ಪುಟ:ಚಂದ್ರಶೇಖರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ ೧೫೧ ಗುರಗಣಖಾನನು ತನ್ನ ಸ್ಥಿತಿಯನ್ನು ವೃದ್ಧಿಯನೈದಿಸಿಕೊಳ್ಳುವುದಕ್ಕೋಸ್ಕರ ಯೋಚಿಸಿಕೊಂಡು ಇಸ್ಪಹಾನದೇಶದಿಂದ ಬಂಗಾಳೆ ದೇಶಕ್ಕೆ ಬಂದನು. ದನಿಯು ವಿಾರ ತಾಸಿವುನ ಮನಗೆ ದಾನಿಯಾಗಿ ಪ್ರವೇಶಿಸಿದಾಗ ಇಬ್ಬರೂ ಪರಸ್ಪರ ಉಪಕಾರಾರ್ಥವಾಗಿ ಪ್ರತಿಜ್ಞೆಯಿಂದ ಬದ್ಧರಾದರು ಎಂದು ಹೇಳಿ, ಅನಂತರ ತಾನೂ ದಳವಿಯ ಆ ರಾತ್ರಿ) ಗುರಗಣಖಾನನ ಮನೆಗೆ ಹೋಗಿ ಅಲ್ಲಿ ನಡೆದ ವೃತ್ತಾಂತವನ್ನೆಲ್ಲಾ ಸವಿಸ್ತಾರವಾಗಿ ಹೇಳಿ ದಳು, ಅನಂತರ ಅವನ ಮನೆಯಿಂದ ಹಿಂದಿರುಗಿದುದು, ಪುನಃ ಅರಮನೆಗೆ ಪ್ರವೇಶಕ್ಕೆ ಅಡ್ಡಿಯಾದುದು, ಬ್ರಹ್ಮಚಾರಿಯ ಸಹಾಯ, ಪ್ರತಾಪನ ಮನೆಯಲ್ಲಿದ್ದುದು, ಇಂಗ್ಲೀ ಪರು ಬಂದು ಆಕ್ರಮಣ ಮಾಡಿದುದು, ಶೈವಲಿನಿಯೆಂಬ ಭ್ರಮೆಯಿಂದ ದಳನಿಯನ್ನು ಹಿಡಿದುಕೊಂಡು ಹೋದುದು, ನೌಕದಲ್ಲಿ ಕಾರಾಗೃಹವಾಸ, ಅಮಿಯಟ ಮುಂತಾದ ವರ ಮರಣ, ಫಾಸ್ಟರನ ಸಂಗಡ ಓಡಿಹೋದುದು, ಕಡೆಗೆ ಗಂಗಾ ತೀರದಲ್ಲಿ ದಳನಿಯನ್ನು ಫಾಸ್ಟರನು ತ್ಯಜಿಸಿದುದು, ಈ ಸಕಲ ವೃತ್ತಾಂತಗಳನ್ನೆಲ್ಲಾ ಹೇಳಿ ಮುಗಿಸಿದಳು. ಪುನಃ, ಆ ಸಮಯದಲ್ಲಿ ನನಗೆ ವಿಶಾಚಿ ಹಿಡಿದಿತ್ತು. ಇಲ್ಲದಿದ್ದರೆ ನಾನು ದಳನಿಯನ್ನು ಏತಕ್ಕೆ ಬಿಟ್ಟು ಹೋಗುತಲಿದೆ ? ನಾನು ಆ ಪಾಪಿಷ್ಠನಾದ ಫಿರಂಗಿಯ ಕಪ್ಪವನ್ನು ನೋಡಿ ಮನಸ್ಸಿನಲ್ಲಿ ಅವನನ್ನು -ಆ ಮಾತು ಹೋಗಲಿ, ನಿಜಾಮರ ನಕವು ಹಿಂದೆ ಬ ರುತ್ತದೆ, ಬೇಗನನ್ನು ಕರೆದುಕೊಂಡು ಹೋಗುವುದೆಂದು ತಿಳಿದುಕೊಂಡು ಹೋದೆನು. ಇಲ್ಲದಿದ್ದರೆ ದಳನಿಯನ್ನು ಏತಕ್ಕೆ ಬಿಟ್ಟುಹೋಗುತಲಿದ್ದೆ ? ಆದರೆ ಅದಕ್ಕೆ ನನಗೆ ತಕ್ಕ ಪ್ರಾಯಶ್ಚತ್ರವಾಯಿತು, ಬೇಗವನ್ನು ಹಿಂದಿಟ್ಟು, ಫಾಸ್ಟರನನ್ನು ಕುರಿತು, ನನ್ನನ್ನು ಇಳಿಸು, ನಾನು ಇಳಿಯುವೆನೆಂದು ಹೇಳಿಕೊಂಡೆನು, ಆದರೆ ನನ್ನನ್ನು ಇಳಿಸಲಿಲ್ಲ, ಕಲಿ ಕತ್ರೆಗೆ ಹೋಗಬೇಕೆಂದು ಕೇಳಿದೆ. ದಾರೂ ಏನೂ ಹೇಳಲಿಲ್ಲ. ಅಲ್ಲಿ ಹೇಸ್ಟಿಂಗ್ಗು ಬಹಳ ದಯಾಪರನೆಂದು ಕೇಳಿದ್ದೆ. ಅದು ಕಾರಣ ಅಲ್ಲಿಗೆ ಹೋಗಿ ನನ್ನ ಗೋಳನ್ನು ಹೇಳಿಕೊಂಡೆ. ಅವನು ದಯಮಾಡಿ ಕಳುಹಿಸಿದ್ದಾನೆ, ಈಗ ನನ್ನ ವಧೆಗೆ ಸಿದ್ಧಪಡಿ ಸಿರಿ, ಬಂದಿದ್ದೇನೆ. ನಾನು ಇನ್ನು ಬದುಕಿರುವುದಕ್ಕೆ ಇಲ್ಲವೆಂದಳು, ಹೀಗೆಂದು ಹೇಳಿ ಕುಲಸಂ ಅಳುವುದಕ್ಕೆ ತೊಡಗಿದಳು. ಬಹುಮೂಲ್ಯವುಳ್ಳ ಸಹಸ್ರಾರು ರಶ್ಮಿ ಪತಿಘಾತಿಗಳಾದ ರತ್ನ ರಾಜಿಗಳಿಂದಲಂಕೃತ ವಾದ ಸಿಂಹಾಸನದ ಮೇಲೆ ಬಂಗಾಳಾ ದೇಶದ ನಬಾಬನು ಅಧೋವದನನಾಗಿದ್ದಾನೆ. ಈ ದೊಡ್ಡ ಸಮಾಜೃಂದ ರಾಜದಂಡವು ಅವನ ಕೈಯಿಂದ ಸ ಲಿತವಾಗಿ ಬೀಳುತ್ತದೆ. ಎಷ್ಟು ಪ್ರಯತ್ನ ಪಟ್ಟರೂ ನಿಲ್ಲದು. ಆದರೆ ಯಾವದು ಅಜೇಯ ರಾಜ್ಯವಾಗಿತ್ತೋಪ್ರಯತ್ನವಿಲ್ಲದೆ ಯಾವದು ಶಾಶ್ವತವಾಗಿತ್ತೋ, ಆ ರಾಜ್ಯವು ಎಲ್ಲಿ ಹೋಯಿತು ! ಅವನು ಕುಸುಮವನ್ನು ಬಿಟ್ಟು ಕಂಟಕಕ್ಕೆ ಕೈಹಾಕಿದನು, ಕುಲಸವುಳು ಯಥಾರ್ಥ ವಾಗಿ ಹೇಳಿದಳು, ಏನೆಂದರೆ :- ಬಂಗಾಳೆ ನಬಾಬನು ಮರ್ಖನೆಂದು ! ನಬಾಬನು ಉಮಾ) ಮುಂತಾದವರನ್ನು ಕುರಿತು, ನೀವು ಕೇಳಿರಿ, ಈ ರಾಜ್ಯವು