ ಅಧಿಕಾರಕ್ಷೇತ್ರದ ನೆಲಗಟ್ಟನ್ನು ಅದರಿಸಹತ್ತಿದ ಸುದ್ದಿಯು ಪುಣೆಗೆ ಮುಟ್ಟಿತು; ಆದರೆ