ಪುಟ:ಕೋಹಿನೂರು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕೊಹಿನುರು wx ಒಂದು ತಡವೆ ನೋಡಿ ಕಳೆದುಕೊಂಡಿದ್ದಾ ಅಪಾರ್ಥಿವನಿಧಿಯೇ ಇದೂ : ಹರನ ಚಡದಿಂದ ಸ್ಥಲಿತವಾದ ಶುಧಾಂಶುಲೇಖೆಯು ಎಂಟುವರ್ಷಗಳಾದ ಬಳಿಕ ನಿನ್ನಿನ ಸಾಯಂಕಾಲ ಸ್ವಪ್ನದಲ್ಲಿ ರತ್ನಗಿರಿಯಮೇಲೆ ಮಂದಾಕಿನಿಯ ಮರಳಲ್ಲಿ ಪೂರ್ಣ ಸೌಂದರ್ಯದಿಂದಲೂ ನೋಡಶ ಕಳೆಗಳಿಂದಲೂ ಕಣೋಳಿಸಿದದು. ಇದೇ ಅದೊ ! ಅಹುದು, ಆ ಪೂರ್ಣಶಶಿರೂಪಿಣಿಯಾದ ದಿವ್ಯ ಕಾಂತಿಮಯಿ ಯಾದ ಮನೋಹರವಾದ ಮೂರ್ತಿಯೇ ಇದು ! ಕೃಷಿಕಯುವಕನು ದುರ್ಗಾದಾಸನ ಅಪ್ಪಣೆಯಪ್ರಕಾರ ನೆಲದಮೇಲೆ ಮಂಡಿಯನೂರಿ ಅಭಿವಾದನ ಮಾಡುವುದಕ್ಕೆ ಹೋಗಿ ಜ್ಞಾನಹೋದವನ ಹಾಗಾಗಿ ಮನೋಹರವಾದಾ ಮೂರ್ತಿಯ ಚರಣಗಳ ತಲದಲ್ಲಿ ಉರುಡಿಬಿದ್ದನು, ಇದ್ದಕ್ಕಿದ್ದಹಾಗೆ ಅಕಾರಣವಾಗಿ ಅಂಬರದ ರಾಜಕುಮಾರಿ ಅಂಬಾಲಿಕೆಗೆ ಶರೀರವು ಕಂಟಕಿತವಾಗಿ ಹೃದಯವ ಅದುರಲಾರಂಭಿಸಿ ಚೇತನ ಹೊಗುತ್ತ ಬಂದು, ' ಹಾ ! ದೇವಿ ! ಸ್ವಪ್ನ ವು ಸತ್ಯವಾಗುವುದುಂಟೆ ! - ಎಂದು ಹೇಳುತ್ತ ರಾಜಮಹಿಷಿ ಅರುಂಧತಿಯ ಪಾದಮೂಲದಲ್ಲಿ ಮೂರ್ಛಗೊಂಡು ಬಿದ್ದು ಬಿಟ್ಟಳು. ಐ ದ ನೆ ಯ ಸ ರಿ ಚೇ ದ. ಅವರಂಗಜೇಬನು ಸಿಂಹಾಸನವನೇರಿದ ಸ್ವಲ್ಪ ಕಾಲದಲ್ಲೇ ಅಮಿತಹರಾ ಕ್ರಮಶಾಲಿಯಾದ ಯೋಧಪುರದ ರಾಚಾ ಯಶೋವಂತಸಿಂಹನನ್ನೂ, ಅಂಬ ರಾಧಿಪ ವೀರಕೇಸರಿಯಾದ ಜಯಸಿಂಹನನ್ನೂ ವಿನಾಶ ಮಾಡಿದ ಹೊರತು ಆರ್ಯಾವರ್ತದಿಂದ ಹಿಂದೂಗಳ ಗೌರವವ ವಿಲುಪ್ತವಾಗುವ ಸಂಭವವಿಲ್ಲವೆಂದು ತಿಳಿದುಕೊಂಡನು. ಸ್ವಲ್ಪ ಕಾಲದಲ್ಲಿಯೋ, ನರರೂಪಿಯಾದಾ ದಾನವನಿಗಿದ್ದ ದೇವರಕ್ತದ ತೃಷೆಯ ತೃಪ್ತಿಯನ್ನು ಹೊಂದಿತು. ಪಾಪದ ಪೂರ್ಣಾವತಾರ ಸಾಗಿದ್ದ ಅವರುಗಷಹನು ಯುವರಾಚಾ ಪೃಥ್ವಿ ಸಿಂಹನನ್ನು ವಿನಾಶ ಮಾಡಿ, ವಿಷಪ್ರಯೋಗದಿಂದ ಪುತ್ರಶೋಕಾತುರನಾದ ಯಶೋವಂತಸಿಂಹನ ಅಮೂಲ್ಯ. ವಾಡ ಪ್ರಾಣವನ್ನೂ, ವೀರಧರ್ಮಪರಾಯಣನಾದ ಜಯಸಿಂಹನ ಪ್ರಾಣವನ್ನೂ ಪರಣಮಾಡಿದನು, ಆದರೆ ಅಷ್ಟರಿಂದಲೇ ತೃಪ್ತನಾಗಲಿಲ್ಲ. ಯೋಧಪರಕ