ಪುಟ:ಚಂದ್ರಮತಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ, ತನ್ನ ಶಿಷ್ಯರಲ್ಲಿ ಒಬ್ಬನನ್ನು ಕರೆದು ತತ್ಕ್ಷಣವೇ ಆ ಪಟ್ಟಣದ ರಾಜನ ಬಳಿಗೆ ಕಳುಹಿಸಿದನು. ಕೆಲಹೊತ್ತಿನೊಳಗಾಗಿ ಅರಸನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿವರ್ಗದೊಡನೆ ರುದ್ರಭೂಮಿಗೆ ಬಂದನು. ಆಗ ಸಮಸ್ತ ಜನರೂ ಕೇಳುತ್ತಿರಲು ವಿಶ್ವಾಮಿತ್ರನು ಆ ದಂಪತಿಗಳೇ ಚಂದ್ರ ಮತೀ ಹರಿಶ್ಚಂದ್ರರೆಂದೂ, ತನಗೂ ವಸಿಷನಿಗೂ ಸಂತವುಂಟಾಗಿ ಅವರಿಂದ ಅಸತ್ಯವನ್ನಾಡಿಸಬೇಕೆಂದು ತಾನು ಅವರನ್ನು ಹಲವುಬಗೆಯಾಗಿ ಶ್ರಮ ಗೊಳಿಸಿ ಕಡೆಗೆ ತಾನೇ ಪರಾಜಿತನಾದೆನೆಂದೂ, ಚಂದ್ರಮತಿಯು ನಿರಪರಾ ಧಿನಿಯೆಂದೂ, ಅರ್ಧರಾತ್ರೆ ಸಮಯದಲ್ಲಿ ತಾನೇ ತನ್ನ ಶಿಷ್ಯರಿಂದ ರಾಜಾಂ ತಃಪುರಕ್ಕೆ ಕನ್ನವನ್ನು ಹಾಕಿಸಿ ರಾಜಪುತ್ರನನ್ನು ತರಿಸಿದೆನೆಂದೂ, ಆ ಮಗು ವಿನ ಆಭರಣಗಳನ್ನು ಆಕೆಯುಡಿಯಲ್ಲಿ ಹಾಕಿ ಬಳಿಕ ರಾಜಭಟರನ್ನು ಕರೆ ತಂದು ಅವಳನ್ನವರ ಅಧೀನೆಯನ್ನಾಗಿ ಮಾಡಿದವನು ತನ್ನ ಶಿಷ್ಯನೇ ಎಂದೂ, ನಂಬುಗೆಯುಂಟಾಗುವಂತೆ ಹೇಳಿ, ಆ ಕುಮಾರನನ್ನು ಕರೆಯಿಸಿ ಅರಸನಿಗೆ ಸಮರ್ಪಿಸಿದನು. ರಾಜನೂ ವಿಸ್ಮಿತನಾಗಿ ಆ ದಂಪತಿಗಳನ್ನೂ ವಿಶ್ವಾಮಿತ್ರ ನನ್ನೂ ಬಹುವಿಧವಾಗಿ ಶ್ಲಾಘಿಸಿ ಹರಿಶ್ಚಂದ್ರನನ್ನಾಲಿಂಗಿಸಿದನು. ಆಗ ಅಲ್ಲಿ ನೋಡುವುದಕೋಸುಗ ಬಂದಿದ್ದವರಲ್ಲಿ ಕಾಲಕೌಶಿಕನೂ, ವೀರಬಾಹುವೂ ಇದ್ದರು. ವಿಶ್ವಾಮಿತ್ರನು ಅವರಿಬ್ಬರನ್ನೂ ಅರಸನ ಸಮ್ಮುಖಕ್ಕೆ ಕರೆ ತಂದು, ಅವರಿಂದ ತೆಗೆದುಕೊಂಡಿದ್ದ ಹಣವನ್ನು ಅವರಿಗೆ ಹಿಂತಿರುಗಿಸಿ, ಚಂದ್ರಮತೀ ಹರಿಶ್ಚಂದ್ರರನ್ನು ದಾಸ್ಯದಿಂದ ವಿಮುಕ್ತರನ್ನಾಗಿ ಮಾಡಿದನು. ತರುವಾಯ ಸರ್ಪದಷ್ಟನಾಗಿ ಮೂರ್ಛಿಯನ್ನು ಹೊಂದಿ ಮೃತನಾದಂತೆ ಮಲಗಿದ್ದ ಲೋಹಿತಾಸ್ಯನ ಬಳಿಗೆ ಹೋಗಿ ತನ್ನ ಸವಿಾಪದಲ್ಲಿದ್ದ ದಿವೌಷಧ ಗಳನ್ನು ಪ್ರಯೋಗಿಸಿ ಆತನನ್ನು ಸಜೀವನನ್ನಾಗಿ ಮಾಡಿ ಚಂದ್ರಮತಿ ಹರಿ ಶೃಂದ್ರರಿಗೆ ಅಪರಿಮಿತಾನಂದವನ್ನುಂಟುಮಾಡಿಸಿದನು. ಆಗಳಲ್ಲಿಗೆ ಬಂದಿ ದ್ದವರೆಲ್ಲರೂ ಚಂದ್ರಮತೀ ಹರಿಶ್ಚಂದ್ರರ ಧೈರ್ಯಸ್ಥೆರ್ಯಗಳಿಗೂ, ಧರ್ಮಪರಾಯಣತೆಗೂ ಮೆಚ್ಚಿ ಬಗೆಬಗೆಯಾಗಿ ಕೊಂಡಾಡಿದರು. ಕೆಲ ದಿನಗಳಲ್ಲಿ ಅವರ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸಿತು. ಅಷ್ಟರಲ್ಲಿ ಆ ಕಾಶೀದೇಶದ ರಾಜನು ಚಂದ್ರಮತೀ ಹರಿಶ್ಚಂದ್ರರನ್ನು ತನ್ನ ಹಿಂದೆ ಕರೆದು ಕೊಂಡುಹೋಗಿ ಕೆಲದಿನಗಳವರೆಗೂ ತನ್ನ ಮನೆಯಲ್ಲಿಟ್ಟು ಕೊಂಡಿದ್ದು, ಸರ್ವವಿಧಗಳಲ್ಲಿಯೂ ಅವರನ್ನು ಸತ್ಕರಿಸಿ, ಅವರಿಗೆ ತನ್ನ ಸೈನ್ಯವನ್ನು