ಪುಟ:ಚಂದ್ರಮತಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯ ಚ೦ದ್ರಮತಿ, ಒಳಗಣಿಂದ ಬಂದು, ಚಂದ್ರಮತಿಯು ಏನುಮಾಡುವಳೋ ನೋಡಬೇ ಕೆಂದು ಮರೆಯಲ್ಲಿ ನಿಂತು ನೋಡುತಲಿದ್ದನು. ಚಂದ್ರಮತಿಯು ಸ್ವಲ್ಪ ಕಾಲ ಆಲೋಚಿಸಿ, ತಾನು ಹಣ್ಣುಗಳನ್ನು ಕೊಂಡುಕೊಳ್ಳಬೇಕೆಂದು ತಂದಿದ್ದ ದುಡ್ಡನ್ನು ಸೆರಗಿನಿಂದ ಬಿಚ್ಚಿ ತೆಗೆದು, ಅವರಲ್ಲಿ ತರುಣರಾಗಿದ್ದವರಿಗಾರಿಗೂ ಕೊಡದೆ ಒಬ್ಬ ಮುದುಕನಿಗೆ ಕೊಟ್ಟು ಕಳುಹಿಸಿಬಿಟ್ಟಳು. ಅನಂತರ ವಿದ್ಯಾಸಮುದ್ರನು ಹೊರಕ್ಕೆ ಬಂದು, ಚಂದ್ರಮತಿಯನ್ನು ನೋಡಿ “ ಎಲ್‌! ಇಲ್ಲಿ ನಿಂತಿದ್ದ ಆ ಜನರೊಡನೆ ಏನು ಮಾತಾಡುತ್ತಿದ್ದೆ?” ಎಂದು ಕೇಳಿದನು. - ಚಂದ್ರ ಅವರು ಇಲ್ಲಿಗೆ ಬಂದು ತಮಗೇನಾದರೂ ಕೊಡಬೇಕೆಂದು ನನ್ನನ್ನು ಬಹುವಾಗಿ ಪೀಡಿಸಿದರು. ಎಲ್ಲರೂ ಕಷ್ಟ ಪಟ್ಟು ಕೆಲಸಮಾಡ ಬೇಕೆಂದು, ಜೀವನೋಪಾಯಕ್ಕೋಸುಗ ಕಷ್ಟ ಪಡಲು ಸಮರ್ಥರಾಗಿರ ಲೆಂದೇ ಭಗವಂತನು ಎಲ್ಲರಿಗೂ ಕೈ ಕಾಲು ಮೊದಲಾದ ಅವಯವಗಳನ್ನು ದಯಪಾಲಿಸಿರುವನೆಂದೂ ಮೊನ್ನೆಯದಿನ ತಾವು ಅಪ್ಪಣೆ ಕೊಡಿಸಿರಲಿಲ್ಲವೆ? ಆದುದರಿಂದ ಒಬ್ಬರಿಗೊಬ್ಬರು ಕೊಡಬೇಕಾದ ಆವಶ್ಯಕವಿಲ್ಲವೆಂದು ನನಗೆ ತೋರಿತು. ಆದರೂ ಅವರ ಸಮೂಹದಲ್ಲಿದ್ದ ಒಬ್ಬ ವೃದ್ದನನ್ನು ನೋಡಿ ದಾಗ ಅವನನ್ನು ಸುಮ್ಮನೆ ಕಳುಹಿಸಿ ಬಿಡುವುದಕ್ಕೆ ಮನಸ್ಸು ಬಾರದೆ ತಿಂಡಿ ಗೋಸುಗ ತಂದಿದ್ದ ದುಡ್ಡನ್ನು ಅವನಿಗೆ ಕೊಟ್ಟುಬಿಟ್ಟೆನು. ಗುರು--ನೀನು ತಿಳಿಯದೇ ಮಾಡಿರುವದಾದರೂ ಆ ಮುದುಕನಿಗೆ ಕೊಟ್ಟುದು ಬಲು ಒಳ್ಳೆಯದಾಯಿತು. ಅನ್ಯರನೇ ನಂಬಿಕೊಂಡಿರದೆ ತನ್ನ ಜೀವನಕ್ಕೋಸುಗ ತಾನೇ ಪಾಡುಪಡಬೇಕಾದುದು ಪ್ರತಿಮನುಷ್ಯ ನಿಗೂ ಆವಶ್ಯಕವೇ ಆಗಿದ್ದರೂ, ಮಹಾರಾಜನು ಮೊದಲ್ಗೊಂಡು ಗರ್ಭ ದರಿದ್ರನವರೆಗೂ ಅನ್ನೋನ್ಯಸಾಹಾಯ್ಯವು ಆವಶ್ಯಕವಾಗಿ ಬೇಕಾಗಿರು ವುದು. ನೀವು ಪ್ರತಿದಿನವೂ ಭುಂಜಿಸುವ ಪಂಚಭಕ್ಷ್ಯ ಪರಮಾನ್ನಗಳಿಗೆ ಬೇಕಾಗುವ ಪದಾರ್ಥಗಳು ಹೇಗೋ, ಬಡವರು ಕುಡಿಯುವ ಗಂಜಿಗೆ ಬೇಕಾಗುವ ಅಕ್ಕಿಯೂ ಹಾಗಯೇ ಹಲವರು ಶ್ರಮಪಟ್ಟಲ್ಲದೆ ಲಭಿಸದು ಒಬ್ಬ ಭಗವಂತನಿಂದಲೇ ಸಕಲರೂ ಸೃಜಿಸಲ್ಪಟ್ಟು ರಕ್ಷಿತರಾಗಿರುವುದರಿಂದ ಜನರೆಲ್ಲರೂ ಏಕಕುಟುಂಬದವರಂತೆ ಇರಬೇಕಾದುದು ಪರಮಾವ