ಪುಟ:ಚೆನ್ನ ಬಸವೇಶವಿಜಯಂ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܙܘ̈ܩ ಚೆನ್ನಬಸವೇಶವಿಜಯಂ, (ಕಾಂಗ ೩) [ಅಧ್ಯಾಯ ಕಾಣುತ್ತಿದ್ದನು. ದೇವತೆಗಳು ಕೊಳಗಳಲ್ಲಿಳಿದು ಮೊಗೆಯುತ್ತಲೂ ಒ ಬ್ಬರನ್ನೊಬ್ಬರು ಚಂಡುಗಳಿಂದಲೂ ಚೀಝಳವೆಯಿಂದಲೂ ಅಂಡೆಗಳ೦ ದಲೂ ಅಭಿಷೇಕಗೊಳಿಸುತ್ತಲೂ, ಬಾಸುಳೇಳುವಂತೆ ಗುರಿಕಟ್ಟಿ ಅಂಡೆಗ ೪ಂದ ಹೊಡೆಯುತ್ತಲೂ, ಏಟನ್ನು ತಪ್ಪಿಸಿಕೊಂಡು ಮತ್ತೆ ತಿರುಗಿ ಇದಿ ರಾಳಿಗೆ ಹೊಡೆಯತ್ತಲೂ, ಒಬ್ಬರನ್ನೊಬ್ಬರು ಹಂಗಿಸುತ್ತಲೂ, ಸಂತೋ ಪದಿಂದ ಕೇಕೆ ಹಾಕುತ್ತಲೂ, ಬೆನ್ನಟ್ಟಿ ಓಡಿಸಿಕೊಂಡುಹೋಗಿ ತಲೆಯ ಮೇಲೆ ಓಕುಳಿಯನ್ನು ಸುರಿಯುತ್ತಲೂ, ಮುಹೂರ ಕಾಲದೊಳಗಾಗಿ ಕೋಳವನ್ನು ಬರಿದು ಮಾಡಿದರು. ನಾರಿಯರು ಓಕುಳಿಯಿಂದ ನಾಂದು ಜೋಲುಬಿದ್ದ ಕೇಶಪಾಶದಿಂದಲೂ, ದೇಹಕ್ಕೆ ಹತ್ತಿದ ಪೀತಾಂಬರಗ ೪೦ದಲೂ, ಚಳಿಯಿಂದ ನಡುಗುತ್ತಿರುವ ಗಲ್ಲಿಗಳಿಂದಲೂ, ರೋಮಸಿಗೆ ದು ಕುಲುಕುತ್ತಿರುವ ಅಂಗಗಳಿಂದಲೂ, ಬಳ್ಳುವ ನಡುವಿನಿಂದಲೂ, ಸಳೆ ದ ಕೈಕಾಲ್ಗಳಿಂದಲೂ, ಬೆಳಮುಖದಿಂದಲೂ ಒಪ್ಪುತ್ತ, ನೋಟಗಾರ `ರ ಕಣ್ಣಿಗೆ ಹೊಸಬಗೆಯ ಒಂದು ನೋಟವನ್ನುಂಟುಮಾಡಿದ್ದರು. ಬ೪ ಕ ಎಲ್ಲರೂ ಬೇಸತ್ತು ಹೊರಟು ಅಣಿಯಾಗಿದ್ದ ಬಿಸಿನೀರನ್ನು ಮಿಂದು ಮೈ ಯೊರಸಿ, ಮಡಿಯ ವಸ್ತ್ರಗಳನ್ನು ಟ್ಟು, ಆಭರಣಗಳನ್ನು ತೊಟ್ಟು, ಕ ಝರತಾಂಬೂಲವನ್ನು ಸವಿದು, ಶಿವನ ಬಡೋಲಗಕ್ಕೆ ಬಂದರು. ಅಮ್ಮ ರೊಳಗೆ ಪಾರತೀಪರಮೇಶರೂ ಪರಿಮಳಜಲಸಾನಗೊಂಡು ವಸ್ತ್ರ ಭೂಷಣಾದಿಗಳಿಂದಲಂಕೃತರಾಗಿ ಭದ್ರಾಸನವನ್ನಲಂಕರಿಸಿದ್ದರು. ಸಭಿ ಕರ ಸೇವೆಯನ್ನು ಪರಿಗ್ರಹಿಸಿದ ಬಳಿಕ ಶಿವನು ಗಿರಿರಾಜನ ಅರಮನೆಗೆ ಬಂದನು. ಮಾವನು ಅಳಿಯನಿಗೆ ಅನರ್ಘವಾದ ವನ್ನಾಭರಣಗಳನ್ನೂ ಗಜಾಶಾದಿಗಳನ್ನೂ ಕಾಣೆಯಾಗಿ ಕೊಟ್ಟು, ತನ್ನ ಮಗಳಿಗೆ ಜಯ ವಿಜ ಯ ಮೊದಲಾದ ಆಪ್ತಸಖಿಯರ ಸಂಕುಲವನ್ನೂ, ಅವೀತಾಂಬರ ಭೂಷಣಗಳನ್ನೂ, ಅರೂರತರಗೋಕುಲವನ್ನೂ ಬಳುವಳಿಯಾಗಿತ್ತನು. ಶಿವನು ತನ್ನ ಸಕಲ ಪುನಾರದೊಡನೆ ಯಥಾವಿಭವದಿಂದ ಕೈಲಾಸದಕಡೆ ಗೆ ತಿರುಗಿದನು. ಗಿರಿರಾಜಮೇನಕಿಯರು ಸಕಲವೈಭವದಿಂದ ಒಡನೆ ಕೆ ಲದೂರದವರೆಗೂ ಹೋಗಿ, ಅಲ್ಲಿ ನಿಂತರು. ಶಿವನು ಗಿರಿರಾಜಮೇನಕಿಯ ರನ್ನು ಉಚಿತವಚನಗಳಿಂದ ಮರಾದಿಸಿ ಹಿಂದಕ್ಕೆ ಕಳುಹಿಕೊಟ್ಟನು. ಆ