ಪುಟ:ಚಂದ್ರಮತಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹನ್ನೊಂದನೆಯ ಪ್ರಕರಣ ೫೯ - --- ... ಬೇಕೆಂಬ ಅಭಿಪ್ರಾಯದಿಂದ ಬಿಲ್ಲನ್ನೂ ಬಾಣಗಳನ್ನೂ ಧರಿಸಿ ಅದನ್ನು ಬೆನ್ನ ಟ್ಟಿದನು. ಅದು ಬೆದರಿ ಮಹಾವೇಗದಿಂದ ಓಡುತ್ತೆ ಆತನನ್ನು ಬಹುದೂರಕ್ಕೆ ಕರೆದುಕೊಂಡು ಹೋಗಿ ಕಡೆಗೆ ವಿಶ್ವಾಮಿತ್ರನ ಆಶ್ರಮಕ್ಕೆ ನುಗ್ಗಲು ಹರಿ ಶೃಂದ್ರನು ಬೇಸರಗೊಂಡು ಬಿಲ್ಲಿಗೆ ಬಾಣವನ್ನು ಹೂಡಿ ಅದನ್ನು ಪ್ರಯೋಗಿ ಸಿದನು. ಆದರೆ ಹುಲ್ಲೆಯಮರಿಯು ಅದನ್ನು ತಪ್ಪಿಸಿಕೊಂಡು ಅದೃಶ್ಯನಾ ಯಿತು. ಹರಿಶ್ಚಂದ್ರನು ಬಿಸಿಲಿನಲ್ಲಿ ಓಡಿ ಬಲುಬಳಲಿದ್ದುದರಿಂದ ವಾಹ ಗೊಂಡು ಸವಿಾನದಲ್ಲಿದ್ದ ಒಂದು ಸರೋವರದಲ್ಲಿ ಜಲನಾನಮಾಡಿ ತೀರ ದಲ್ಲಿದ್ದ ಒಂದು ವಟವೃಕ್ಷದ ನೆಳಲಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿ ದನು. ಇಷ್ಟರಲ್ಲಿ ಮಂತ್ರಿಯಾದ ನತ್ಯ ಕೀರ್ತಿಯೂ ಚಂದ್ರಮತಿಯ ನವರಿ ನಾರರಾಗಿ ಲೋಹಿತಾನ್ಯನನ್ನು ಕರೆದುಕೊಂಡು ಅಲ್ಲಿಗೆ ಬಂದರು. ಹರಿಶ್ಚಂದ್ರನು ವಿಶ್ರಮಿಸಿಕೊಳ್ಳುತ್ತಿರುವುದನ್ನು ವಿಶ್ವಾಮಿತ್ರನ ವನ ನಾಲಕಿಯರಾದ ಇಬ್ಬರು ಮಾತಂಗತರುಣಿಯರು ಕಂಡು ಆತನಿಂದ ಏನಾದರೂ ವಸ್ತ್ರಾಭರಣಗಳನ್ನು ಉಚಿತವಾಗಿ ತೆಗೆದುಕೊಂಡು ಬರಬೇ ಕೆಂದು ಹರಿಶ್ಚಂದ್ರನ ಬಳಿಗೆ ಬಂದು ತಮ್ಮ ಸಾಮರ್ಧ್ಯವನ್ನೆಲ್ಲ ತೋರಿಸಿ ಇಂನಾಗಿ ಹಾಡತೊಡಗಿದರು. ಅವರ ಗಾನವು ಆಹ್ಲಾದಕರವಾಗಿದುದ ರಿಂದ ಅರಸನು ಸ್ವಲ್ಪ ಕಾಲ ಅದನ್ನು ಕೇಳುತ್ತಿದ್ದು ಅವರಿಗೆ ತಕ್ಕ ಬಹು ಮಾನವನ್ನು ಕೊಟ್ಟು ಹೋಗಿರೆಂದು ಹೇಳಿದನು. ಆ ತರುಣಿಯ ರಾದರೋ ಅರಸನ ದಿವ್ಯಸುಂದರವಾದ ರೂಪವನ್ನು ಕಂಡು ಕಾಮ ನರ ನಶೆಯರಾಗಿ ಮೈ ಮರೆತು ಉಚಿತಾನುಚಿತವಿವೇಕವಿಲ್ಲದೆ ಆ ಹಣವನ್ನು ತೆಗೆದುಕೊಳ್ಳದೆ ಆತನ ಸಂಗವನ್ನು ಹೊಂದುವ ಇಚ್ಛೆಯಲ್ಲದೆ ಮತ್ತೆ ಬೇರೆ ಯಾವ ಇಚ್ಛೆಯೂ ಇಲ್ಲವೆಂದೂ, ತಮ್ಮ ಮನೋರಧವನ್ನು ಪೂರ್ತಿಗೊಳಿಸಿ ತಮ್ಮನ್ನು ಕಾಪಾಡಬೇಕೆಂದೂ ಲಜ್ಜೆಯಿಲ್ಲದೆ ಕೇಳಿ ಕೊಂಡರು. ಇಂತಹ ಅನುಚಿತವಾದ ಪ್ರಾರ್ಥನೆಯನ್ನು ಕೇಳಿ ಅರಸ ನಿಗೆ ಅವರಮೇಲೆ ಆಗ್ರಹವುಂಟಾಗಲು ಆತನು ಅವರನ್ನು ಕೋಪದೃಷ್ಟಿ ಯಿಂದ ನೋಡುತ್ತೆ ತತ್‌ಕ್ಷಣವೇ ಅಲ್ಲಿಂದ ಹೊರಟುಹೋಗಿರೆಂದು ಗರ್ಜಿ ಸಿದನು. ಆ ಸ್ತ್ರೀಯರು ಆಗಲೂ ತಮ್ಮ ಚಲವನ್ನು ಬಿಡದೆ ತಮ್ಮ ಮನೋರಥವನ್ನು ಪೂರ್ತಿಮಾಡಿದಲ್ಲದೆ ಅಲ್ಲಿಂದ ಹೊರಡುವುದಿಲ್ಲವೆಂದು