ಪುಟ:ಚೆನ್ನ ಬಸವೇಶವಿಜಯಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ? ಚನ್ನಬಸವೇಶವಿಜಯಂ (೪೦ರ ೩) [ಅಧ್ಯಯ ಅರ್ಹನಾಗಿ ಇಲ್ಲಿ ಇರುತ್ತಿರುವುದಿಲ್ಲವೆ ? ಇನ್ನೇನಾಗಬೇಕು ? ಯಾವ ಯಜ್ಞದಲ್ಲಿ ಶಿವನಿಗೆ ಅಗ್ರಹವಿಸ್ಸು ಕೊಡಲ್ಪಡುವುದಿಲ್ಲ; ಅವನು ತಾನು ಸನು; ಅವನು ಸಹ್ಯಾರಕಾರಣನು; ತಲೆ ಬುರುಡೆಯನ್ನು ಹಿಡಿದು ನಗ್ತಾ? ಗಿಯಾಗಿರುವ ವಿಕಾರಿ; ಅದುಕಾರಣ ಅವನು ಪೂಜ್ಯನಲ್ಲ, ಸರ್ವವಿಧದಿಂ ದಲೂ ಸಾತಿಕನಾದ ಈ ನಾರಾಯಣನೇ ಲೋಕರಕ್ಷಕನು; ಅಗ್ರಪೂ ಜೆಗೆ ಅರ್ಹನು ೨” ಎಂದು ಶಿವನನ್ನು ತಿರಸ್ಕರಿಸಿದನು. ಆ ಕೂಡಲೇ ಖಯ ವಿಗೆ ಕೋಪವೇರಿತು. ಕೆಂಗಣ್ಣನ್ನು ಬಿಟ್ಟು, ಯಾಗಶಾಲೆಯಲ್ಲಿ ಕುಳಿತಿ ದ್ದ ಎಲ್ಲ ಗವಿಗಳನ್ನೂ ದೇವತೆಗಳನ್ನೂ ನೋಡಿದನು. ಮತ್ತೂ ಕೈಯೆ ತಿ-“ ಎಲ್ಲಿ ಪೂಜ್ಯರಾದವರ ಪೂಜೆಯು ತಪ್ಪಿ ಹೋಗಿ ಅಯೋಗ್ಯರಿಗೆ ಪೂಜೆಯಾಗುವುದೋ, ಉತ್ತಮರಿಗೆ ತಿರಸ್ಕಾರವೂ, ಅಧಮರಿಗೆ ಪುರಸ್ಕಾ ರವೂ ಎಲ್ಲಿ ನಡೆಯುವುದೋ, ಆ ಸ್ಥಲಕ್ಕೆ ತಕ್ಕ ಶಿಕ್ಷೆಯನ್ನು ದೈವವು ಉಂಟುಮಾಡುವುದು, ಈ ಯಾಗವು ಶಿವನನ್ನು ಬಿಟ್ಟು ಆಚರಿಸಲ್ಪಡು ವುದು, ಅದು ಕಾರಣ, ಇದು ಶಿವಪಯುಕ್ತವಾದುದು, ಇದಕ್ಕೆ ಸಹಾ ಯಕರಾಗಿ ಬಂದಿರುವವರೆಲ್ಲರೂ ಶಿವದೇಸಿಗಳೇ ಆದರು, ಯಾವಾಗ ಶಿವನನ್ನು ಇವರೆಲ್ಲರೂ ತಿರಸ್ಕರಿಸಿದರೋ ಅದರಿಂದಲೇ ಅವನಿಗೆ ಅಗ್ರಭಾ ಗಮನ ಕೊಡಬೇಕೆಂದು ವಿಧಿಸುವ ವೇಗವನ್ನೂ ದೇಸಿದಂತೆಯೇ ಆ ಯಿತು, ಅದು ಕಾರಣ, ಶಿವರಹಿತವಾದ ಈ ಯಾಗವು ಹಾಳಾಗಲಿ; ಇದಕ್ಕೆ ಸಹಾಯಕರಾಗಿ ಬಂದಿರುವವರಿಗೆಲ್ಲ ಅಜ್ಞಾನವಾವರಿಸಲಿ; ಎಲ್ಲರೂ ಪರಿ ಭವಗೊಳ್ಳಲಿ; ವೆದಬಾಹ್ಯರಾಗಿ ಕಲಿಯುಗದಲ್ಲಿ ಹುಟ್ಟಿ, ಶಿವನನ್ನು ದೂ ಪಿಸಿ ನರಕಗಾಮಿಗಳಾಗಲಿ ?” ಎಂದು ಶಪಿಸಿ, ಥಟ್ಟನೆ ಯಾಗಶಾಲೆಯನ್ನು ಬಿಟ್ಟು ಹೊರಟನು. ಅನೇಕ ಮನ್ನಿಸೋಮವು ಎದ್ದು ಅವನೊಡನೆಯೇ ಹೊರಟು ಹೋಯಿತು, ಅವರೆಲ್ಲ ಹೋದರೆ ಹೋಗಲಿ ಯೆಂದು ನಿಂದಿಸಿ, ದಕ್ಷನು ಯಜ್ಞಕಾವನ್ನು ಮುಂದೆ ಸಾಗಿಸುತ್ತಿದ್ದನು. ವಿಞ್ಞಾದಿಗಳ ಲ್ಲರೂ ತಮ್ಮ ತಮ್ಮ ನಿಯುಕ್ತಕಾರವನ್ನು ನೆರವೇರಿಸುತ್ತಿದ್ದರು. ನಾರ ದನು ಇದೆಲ್ಲವನ್ನೂ ನೋಡಿ ಶಿವನಿಗೆ ಬೆನ್ನೆಸಬೇಕೆಂದು ಕೈಲಾಸಕ್ಕೆ ಬಂ ದು, ಪಾರಸಮೇತನಾಗಿ ಕುಳಿತಿರುವ ಪರಶಿವನಿಗೆ ನಮಸ್ಕರಿಸಿ, ದಕ್ಷನ ಕಪಟಿಯಾಗದ ಆಂತಸಂಗತಿಯನ್ನೂ ಬಿನ್ನೈಸಿದನು, ಶಿವನು