ಪುಟ:ಚೆನ್ನ ಬಸವೇಶವಿಜಯಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷಶಿರಚ್ಛೇದನರ a೫ ಬಿಳುವುದಕ್ಕೆ ಅಪ್ಪಣೆ ಕೊಟ್ಟು ಕಳುಹಿದನು. ಅಷ್ಯರಲ್ಲಿ ವಿರೇಶನ ಕಡೆಯ ಶಾಕಿನಿ ಡಾಕಿನಿ ಭೂತ ಬೇತಾಳ ಪೈಶಾಚಾದಿಗಳೆಲ್ಲರೂ ಯಾಗ ಶಾಲೆಯನ್ನು ಮುರಿಯುತ್ತಲೂ, ಕದಗಳನ್ನು ನಗುತ್ತಲೂ, ಬೆಂಕಿಯ ೩ಕ್ಕುತ್ತಲೂ ಬರುತ್ತಿದ್ದರು, ದಕ್ಷನ ಸೈನ್ಯವು ಅವರ ಮೇಲೆ ಬಿದು ಕಾದಾಡಹತ್ತಿತು. ಉಭಯಸೇನೆಗೂ ಕ್ಷಣಕಾಲದಲ್ಲಿ ಘೋರಯುದ್ಧ ವಾಯಿತು, ಆಯುಧಗಳ ಪ್ರಹಾರದಿಂದ ರಾಕ್ಷಸರುಗಳು ಕಡಿವಡೆದು ನೀ ಲಗಿರಿಗಳಂತೆ ಬಿದ್ದು ಕೊಂಡರು. ರಕ್ಕಸರ ಹೊಟ್ಟೆಗಳನ್ನು ಶಾಕಿನಿ ಡಾ ಕಿನಿಯರು ಬಗಿದು ಕರುಳ್ಳನ್ನು ಚೆಲ್ಲಾಡಿದರು. ಶುಂಭ ನಿಶುಂಭ ಧೂ ಮಾಕ ಮೊದಲಾದ ಮಹಾವೀರರಾಕ್ಷಸರು ತಮ್ಮ ಸೇನೆಯಲ್ಲುಂಟಾದ ಹಾನಿಯನ್ನು ಕಂಡು, ರಕ್ತಾಕ್ಷರಾಗಿ, ವೀರನ ಸೈನ್ಯದಮೇಲೆ ಗಿರಿಗಳ ನ್ಯೂ ಮರಗಳನ್ನೂ ಎಸೆದು ನುಗ್ಗು ಮಾಡುತ್ತ ತರುಬಿಕೊಂಡು ವೀರೇಶನ ನ್ನು ಸಂಧಿಸಿದರು. ಕಾ೪ವನು ಇವರನ್ನು ಕಂಡು, ದಕ್ಷನ ಸಾಹಸ ವನ್ನು ಮಗ್ಗುಲಲ್ಲಿರುವ ಹರಿಗೆ ತೋರಿಸಿ, ನಸುನಕ್ಕು, ಧನುರ್ಬಾಣಗ ಳನ್ನು ತೆಗೆದುಕೊಂಡು, ಪ್ರತಿಯೊಬ್ಬ ರಾಕ್ಷಸೇಶರನಿಗೂ ಅವರವರ ರಾನುಸಾರವಾಗಿ ಬಾಣಗಳನ್ನೆಣಿಸಿ ಪ್ರಯೋಗಿಸಿದನು. ಕ್ಷಣಾರ್ಧದಲ್ಲಿ ರಾಕ್ಷಸಸೋಮವು ಮಬ್ಬುಹರಿದ ಆಕಾಶದಂತ ಬಯಲಾಯಿತು, ಓ ಡುವವರು ಓಡಿದರು, ನೀರಿನಲ್ಲಿ ಮುಳುಗುವವರು ಮುಳುಗಿದರು. ಪ ಶು ಪಕ್ಷ ಮೃಗಗಳ ರೂಪವನ್ನು ಧರಿಸಿ ಅವಿತುಕೊಳ್ಳುವವರು ತಲೆತ ಪ್ಪಿಸಿಕೊಂಡರು. ಕೆಲರು ಓಡಿಹೋಗಿ ದಕ್ಷನಿಗೆ ಈ ಸುದ್ದಿಯನ್ನು ತಿಳು ಹಿದರು. ಅಸ್ಟ್ರಲ್ಲಿ ವೀರೇಶನು ಕೂಡ ಇನ್ನು ತಡಮಾಡಬಾರದೆಂದು ಯೋಚಿಸಿ ಪತ್ನಿ ಸಮೇತನಾಗಿ ರಥದಿಂದಿಳಿದು ಕೈಕತ್ತಿಯನ್ನು ಜಳ ವಿನಿ, ಧಿಂಕಿಡುತ್ತ ಬೊಬ್ಬಿರಿದು ಯಾಗಮಂಟಪದೊಳಗೆ ನುಗ್ಗಿ ದನು ಹಿಂದೆ ಮುಂದೆ ವಾದ್ಯಕ್ಷನಿಗಳೂ ಸ್ತುತಿಪಾಠಕರ ಉದ್ಯೋಪವೂ ಮೊ ರೆಯುತ್ತಿದ್ದು ವು, ಕೂಡಲೇ ವಿರೇಶನು ಬಾಗಿಲಲ್ಲಿ ನಿಂತಿದ್ದ ಭೈರವನಿಗೆ ತೇಜೋವಧೆಯನ್ನು ಮಾಡಿ, ಉಳಿದ ಕಾವಲುಗಾರರನ್ನು ನೆಲಕ್ಕೆ ಬೀ ಳುವಂತೆ ಬಡಿದು, ಚೌಡೇಶ್ವರಿಯ ಕಿವಿಯನ್ನು ಕಿತ್ತು, ಲಕ್ಷ್ಮಿಯ ಮುಂ ದಿಯುನ್ನ ಕತ್ತರಿಸಿ, ಸರಸ್ವತಿಯ ಮೂಗನ್ನು ಕೊಯ್ದು, ಶಚೀದೇವಿ