ಪುಟ:ಕೋಹಿನೂರು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳ ಕೊಹಿನುರು ವಿಲಾಸಕುಮಾರಿ-ಹಾಗಾದರೆ, ಹೊರಡು, ವೀರವರ ! ನಿನ್ನನ್ನು ಕಾಣೋರ ಸೇನಾಪತಿಯ ಮಾತೃಗೃಹಕ್ಕೆ ಕರೆದುಕೊಂಡು ಹೋಗುವೆನು. ಈ ಇಬ್ಬರೂ ಪರ್ವತದ ಸಮತಲಭೂಮಿಯ ಮಾರ್ಗವಾಗಿ ಹೋದರು. ನಾಲ್ಕು ಕಡೆಗಳಲ್ಲ ನಿಶ್ಯಬ್ದ-ಆಕಾಶದೊಂದು ಪ್ರಾಂತದಲ್ಲಿದ್ದ ಚಂದ್ರನ ನೀರ ವವಾಗಿ ನಕ್ಕು ರಮಣಿಯ ಸುಧಾಂಶುವದನದಲ್ಲಿ ಸುಧಾರಾಶಿಯನ್ನು ಸುರಿದನು. ಕೃಷಿಕನು ಪೂರ್ಣದೃಷ್ಟಿಯಿಂದ ರಮಣಯ ಮುಖವನ್ನು ನೋಡಿದನು, ಪೂರ್ಣ ಚಂದ್ರನ ಕಿರಣದ ಜೊಂಪಲು ಬಿದ್ದು ಪೂರ್ಣ ಗೌರವದಿಂದ ಪ್ರಕಾಶಗೊಂಡಾ ಸುಂದರ ರವ ಣಿಯ ವದನವು ಇದ್ದಕ್ಕಿದ್ದ ಹಾಗೆ ಕೃಷಿಕನ ಅಂತಸ್ತಲವನ್ನು ಕಡೆದು ಮಸಕಾಗಿ ಮಲಗಿದ್ದ ಬಹುಕಾಲಕ್ಕೆ ಹಿಂದಿನ ಚಿಕ್ಕಂದಿನ ನೆನವನ್ನೆಬ್ಬಿಸಿ ನಾನು ಆ ಕಾಲದಲ್ಲಿ ಇಂತಹ ನಿರ್ಮಲವಾದ ಬೆಳದಿಂಗಳ ರಾತ್ರಿ ಹಾಗಿದ್ದ ಬಾಲೆಯೊಬ್ಬಳ ಮುಖವನ್ನು ನೋಡಿದ್ದ ಹಾಗೆ ತೋರಿತು. , ಕೂಡಲೇ ಕೃಷಿ ಕನು ಚಕಿತನಾಗಿ, ತಮ್ಮನ್ನು ಮೊದಲು ಎಲ್ಲಾದರೂ ನಾನು ನೋಡಿದ್ದೇನೆ ? ಎಂದು ಕೇಳಿದನು. ' ಆದಿನ ನಿರ್ಜನ ಪ್ರಾಂತದಲ್ಲಿಯೂ ಕಾಳಿಂದಿ ನದಿಯ ತೀರದಲ್ಲಿಯ ನೋಡಿದ್ದುದು ಈಗ ಮರೆತು ಹೋಯಿತೆಂದು ತೋರುತ್ತದೆ.೨೨ “ ಅದಕ್ಕೆ ಪೂರ್ವ, ಅನೇಕ ದಿನಗಳಿಗೆ ಹಿಂದೆ, ಚಿಕ್ಕಂದಿನಲ್ಲಿ ತಮ್ಮನ್ನು ಎಲ್ಲೋ ನೋಡಿದ್ದಹಾಗೆ ತೋರುತ್ತದೆ. ಎಲ್ಲಿ ನೋಡಿದ್ದೆನೋ ನೆನವರಿ ಕೆಯಿಲ್ಲ, 39 ಚಂದ್ರಕಿರಣದಿಂದ ಪ್ರಕಾಶಗೊಂಡಿದ್ದಾ ರಮಣಿಯ ಮುಖವು ಅಂಧ ಕಾರದ ಛಾಯೆಯಿಂದ ಮಸಕಾಯಿತು ಅವಳು ಕ್ಷಣಮಾತ್ರ ಸುಮ್ಮನಿದ್ದು, “ ನಿನಗೆ ಭ್ರಮೆಯುಂಟಾಗಿರಬೇಕು, ನನ್ನ ಹಾಗೆ ಯಾರೋ ಮತ್ತೊಬ್ಬ ಕೆಟ್ಟ ಮೋರೆಯವಳನ್ನು -ಅದು ಹೇಗಾದರೂ ಆಗಲಿ-ಎದುರಿಗೆ ನೋಡು, ರಾಶೋರ ಸೇನಾಪತಿಯ ಕೆಂಪು ಬಾವುಟೆಯು ಕಾಣುತ್ತದೆ, ನೀನು ಮಾಡಿದ ಪ್ರತಿ ಜ್ಞೆಯು ನೆನಪಿನಲ್ಲಿರಲಿ-ಮೊದಲು, ಯುದ್ದ - ಕಡೆಗೆ, ಪ್ರೇಮು ೨೨ ಎಂದು ಹೇಳಿ ದಳು ಇಲೂk