ಪುಟ:ಚಂದ್ರಶೇಖರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಂದ್ರಶೇಖರ. ರ್ಜಾರ್ಸ- ಯಾರಿಗೆ ಪೇದೆಮಾತಾಯಿತು? ಅಳುವು ಕ್ರಮವಾಗಿ ವಿಕಟವಾಯಿತು, ಆದರೆ ಧ್ವನಿಯು ವಿಕಟವಾಗಿರಲಿಲ್ಲ. ಆ ಜಲಭೂಮಿಯು ನಿಶ್ಯಬ್ಧವಾದ ಪ್ರಾಂತರ ಮಧ್ಯೆ ಆ ಅರ್ಧರಾತ್ರಿಯಲ್ಲಿ ಅಳುವು ವಿಕ ಟವಾಗಿ ಕೇಳಿಬಂದಿತು. ಅಮಿನಟನು ಆಟವನ್ನು ಬಿಟ್ಟೆದು , ಹೊರಗೆ ಬಂದು, ನಾಲ್ಕು ಕಡೆಯೂ ನೋಡಿ ದನು. ಯಾರೂ ಕಾಣಿಸಲಿಲ್ಲ. ಹತ್ತಿರ ಎಲ್ಲಿಯೂ ಸ್ಮಶಾನವಿರಲಿಲ್ಲ. ಸೈಕತಭೂಮಿ ಯ ಮಧ್ಯಭಾಗದಿಂದ ಶಬ್ದವು ಕೇಳಿಸುತಲಿತ್ತು. ಅಮಿಯನು ಹಡಗಿನಿಂದಿಳಿದು ಶಬ್ದವನ್ನು ಅನುಸರಿಸಿಕೊಂಡು ಅದು ಬರುತಲಿದ್ದ ದಿಕ್ಕಿನಲ್ಲಿ ಹೋದನು. ಸ್ವದೂರ ಹೋಗಿ ನೋಡಲಾಗಿ ಯಾರೊ ಆ ಮರಳುಭೂಮಿ ಯ ಮಧ್ಯದಲ್ಲಿ ಕೂತಿದ್ದ ಹಾಗೆ ಕಂಡಿತು. ಅಮಿಯುಟನು ಹತ್ತಿರ ಹೋಗಿ ನೋಡಿದನು. ಒಬ್ಬ ಹೆಂಗಸು ಕುಳಿತುಕೊಂಡು ಗಟ್ಟಿಯಾಗಿ ಅಳುತ್ತಿದ್ದಳು. ಅಮಿನಟನಿಗೆ ಹಿಂದೀ ಭಾಷೆ ಚೆನ್ನಾಗಿ ಬಾರದು, ಹೆಂಗಸನ್ನು ಕುರಿತು, ಆ ಮಾ ತಿನಲ್ಲಿ, ನೀನು ಯಾರು ? ಏತಕ್ಕೆ ಅಳು? ಎಂದು ಕೇಳಿದನು. ಹೆಂಗಸಿಗೆ ಹಿಂದೀ ಭಾಷೆ ಬಾರದು, ಅವನು ಕೇಳಿದ್ದುದು ಗೊತ್ತಾಗದೆ ಮತ್ತಷ್ಟು ಗಟ್ಟಿಯಾಗಿ ಅಳುವು ದಕ್ಕೆ ತೊಡಗಿದಳು. ಅಮಿದುಟನು ಎಷ್ಟು ತಡವೆ ಕೇಳಿದರೂ ಏನೊಂದುತ್ತರವೂ ಬಾರದೆ ಕಡೆಗೆ ಕೈಸನ್ನೆ ಮಾಡಿ ತನ್ನ ಜತೆಯಲ್ಲಿ ಬರುವಹಾಗೆ ಹೇಳಿದನು. ರಮಣಿಯು ಎದ್ದಳು. ಅಮಿದು ಟನು ಮುಂದೆ ಮುಂದೆ ಹೋದನು. ಹೆಂಗಸು ಅಳುತ, ಅಳುತ, ಅವನ ಹಿಂದ ಹೋದ ಳು. ಇವಳು ಮತ್ತಾರೂ ಅಲ್ಲ, ಸಾಮಿಪೈದಾದ ಕೈವಲಿನೀ.

  1. •,