ಈ ಪುಟವನ್ನು ಪ್ರಕಟಿಸಲಾಗಿದೆ
ಮಹಾಪ್ರಸ್ಥಾನ
೪೨೧
"ಲಿಂಗಾಂಗಿಯಾದ ಶರಣನ ಪ್ರಾಣವೇ ಲಿಂಗವಾಗಿತ್ತಾಗಿ ಆ ಪ್ರಾಣಲಿಂಗಕ್ಕೆ ಸ್ವರವೆಂಬ ವಾಯುವೇ ಸಿಂಹಾಸನವಾಗಿ, ಕಾಲೇ ಕಂಭವಾಗಿ, ದೇಹವೇ ದೇಗುಲವಾಗಿ, ಶಿರವೇ ಸುವರ್ಣದ ಕಲಶವಾಗಿ, ಪ್ರಾಣದಲ್ಲಿ ಲಿಂಗಪ್ರತಿಷ್ಠೆಯಾದ ಮೇಲೆ ಅವನು ಜೀವನ್ಮುಕ್ತನಾಗುತ್ತಾನೆ. ಸಂಬಂಧ ಪಲ್ಲಟಿಸಿ ಅವನು ಪುನಃ ಜೀವನಾಗುವುದಿಲ್ಲ ಎಂಬುದು ವಚನದ ಫಲಿತಾರ್ಥ.+
"ಆ ಮೇಲಿನ ಮೂರು ವಚನಗಳು ತತ್ವಶಾಸ್ತ್ರ ಅನುಭಾವಗಳ ಕವಿತಾ ರೂಪವಾದ ಮೂರು ಅನುಪಮ ಮುಕ್ತಕಗಳು.
- ೧
- ತೆರೆಯ ಮರೆಯ ಕುರುಹೆಂಬುದೇನೋ?
- ಒಳಗೆ ಲಿಂಗದ ಅನುವಿಡಿದ ಬಳಿಕ ಪೂಜಿಸುವನಾರೋ?
- ಪೂಜಿಸಿಕೊಂಬ ದೇವನಾರೋ?
- ಹಿಂದು ಮುಂದು, ಮುಂದು ಹಿಂದಾಯಿತ್ತು!
- ಗುಹೇಶ್ವರಾ,
- ನಾನು ನೀನು, ನೀನು ನಾನಾದ ಬಳಿಕ
- ಮತ್ತೇನುಂಟು ಹೇಳಾ!
- ೨
- ನೆನೆ ನೆನೆಯೆಂದೊಡೆ ಏನ ನೆನೆವೆನಯ್ಯ!
- ಎನ್ನ ಕಾಯವೇ ಕೈಲಾಸವಾಗಿತ್ತು!
- ಮನ ಲಿಂಗವಾಯಿತ್ತು! ತನು ಸೆಜ್ಜೆಯಾಯಿತ್ತು!
- ನೆನೆವರೆ ದೇವರುಂಟೇ? ನೋಡುವರೆ ಭಕ್ತರುಂಟೇ?
- ಗುಹೇಶ್ವರಾ, ಲಿಂಗಲೀಯವಾಯಿತ್ತು!
- ೩
- ಗಿಡುವಿನ ಮೇಲಣ ತುಂಬಿ
- ವಿಕಸಿತವಾಯಿತ್ತು ತುಂಬಿ, ನೋಡಾ! ಆ
- ತುಮ ತುಂಬಿ ನೋಡಾ,
- ಪರಮಾತುಮ ತುಂಬಿ, ತುಂಬಿ ನೋಡಾ!
- ಗುಹೇಶ್ವರನೆಂಬ ಲಿಂಗಕ್ಕೆ ಎರಗಿ
- ನಿಬ್ಬೆರಗಾಯಿತ್ತು ತುಂಬಿ ನೋಡಾ!*
____________
+ ಪ್ರಭು ದೇವರ ವಚನಗಳು, ಪುಟ ೧೦೦.
- ಲಿಂಗಲೀಲಾ ವಿಲಾಸ ಚಾರಿತ್ರ, ಪುಟ ೩೧೪.