ಪುಟ:ಕೋಹಿನೂರು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇಚ

wwkme yuwwwmmmawa ರಾಜನಿಗೆ ನೂತನವಾಗಿ ಹುಟ್ಟಿದ್ದ ಶಿಶುವು ಜೀವದಿಂದಿದ್ದರೆ ಅವನ ಮನಸ್ಸಿಗೆ ಶಾಂತಿಯಿಲ್ಲ, ಸಮಾಜನು ತನ್ನ ಅನುಚರರನ್ನು ಕುರಿತು, ಕೌಶಲದಿಂದಾಗಲೀ, ಬಲಪ್ರಯೋಗದಿಂದಾಗಲೀ, ಆಶೆದೋರಿಸುವುದರಿಂದಾಗಲೀ, ಶಿಶುವಾಗಿದ್ದ ರಾಜಕುಮಾರನನ್ನು ತಾಯಿಯ ಕೈಯಿಂದ ತಪ್ಪಿಸಿ ತೆಗೆದುಕೊಂಡು ಬಂದು ಜಿಲ್ಲಾದನ (ಎಂದರೆ, ಗಲ್ಲಿಗೆ ಹಾಕುವ ಕಟುಕನ) ವಶಮಾಡಬೇಕೆಂದು ಅಪ್ಪನ ಮಾಡಿದನು, ನಿಷ್ಟುರ ಸಮಾಜನಾ ನಿಷ್ಟುರವಾದ ಅಪ್ಪಣೆಯನ್ನು ದುರ್ಗಾ ದಾಸನು ಕೇಳಿದನು. ಪುತ್ರಶೋಕಾತುರೆಯಾಗಿಯ ಪತಿ ನಿಯೋಗದಿಂದ ವ್ಯಸನಭಾರಾಕ್ರಾಂತೆಯಾಗಿಯ ಇದ್ದ ರಾಜಮಹಿಷಿಯನ್ನು ಅವಳಿಗೆ ತೌರು ಮನೆಯಾದ ಮಿನಾರಾಧಿಸನ ಬಳಿ ಅವನು ಕರೆದುಕೊಂಡು ಹೋಗಿ, ಸ್ವಲ್ಪ ಕಾಲ ಅಲ್ಲಿರಲು ಬಿಟ್ಟು ಬಂದು, ಬಳಿಕ ಯುದ್ಧಕ್ಕೆ ಸನ್ನದ್ಧನಾಗುವುದರಲ್ಲಿ ಪ್ರಸೃತ್ತ ನಾದನು, ಆ ಸಮಯದಲ್ಲಿ ಅಂಬರದ ರಾಚಾ ಜಯಸಿಂಹನ ಎರಡನೆಯ ಮಹಿಷಿಯು ತನ್ನ ಹೆಣ್ಣು ಶಿಶುವನ್ನು ರಾಣನ ಬಳಿ ಒಪ್ಪಿಸಿ, ಗತಿಸಿಹೋದ ಗಂಡನ ಉದ್ದೇಶದಲ್ಲಿ ಅಗ್ನಿ ಪ್ರವೇಶಮಾಡಿ ಪ್ರಾಣವನ್ನು ಬಿಡಬೇಕೆಂದು ಮಿವಾರಿಗೆ ಬಂದಿದ್ದಳು. ಈ ಕಥೆಯ ಪ್ರಾರಂಭದಲ್ಲಿ ಪಾಠಕರು ಗಂಡನಿಲ್ಲದ ಅಂಬರದ ರಾಣಿಯನ್ನು ರಾಜಸಮುದ್ರ ಕೆರೆಯ ಪಾರ್ಶ್ವದಲ್ಲಿದ್ದ ವಿಷ್ಣು ಮಂದಿ ರದ ಮಹಾದ್ವಾರದಲ್ಲಿ ಯೂ ಅವಳ ಮಗಳನ್ನು ಕಿಂಶುಕತರುತಲದಲ್ಲಿಯೂ ನೋಡಿರುವರು, ಉದಯಪುರದಲ್ಲಿ ಗಂಡಂದಿರಿಲ್ಲದ ರಾಣಿಯರಿಬ್ಬರಿಗೂ ಪರಸ್ಪರ ಸಂದರ್ಶನವಾಯಿತು, ಅಂಬರದ ರಾಣಿಯು ತನ್ನ ಹೆಣ್ಣು ಶಿಶುವನ್ನು ಯೋಧ ಪುರದ ಮಹಿಮೆಯ ಬಳಿಯಲ್ಲಿ ಬಿಟ್ಟು ಮೃತಪತಿಯ ಉದ್ದೇಶವಾಗಿ ಚಿತಾರೋ ಹಣಮಾಡಿದಳು, ಅದು ಮೊದಲ್ಗೊಂಡು ಇದುವರೆಗೂ ಎಂಟುವರ್ಷಕಾಲ ಅಂಬರದ ರಾಜಕುಮಾರಿ ಅಂಬಾಲಿಕೆಯು ರಾಣಿ ಅರುಂಧತಿಯ ಪೋಷಣೆಯಲ್ಲಿ ರುತಿದ್ದಳು, ವೀರನಾದ ದುರ್ಗಾದಾಸನು ಯುದ್ಧ ಸನ್ನಾ ಹಗಳನ್ನು ಪೂರೈಸಿ ಕೊಂಡು, ಯಶೋವಂತಸಿಂಹನ ಗಂಡುಮಗು ಅಜಿತಸಿಂಹನನ್ನು ಕರೆದು ಕೊಂಡು ಹೋಗಿ, ದುರ್ಗಮವಾದಾ ಬೆಟ್ಟದಲ್ಲಿ ಏಕಾಂತ ಸ್ಥಳದಲ್ಲಿ ಬಚ್ಚಿ ಚೈನು, ನಂಬಿಕೆಯುಳ್ಳ ಸೇನಾಪತಿ ಮುಕುಂದದಾಸನಿಗೂ ಮತ್ತೆ ಕೆಲವು ಪ್ರಭು . ಭಕ್ತರಾದ ಅನಚರರಿಗೂ ಹೊರತು ಮತ್ತಾರಿಗೂ ಆ ಏಕಾಂತಸ್ಥಳವು ತಿಳಿದಿರ ಇಲ್ಲ. ವೀರರಮಣಿಯಾದ ಅರುಂಧತಿದೇವಿಯು ದುರ್ಗಾದಾಸನ ಬಳಿ ಇದ್ದು