ಪುಟ:ಚೆನ್ನ ಬಸವೇಶವಿಜಯಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀರಿ. ಸ್ಕರಿಸಿದವನೇ ಪುಣ್ಯಶಾಲಿ, ಇದಿರಿಗೆ ಮಾತಾಡಿದವನೇ ವೀರಶೈವಮಾರ್ ಸಂಪನ್ನ, ಪ್ರಸಾದವಚನಮಂ ಪಡೆದವನೇ ಅಚ್ಯುತ, ಪ್ರಾರ್ಥಿಸಿದವನೇ ಇಷ್ಟಾರ್ಥಪೂರ್, ಸೋತ್ರಮಾಡಿದವನೇ ಜಗದಿನುತ, ಪಾದಸೇವೆಯಂ ಮಾಡಿದವರೇ ಲೋಕೈಕಸೇವನೆನಿಸಿಕೊಳ್ಳುತ್ತಿದ್ದನು, ಎಂದ ಬಳಿಕ, ಆ ಮಹಾಗುರುವಿನ ಪ್ರಭಾವವನ್ನೆಂದು ಹೇಳಬಹುದು ! ಅಂತಪ್ಪ ಗುರುವಿನ ಕರಕಮಲದಲ್ಲಾಧ್ಯವಿಸಿದ ವಿರೂಪಾಕ್ಷಪಂಡಿತಾ ರಾಧ್ಯನು ಕರ್ಣಾಟಾದಿಭಾಷೆಗಳಲ್ಲಿ ವಿಶಾರದನಾಗಿ, ವರಕವಿಗಳಿಂದ ಸ್ಮ ರಿಸಲ್ಪಡುತ್ತ, ಪರಮವೀರಶೈವಾಚಾರಸಂಪನ್ನನಾಗಿ, ಗಾಂಭೀರೌದಾ Pಾದಿಸದ್ದು ಣಮಣಿಕರಂಡನಾಗಿ ರಾಜಿಸುತ್ತಿದ್ದನು. ಆ ಪಂಡಿತೋತ್ತಮನ ಬಳಿಗೆ ಅನೇಕ ಭಕ್ತ ಸಂಕುಲವು ಬಂದು ನಮಸ್ಕರಿಸಿ ಎಲೈ ವಿಬುಧವರೇಣ್ಣನೆ ! ಶಿವಲಿಂಗಪೂಜೆಯಲ್ಲಿ ಆ ಯತ್ತವಾದ ಚಿತ್ಯವೂ, ಆತ್ಮ ಸುಖಾರ್ಥವಾಗಿ ಶಿವಸ್ತುತಿಗಳಂ ಮಾಡುವಿಕೆ ಯ, ಬೇಡುವವರ ಮನೋಭಾವವನ್ನು ತಿಳಿದು ದಾನಮಾಡುವಿಕೆಯೂ, ಕುಶಲರನ್ನು ಮೆಟ್ಟಿಸುವ ವಾಗ್ಗೆ ಖರಿಯ, ಶಿವನನ್ನು ಒಲಿಸುವ ಪಟ್ಟಿ ಲಾಚರಣೆಯೂ ನಿನ್ನಲ್ಲಲ್ಲದೆ ಇನ್ನಾರಿಗಿರುವುದು ? ಶಿವನನ್ನಲ್ಲದೆ ಮತ್ತೊ? ದು ದೈವವನ್ನು ನುತಿಸವ-ಪೂಜಿಸದ-ಭಕ್ತಿಯಿ) ನೋಡದ-ಆ ಪರಶಿವನ ಕಥೆಯಲ್ಲದೆ ಅನ್ಯ ಕಥೆಯನ್ನು ಹೇಳದ-ಶಿವಪ್ರಸಾದವಲ್ಲದೆ ಇತರದೈವಗ್ರ ಸಾವವನ್ನು ಸ್ವೀಕರಿಸನ-ಬಿರುದು ಭೂಮಿಯಲ್ಲಿ ನಿನಗಲ್ಲದೆ ಮತ್ತಾರಿಗೆ ಸಲ್ಲುವುದು ? ಭೂಮಿಯಲ್ಲಿ ನಾನೂ ಕವಿಗಳೆಂದು ಹೇಳಿಕೊಳ್ಳುತ್ತ, ಈ ಪದ್ದಕ್ಕರ್ಥವೇನೆಂದು ಕೇಳಿದರೆ, ಕಿವಿಮೇಲೆ ಕೈಯಿಟ್ಟು, ಮೇಲೆ ಕೆ ಳಗೆ ನೋಡುತ್ತ ಕೊನೆಗೆ ಏನನ್ನೂ ತಿಳಿಯದೆ ತಲೆಬಗ್ಗಿಸಿ ಕುಳಿತುಕೊ ಇುವ ದುಶ್ಯಕವಿಗಳೆಲ್ಲ ವರಕವಿಗಳಾದಾರೆ? ವರಕವಿಗಳ ನಾಲಿಗೆ ಕಿವಿ ಮ ನಸ್ಸುಗಳನ್ನೆಲ್ಲ ಸೆಳೆದುಕೊಳ್ಳುವ ನಿನ್ನಂಥ ಶಕ್ತಿಯುಳ್ಳವನೇ ಸತ್ಯ ವಿ. ಈ ಭೂಮಿಯಲ್ಲಿ ಸಕಲ ಶಿವಶರಣರ ಚರಿತ್ರವನ್ನೂ ಕವಿಗಳು ರಚಿಸಿರುವರು; ಆದರೆ ಚೆನ್ನ ಬಸವೇಶನ ಚರಿತ್ರವನ್ನು ಮಾತ್ರ ಯಾರೂ ರಚಿಸಿರುವುದಿಲ್ಲ. ಅದನ್ನು ನೀನು ವಿರಚಿಸಬೇಕು ?” ಎಂದು ಬಿನ್ನಯಿಸಿಕೊಂಡರು. ಅವರಿ ಹೃಪ್ರಕಾರವಾಗಿ ಪಂಡಿತೋತ್ತಮನಾದ ಆವಿರೂಪಾಕ್ಷ ಕವಿಯು ವಕ್ಷ